ಫಸ್ಟ್ ನೈಟ್ ಅಪಹರಣ ಪ್ರಕರಣಕ್ಕೆ ತಿರುವು: ಸ್ವಇಚ್ಛೆಯಿಂದ ಹೋಗಿದ್ದೆ
Team Udayavani, Oct 11, 2018, 7:34 PM IST
ಕೊಪ್ಪಳ : ಮದುವೆಯಾದ ಹದಿನೈದು ದಿನಗಳ ಬಳಿಕ ಗೊತ್ತುಪಡಿಸಲಾಗಿದ್ದ ಫಸ್ಟ್ ನೈಟ್ ನಲ್ಲೇ ನಡೆಯಿತೆನ್ನಲಾಗಿದ್ದ ವಧುವಿನ ಕುತೂಹಲಕರ ಅಪಹರಣ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.
“ನನ್ನನ್ನು ಯಾರೂ ಕಿಡ್ ನ್ಯಾಪ್ ಮಾಡಿಲ್ಲ; ನಾನೇ ಖುದ್ದಾಗಿ, ಸ್ವ ಇಚ್ಛೆಯಿಂದಲೇ ಹೋಗಿದ್ದೆ’ ಎಂದು ನವ ವಿವಾಹಿತೆ ಗಾಯತ್ರಿ ಸ್ಪಷ್ಟಪಡಿಸಿದ್ದಾರೆ.
“ನಾನು ಈ ಮೊದಲೇ ಅಂಜು ಕುಮಾರ್ ಎಂಬವರನ್ನು ಮದುವೆಯಾಗಿದ್ದೆ; ಆದರೆ ಅವರು ಕಟ್ಟಿದ್ದ ತಾಳಿಯನ್ನು ಕಿತ್ತು ಹಾಕಿ ನನಗೆ ಸೋದರ ಮಾವನ ಜತೆಗೆ ಬಲವಂತದಿಂದ ಮದುವೆ ಮಾಡಿಸಿದ್ದರು. ಇದು ನನಗೆ ಇಷ್ಟವಿಲ್ಲದ ಮದುವೆಯಾಗಿತ್ತು; ಹಾಗಾಗಿ ಫಸ್ಟ್ ನೈಟ್ ಗೊತ್ತುಪಡಿಸಲಾಗಿದ್ದ ರಾತ್ರಿಯೇ ನಾನು ನನ್ನ ಮೊದಲ ಪತಿ, ಅಂಜು ಕುಮಾರ್ ಗೆ ಫೋನ್ ಮಾಡಿ ನನ್ನನ್ನು ಕರೆದೊಯ್ಯುವಂತೆ ಕೇಳಿಕೊಂಡೆ. ಆದುದರಿಂದ ಯಾರೂ ನನ್ನನ್ನು ಅಪಹರಿಸಿಲ್ಲ; ನಾನೇ ಸ್ವಂತ ಇಚ್ಛೆಯಿಂದ ಹೋಗಿದ್ದೆ; ನನಗೆ ನನ್ನ ಮೊದಲ ಪತಿ ಅಂಜುಕುಮಾರ್ ಜತೆಗೆ ಬದುಕಲು ಬಿಡಿ’ ಎಂದು ನವವಿವಾಹಿತೆ ಗಾಯತ್ರಿ ಬೇಡಿಕೊಂಡಿರುವುದಾಗಿ ವರದಿಯಾಗಿದೆ.
ಕಳೆದ ಸೆ.24ರಂದು ಗುಡೂರು ಗ್ರಾಮದ ಗಾಯತ್ರಿ ಮತ್ತು ಮಲ್ಲನಗೌಡ ಅವರ ವಿವಾಹವನ್ನು ಕುಟುಂಬದವರ ಸಮಕ್ಷಮ ಕುಷ್ಟಗಿತಾಲೂಕಿನ ಪುರದ ಸೋಮನಾಥ ದೇವಸ್ಥಾನದಲ್ಲಿ ನಡೆಸಲಾಗಿತ್ತು.
ಫಸ್ಟ್ ನೈಟ್ ನಂದು ಶೌಚಾಲಯಕ್ಕೆ ಹೋಗಿದ್ದಾಗ ವಧು ವನ್ನು ಅಪಹರಿಸಲಾಗಿತ್ತು ಎಂದು ಸುದ್ದಿಯಾಗಿರುವುದು ಸುಳ್ಳು ಎಂದು ಗಾಯತ್ರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ