ಮೊಬೈಲಿನಲ್ಲೂ ನುಡಿ ತಂತ್ರಾಂಶ


Team Udayavani, Nov 1, 2018, 9:33 AM IST

b-47.jpg

ಬೆಂಗಳೂರು: ಸದ್ಯ ಪ್ರಚಲಿತದಲ್ಲಿರುವ ನುಡಿ ತಂತ್ರಾಂಶದ ಲೋಪದೋಷಗಳನ್ನು ಸರಿಪಡಿಸಿ, ಯೂನಿಕೋಡ್‌ನ‌ಂತೆ ಮೊಬೈಲ್‌ ಹಾಗೂ ಕಂಪ್ಯೂಟರ್‌ಗೆ ಸರಿಹೊಂದಿರುವ ನುಡಿ 0.6 ತಂತ್ರಾಂಶ ಸಿದ್ಧವಾಗಿದ್ದು, ನವೆಂಬರ್‌ ಅಂತ್ಯದೊಳಗೆ ಕನ್ನಡಿಗರಿಗೆ ಲಭ್ಯವಾಗಲಿದೆ. ನುಡಿ ತಂತ್ರಾಂಶದಲ್ಲಿ ಕೀಲಿಮಣಿ ಮಾಡಿದ ಅಕ್ಷರ, ಪದ ಮತ್ತು ವಾಕ್ಯಗಳನ್ನು ಎಂಎಸ್‌ ವರ್ಡ್‌ ಅಥವಾ ಬೇರ್ಯಾವುದಾದರೂ ಡಾಕ್‌ ಫೈಲ್‌ ಮೂಲಕ ಓಪನ್‌ ಮಾಡಬೇಕು. ನುಡಿ ತಂತ್ರಾಂಶ ಗಣಕನಲ್ಲಿ ಅಳವಡಿಸಿಕೊಂಡಿದ್ದರೆ ಮಾತ್ರ ನುಡಿ ಕೀಲಿಮಣೆಯ ಬರಹಗಳು ಕಾಣಿಸುತ್ತದೆ. ನುಡಿ ತಂತ್ರಾಂಶ ಇಲ್ಲದ ಕಂಪ್ಯೂಟರ್‌ನಲ್ಲಿ ನುಡಿ ಓದಲು ಮತ್ತು ಬರೆಯಲು ಸಾಧ್ಯವಿಲ್ಲ. ಹೀಗಾಗಿ ನುಡಿ ತಂತ್ರಾಂಶವನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ. 

ನುಡಿಯಲ್ಲಿರುವ ಬರಹಗಳನ್ನು ಇನ್ಮುಂದೆ ಯೂನಿಕೋಡ್‌ ಮಾದರಿಯಲ್ಲಿ ಎಂಎಸ್‌ ವರ್ಡ್‌ ಅಥವಾ ಡಾಕ್‌ ಫೈಲ್‌ ಇಲ್ಲದೇ ನೇರವಾಗಿ ಓದಬಹುದಾಗಿದೆ. ಜತೆಗೆ ನುಡಿ ಅಕ್ಷರಗಳನ್ನು ಯೂನಿಕೋಡ್‌ಗೆ ಮತ್ತು ಯೂನಿಕೋಡ್‌ನಿಂದ ನುಡಿಗೆ ಪರಿವರ್ತನೆ ಮಾಡಬಹುದಾದ ವ್ಯವಸ್ಥೆಯನ್ನು ನುಡಿ 0.6 ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಕರ್ನಾಟಕ ಗಣಕ ಪರಿಷತ್ತಿನ ಅಧಿಕಾರಿಗಳು, ಸ್ವಾಫ್ಟ್ವೇರ್‌ ತಜ್ಞರ 
ಸಹಕಾರದೊಂದಿಗೆ ಕಳೆದ ಒಂದುವರೆ ವರ್ಷದ ಸತತ ಪರಿಶ್ರಮದಿಂದ ನುಡಿ 0.6 ತಂತ್ರಾಂಶ ಸಿದ್ಧಪಡಿಸಲಾಗಿದೆ. ನುಡಿ 0.6 ತಂತ್ರಾಂಶದ ಮೂಲಕ ಬರೆದಿರುವ ಬರಹಗಳನ್ನು ಯುನಿಕೋಡ್‌ ಮಾದರಿಯಲ್ಲಿ ಮೊಬೈಲ್‌ನಲ್ಲೂ ಓದಬಹುದಾಗಿದೆ. ಆದರೆ, ಮೊಬೈಲ್‌ಗೆ ನುಡಿ 0.6 ತಂತ್ರಾಂಶ ಅಳವಡಿಸಲು ಸಾಧ್ಯವಿಲ್ಲ. ನುಡಿ 0.6 ತಂತ್ರಾಂಶದಲ್ಲಿ ಆಡಳಿತ ಪದಕೋಶ ಹಾಗೂ ಇನ್ನಿತರೆ ಹಲವು ಹೊಸ ಅಂಶಗಳನ್ನು ಸೇರಿಸಲಾಗಿದೆ ಎಂದು ಪರಿಷತ್‌ನ ಕಾರ್ಯದರ್ಶಿ ಜಿ.ಎನ್‌. ನರಸಿಂಹಮೂರ್ತಿ ಮಾಹಿತಿ ನೀಡಿದರು.

ಅಭಿವೃದ್ಧಿಗೆ ಅವಕಾಶ : ನುಡಿ 0.6 ತಂತ್ರಾಂಶ ನವೆಂಬರ್‌ ಅಂತ್ಯದೊಳಗೆ ಸಾರ್ವಜನಿಕರ ಉಪಯೋಗಕ್ಕೆ ಬಿಡಲಾಗುತ್ತದೆ. ತಂತ್ರಾಂಶ ಸಂಪೂರ್ಣ ಪ್ರಮಾಣದಲ್ಲಿ ಸಿದಟಛಿವಾಗಿದ್ದು, ಪರೀಕ್ಷಾರ್ಥ ಬಳಕೆ ನಡೆಯುತ್ತಿದೆ. ಕರ್ನಾಟಕ ಗಣಕ ಪರಿಷತ್ತುವಿನ ಅಧಿಕೃತ ಜಾಲತಾಣದಲ್ಲಿ ನುಡಿ 0.6 ತಂತ್ರಾಂಶ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದನ್ನು ಇನ್ನಷ್ಟು ಉನ್ನತೀಕರಿಸಬೇಕು ಎಂದು ಕಂಡುಬಂದರೆ ಸಾರ್ವಜನಿಕರು ಸಲಹೆ ನೀಡಬಹುದು. ತಂತ್ರಾಂಶದ ಕುರಿತು ಅಧ್ಯಯನ ಮಾಡಿರುವವರು ಅಥವಾ ಬಲ್ಲವರು ತಾವಾಗಿಯೇ ಉನ್ನತೀಕರಿಸಬಹುದು. ಇದಕ್ಕಾಗಿ ಪರಿಷತ್‌ನ ಜಾಲತಾಣದಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯ ನಂತರ ಪರಿಷತ್‌ನ ಪರವಾನಗಿ ಪಡೆದು ಉನ್ನತೀಕರಿಸಿ, ನೀಡಬಹುದು. ಸೂಕ್ತವೆನಿಸಿದರೆ ಅದನ್ನು ಅಧಿಕೃತವಾಗಿ ಅಪ್‌ಡೇಟ್‌ ಮಾಡಲಾಗುತ್ತದೆ ಎಂದು ಗಣಕ ಪರಿಷತ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ದೂರುಗಳಿಗೂ ಪರಿಹಾರ: ನುಡಿ ತಂತ್ರಾಂಶ ಬಳಕೆ ಸೇರಿದಂತೆ ಯಾವುದೇ ಲೋಪದೋಷವಿದ್ದರೂ ಪರಿಷತ್‌ಗೆ ದೂರು ನೀಡಬಹುದು. ಪರಿಷತ್‌ನ ಅಧಿಕಾರಿಗಳು ಅದನ್ನು ಕೂಲಂಕಷವಾಗಿ ಪರಿಶೀಲಿಸಿ, ಸಮಸ್ಯೆಗೆ ಪರಿಹಾರ ನೀಡುತ್ತಾರೆ. ಸದ್ಯ ಇರುವ ನುಡಿ 0.5 ತಂತ್ರಾಂಶವನ್ನು ತಿಂಗಳಿಗೆ 6 ಸಾವಿರ ಜನರು ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಪರಿಷತ್‌ನಿಂದ ಸಿಕ್ಕಿದೆ. 0.6 ತಂತ್ರಾಂಶ ಬಂದ ನಂತರ ಹೊಸ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಗಣಕ ಪರಿಷತ್ತು ಮೂಲಕ ಪ್ರಚುರವಾದ ನುಡಿ ತಂತ್ರಾಂಶ ನುಡಿ 0.4, 0.5 ಈಗ 0.6 ಆಗಿ ವಿವಿಧ ಅವಸ್ಥೆಗಳನ್ನು ದಾಟಿ ಹೊಸ ರೂಪ ಪಡೆದಿದೆ. ತಂತ್ರಾಂಶ ಸಂಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದ್ದು, ಅನೇಕ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಉನ್ನತೀಕರಣಗೊಂಡ ತಂತ್ರಾಂಶದಲ್ಲಿ ಹೊಸ ಅವಕಾಶಗಳನ್ನೂ ತುಂಬಲಾಗಿದ್ದು, ನವೆಂಬರ್‌ ಅಂತ್ಯದೊಳಗೆ ಕನ್ನಡಿಗರ ಬಳಕೆಗೆ ಸಿಗಲಿದೆ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.