ಕಲ್ಲಿದ್ದಲು ಪೂರೈಕೆ ಕುಸಿತ: ಆರ್ಟಿಪಿಎಸ್ನ 6 ಘಟಕ ಸ್ಥಗಿತ
Team Udayavani, Oct 21, 2018, 6:40 AM IST
ರಾಯಚೂರು: ಗಣಿ ಕಂಪನಿಗಳಿಂದ ಕಲ್ಲಿದ್ದಲು ಪೂರೈಕೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡ ಹಿನ್ನೆಲೆಯಲ್ಲಿ ಶನಿವಾರ ರಾಯಚೂರು ಶಾಖೋತ್ಪನ್ನ ಕೇಂದ್ರದ ಆರು ಘಟಕಗಳು ಸ್ಥಗಿತಗೊಂಡಿವೆ.
ಈಗ ಒಂದು ಮತ್ತು ಐದನೇ ಘಟಕ ಮಾತ್ರ ಚಾಲನೆಯಲ್ಲಿದ್ದು, ಕೇವಲ 357 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಒಂದನೇ ಘಟಕದಿಂದ 190 ಮೆಗಾವ್ಯಾಟ್ ಉತ್ಪಾದಿಸುತ್ತಿದ್ದರೆ, ಐದನೇ ಘಟಕದಿಂದ 197 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈಚೆಗೆ ಶುರುವಾದ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಒಂದನೇ ಘಟಕ ಸ್ಥಗಿತಗೊಂಡಿದ್ದು, ಎರಡನೇ ಘಟಕದಿಂದ 361 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಮಧ್ಯೆ, ವಿದ್ಯುತ್ಗೆ ಬೇಡಿಕೆಯಿದ್ದರೂ ಕಲ್ಲಿದ್ದಲು ಸಮಸ್ಯೆ ಕಾಡುತ್ತಿದೆ ಎಂದು ಅ ಧಿಕಾರಿಗಳು ತಿಳಿಸಿದ್ದಾರೆ.