“ಕನ್ನಡದ ಜಗದ್ಗುರು”ವಾದ ಸಿಂದಗಿಯ ಸಿದ್ದರಾಮ


Team Udayavani, Oct 21, 2018, 6:10 AM IST

181020kpn57.jpg

ವಿಜಯಪುರ: ಕನ್ನಡದ ಜಗದ್ಗುರು ಎಂದೇ ಖ್ಯಾತಿ ಪಡೆದಿದ್ದ ಗದಗ-ಡಂಬಳ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ಸಿದ್ದಲಿಂಗ ಶ್ರೀಗಳು ಬಸವೈಕ್ಯರಾದ ಸುದ್ದಿ ತಿಳಿಯುತ್ತಲೇ ಶ್ರೀಗಳ ತವರು ಜಿಲ್ಲೆ ವಿಜಯಪುರದಲ್ಲಿ ಶೋಕ ಮಡುಗಟ್ಟಿದೆ. ಹುಟ್ಟೂರು ಸಿಂದಗಿ ಪಟ್ಟಣದ ಹಿರೇಮಠದಲ್ಲಿ ದುಃಖದ ಕಟ್ಟೆ ಒಡೆದಿದೆ.

1949ರ ಫೆ.21ರಂದು ಸಿಂದಗಿಯ ಹಿರೇಮಠದ ಮರಯ್ಯ ಹಾಗೂ ಶಂಕರಮ್ಮ ಅವರ ದ್ವಿತೀಯ ಪುತ್ರನಾಗಿ ಜನಿಸಿದ್ದ ಸಿದ್ದರಾಮ ಎಂಬ ಮಗು ಭವಿಷ್ಯದಲ್ಲಿ ಕನ್ನಡ ನಾಡೇ ಕನ್ನಡದ ಜಗದ್ಗುರು ಎಂದು ಕರೆಯುವ ಮಟ್ಟಿಗೆ ಬೆಳೆದು ನಿಂತಿದ್ದನ್ನು ತವರಿನ ಜನ ಸ್ಮರಿಸುತ್ತಾರೆ. ಹೆತ್ತವರ ಊರು ಸಿಂದಗಿ ಪಟ್ಟಣವಾದರೂ, ಗರ್ಭಿಣಿಯಾಗಿದ್ದ ತಾಯಿ ಶಂಕರಮ್ಮ ಅವರು ತಮ್ಮ ಅಕ್ಕ ಶಿವಬಯಿ ಅವರ ಊರು ಕೋರವಾರಕ್ಕೆ ಹೋದಾಗ ಸಿದ್ದರಾಮರ ಹೆರಿಗೆ ಆಗಿತ್ತು. ಹೀಗಾಗಿ, ಕೋರವಾರದ ಜನರು ಶ್ರೀಗಳು ನಮ್ಮೂರಲ್ಲಿ ಜನ್ಮ ಪಡೆದ ಪುಣ್ಯಭೂಮಿ ಎಂದು, ಇದನ್ನೇ ಅವರ ಹುಟ್ಟೂರು, ತವರು ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಸಿದ್ದರಾಮರು ಮಲ್ಲಿಕಾರ್ಜುನ ಎಂಬ ಅಣ್ಣ, ಕುಮಾರಸ್ವಾಮಿ, ಪತ್ರಕರ್ತ ಶಾಂತು ಹಿರೇಮಠ, ಸಿಂದಗಿ-ಹಾವೇರಿ ಮಠದ ಪೀಠಾಧಿಪತಿ ಶಿವಾನಂದ ಶ್ರೀಗಳು ಹಾಗೂ ಗಂಗಾಬಾಯಿ ಮತ್ತು ನಿರ್ಮಲಾ ಎಂಬ ಸಹೋದರಿಯರನ್ನು ಹೊಂದಿದ್ದ ದೊಡ್ಡ ಕುಟುಂಬದಿಂದ ಬಂದವರು.

ಸಿಂದಗಿ ಪಟ್ಟಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಲೇ ಎಸ್‌.ಎಂ.ಮಣೂರ ಅವರ ಮೆಚ್ಚಿನ ಶಿಷ್ಯನಾಗಿ ಹೊರ ಹೊಮ್ಮಿದ್ದ ಸಿದ್ದರಾಮರು, ಶಿಕ್ಷಣದ ಪಠ್ಯ ಪುಸ್ತಕವನ್ನೆಲ್ಲ ಬಾಯಿ ಪಾಠ ಮಾಡಿ ನಿರರ್ಗಳವಾಗಿ ಹೇಳುವ ಛಾತಿ ಹೊಂದಿದ್ದರು. ನಂತರ, ಹುಬ್ಬಳ್ಳಿಯ ಮೂರುಸಾವಿರ ಮಠದ ಗಂಗಾಧರ ರಾಜಯೋಗೀಂದ್ರ ಶ್ರೀಗಳ ಕೃಪೆಯಲ್ಲಿ ಉನ್ನತ ಶಿಕ್ಷಣ ಪಡೆದು, ಕನ್ನಡದಲ್ಲಿ ಪ್ರಾವೀಣ್ಯತೆ ಪಡೆದರು. ಅಷ್ಟರಲ್ಲಾಗಲೇ ಅವರು ಸಿಂದಗಿ ಊರಿನ ಹಿರೇಮಠದ ಶಾಂತವೀರ ಶ್ರೀಗಲು ಲಿಂಗೈಕ್ಯರಾದ ಕಾರಣ ಪಟ್ಟಾ ಧಿಕಾರಕ್ಕೆ ನಿಯೋಜಿತರಾಗಿದ್ದರು.

ಆದರೆ, ಸಿದ್ದರಾಮರು ಶಿಸ್ತು, ಸಂಯಮ, ಬದ್ಧತೆ, ಆಧ್ಯಾತ್ಮಿಕ ಚಿಂತನೆ, ಸಾಹಿತ್ಯ ಅಧ್ಯಯನದ ಗೀಳು, ವಿಜ್ಞಾನ, ಮನೋವಿಜ್ಞಾನ, ಭೂಗರ್ಭ, ಗಣಿತ, ವಚನ ಸಾಹಿತ್ಯದ ಸಂಶೋಧನೆಯಲ್ಲಿ ಆಳವಾದ ಅರಿವು, ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಹುಚ್ಚು ಹಿಡಿದವರಂತೆ ಅದ್ಭುತ ಪ್ರತಿಭೆ ಸಂಪಾದಿಸಿದ್ದರು. ಇವರಲ್ಲಿನ ಪ್ರತಿಭೆಯನ್ನು ಗುರುತಿಸಿದ ಮೂರುಸಾವಿರ ಮಠದ ಗಂಗಾಧರ ರಾಜಯೋಗೀಂದ್ರರು, ಸಿದ್ದರಾಮ ದೇವರನ್ನು ಸಿದ್ದಲಿಂಗ ಮಹಾಸ್ವಾಮಿಗಳೆಂದು ನಾಮಕರಣ ಮಾಡಿ ಗದಗ ತೋಂಟದಾರ್ಯ ಮಠಕ್ಕೆ ಪೀಠಾಧಿಕಾರಿಗಳನ್ನಾಗಿ ನೇಮಿಸಿದರು.

ನಿಯೋಜಿತ ಸಿಂದಗಿ ಹಿರೇಮಠದ ಬದಲಾಗಿ ಗದಗ ತೋಂಟದಾರ್ಯ ಮಠಕ್ಕೆ ಪಟ್ಟಾಧಿಕಾರಕ್ಕೆ ನೇಮಿಸಿದಾಗ ಸಿಂದಗಿ ಹಿರೇಮಠದ ಭಕ್ತರು ಸಿಂದಗಿ ಮಠವನ್ನು ಅನಾಥವಾಗಿ ಮಾಡಿದಿರಿ ಎಂದು ಮರುಗಿದರು. ಬಳಿಕ, ಶ್ರೀಗಳ ಪೂರ್ವಾಶ್ರಮದ ತಮ್ಮ ಶಿವಾನಂದ ಶ್ರೀಗಳನ್ನು ಸಿಂದಗಿ-ಹಾವೇರಿ ಮಠಕ್ಕೆ ಪೀಠಕ್ಕೆ ನೇಮಿಸಲಾಯಿತು. ಗದಗ-ಡಂಬಳ ಮಠಕ್ಕೆ ಪೀಠಾ ಧೀಕಾರಕ್ಕೆ ಬರುತ್ತಲೇ ಶ್ರೀಗಳಲ್ಲಿದ್ದ ವೈಚಾರಿಕ ಪ್ರಜ್ಞೆ ಜಗತ್ತಿಗೆ ಪರಿಚಯವಾಗತೊಡಗಿತು. ಕನ್ನಡದಲ್ಲಿ ಅದರಲ್ಲೂ, ವಚನ ಸಾಹಿತ್ಯದ ವೈಚಾರಿಕ ವಿಷಯಗಳನ್ನು ವೈಜ್ಞಾನಿಕ ಪ್ರಜ್ಞೆ ಮೂಲಕ ವಿಶ್ಲೇಷಿಸುವ ಪರಿ ನಾಡಿನ ಕನ್ನಡ ಸಾಹಿತ್ಯ ವಲಯದ ಗಣ್ಯರನ್ನೂ ಹುಬ್ಬೇರಿಸುವಂತೆ ಮಾಡಿತು.

ತಮ್ಮ ಪ್ರವಚನದಿಂದ ಬಂದ ಹಣವನ್ನು ಮಠಕ್ಕೆ ಖರ್ಚು ಮಾಡದೆ, ಅಪ್ರಕಟಿತ ವಚನ ಸಾಹಿತ್ಯ ಮುದ್ರಣಕ್ಕೆ ವಿನಿಯೋಗಿಸಿದರು. ಲಿಂಗಾಯತ ಧರ್ಮ ಪ್ರಸಾರಕ್ಕಾಗಿ ಪ್ರತ್ಯೇಕ ಟ್ರಸ್ಟ್‌ ರಚಿಸಿ ಅದರ ಮೂಲಕ ಸಾಹಿತ್ಯದ ಪ್ರಸಾರಕ್ಕೆ ತಮ್ಮನ್ನು ಮುಡಿಪಾಗಿ ಇರಿಸಿಕೊಂಡರು. ಪರಿಣಾಮ ಡಾ| ದ.ರಾ.ಬೇಂದ್ರೆ, ಬೀಚಿ, ಕಾರಂತ ಅವರಂಥ ನಾಡಿನ ದಿಗ್ಗಜ ಸಾಂಸ್ಕೃತಿಕ ಅತಿರಥ-ಮಹಾರಥರು ಇವರ ಒಡನಾಟಕ್ಕೆ ಬಂದರು.

ಸಿದ್ದಲಿಂಗ ಜಗದ್ಗುರುಗಳಿಗೆ ವಿವಿಧ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ಪದವಿ ನೀಡಿ ಹಿರಿಮೆ ಹೆಚ್ಚಿಸಿಕೊಂಡವು. ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡ ನಾಡಿನ ಜನತೆ ಡಾ| ಸಿದ್ದಲಿಂಗ ಶ್ರೀಗಳನ್ನು ಕನ್ನಡದ ಜಗದ್ಗುರು ಎಂದೇ ಪ್ರೀತಿ, ಅಭಿಮಾನದಿಂದ ಕರೆದರು.

– ಜಿ.ಎಸ್‌. ಕಮತರ

ಟಾಪ್ ನ್ಯೂಸ್

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bhuvanam gaganam Teaser: ಭುವನಂ ಗಗನಂ ಟೀಸರ್‌ ಬಂತು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Bharjari Gandu: ಟ್ರೇಲರ್‌ನಲ್ಲಿ ಭರ್ಜರಿ ಗಂಡು

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Vande Bharat: 1.5 ವರ್ಷದಲ್ಲಿ ವಂದೇ ಭಾರತ್‌ಗೆ 50 ಬಾರಿ ಕಲ್ಲೆಸೆತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.