ಧಾರವಾಡದಲ್ಲಿ ಕಾರು-ಲಾರಿ ಮುಖಾಮುಖಿ; ಸಹೋದರರಿಬ್ಬರ ದಾರುಣ ಸಾವು
Team Udayavani, Nov 6, 2018, 12:23 PM IST
ಧಾರವಾಡ: ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮವಾಗಿ ಕಾರಿನಲ್ಲಿದ್ದ ಸಹೋದರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಮೃತ ದುರ್ದೈವಿಗಳು ಸಿದ್ದಲಿಂಗಪ್ಪ ಗಳೇಸಿಂಗಿ (33) ಮತ್ತು ಮಹೇಶ್ ಗುಳೇಸಿಂಗಿ ಎಂದು ತಿಳಿದು ಬಂದಿದೆ.
ಅವಘಡದಲ್ಲಿ ಲಾರಿ ಚಾಲಕನಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.