ಪಕ್ಷ ಬದಲಿಸಲ್ಲ: ಶಾಮನೂರು
Team Udayavani, Nov 4, 2018, 6:55 AM IST
ದಾವಣಗೆರೆ: ನಾನು ಉಪ ಮುಖ್ಯಮಂತ್ರಿನೂ ಆಗಲ್ಲ. ಪಾರ್ಟಿನೂ ಬದಲಿಸಲ್ಲ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ಬಿಜೆಪಿ ಆಫರ್ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಡಿಯರಪ್ಪನೂ ಕರೀತಾರೆ. ಎಲ್ಲಾರೂ ಕರೀತಾರೆ. ಆದ್ರೆ, ಹೋಗೋರು ಬೇಕಲ್ಲ ಎಂದರು. ಲೋಕಸಭೆ ಹಾಗೂ ವಿಧಾನಸಭೆಗೆ ನಡೆದಿರುವ ಐದೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ನಾನೂ ಸಹ ಶಿವಮೊಗ್ಗ ಹಾಗೂ ಬಳ್ಳಾರಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಎರಡೂ ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿ ಪರ ಉತ್ತಮ ಅಲೆ ಇದೆ. ಬಿಜೆಪಿಯವರು ನಮ್ಮವರೇ ಗೆಲ್ಲಲಿದ್ದಾರೆ ಎಂಬುದಾಗಿ ಹೇಳುತ್ತಾರೆ. ಆದರೆ, ಐದೂ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳೇ ಗೆಲ್ಲುತ್ತಾರೆಂಬ ವಿಶ್ವಾಸ ನಮ್ಮದು ಎಂದರು.