ಯಾರನ್ನೂ ಬಿಜೆಪಿಗೆ ಕರೆದೇ ಇಲ್ಲ: ರೇಣುಕಾಚಾರ್ಯ
Team Udayavani, Nov 12, 2018, 6:45 AM IST
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ, ಡಿ.ಕೆ.ಶಿವಕುಮಾರಣ್ಣ ಒಳಗೊಂಡಂತೆ ಯಾರನ್ನೂ ಬಿಜೆಪಿಗೆ ಬರುವಂತೆ ಕರೆದಿಲ್ಲ. ಪಕ್ಷಕ್ಕೆ ಬರುವಂತೆ ಕರೆದಿದ್ದಾರೆ ಎನ್ನುವುದು ಎಲ್ಲವೂ ಸುಳ್ಳು ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ಗೌರವ ಇದೆ. ಆದರೆ ಅವರು ಹೇಳಿರುವಂತೆ ಅವರನ್ನು ಪಕ್ಷಕ್ಕೆ ಕರೆದಿಲ್ಲ. ಉಪ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಹೇಳಿಯೂ ಇಲ್ಲ. ನಮ್ಮಲ್ಲೇ 104 ಪ್ರಾಮಾಣಿಕ ಶಾಸಕರು ಇದ್ದಾರೆ. ನಾವೇ 104 ಜನ ಇರುವಾಗ ಬೇರೆಯವರನ್ನು ಕರೆಯುವ ಮಾತೇ ಇಲ್ಲ ಎಂದರು.
ಕಣ್ಣೀರು ಹಾಕುವುದಕ್ಕೆ, ಮಾಟ-ಮಂತ್ರ ಅಂತ ಯಾವಾಗಲೂ ನಿಂಬೆಹಣ್ಣು ಇಟ್ಟುಕೊಂಡು ಓಡಾಡುವುದಕ್ಕೆ ಏನಾದರೂ ಡಾಕ್ಟರೇಟ್ ಕೊಡೋದು ಇದ್ದರೆ ಅದು ದೇವೇಗೌಡ ಮತ್ತವರ ಕುಟುಂಬಕ್ಕೆ ಕೊಡಬೇಕಾಗುತ್ತದೆ. ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣಗೆ ಶಿವಾನಂದ ಸರ್ಕಲ್ ಹತ್ತಿರ ಇರುವ ಕ್ವಾರ್ಟರ್ಸ್ ಮೇಲೆ ಆಸೆ ಇತ್ತು. ಅಲ್ಲಿದ್ದ ಮಾಜಿ ಮಂತ್ರಿಯೊಬ್ಬರನ್ನು ಏನೋ ಮಾಡಿ ಬಿಡಿಸಲಾಯಿತು. ರಿನೋವೇಷನ್ ಪ್ರಾರಂಭಿಸಲಾಯಿತು. ಆಗ ಯಾರೋ ರೇವಣ್ಣನಿಗೆ ಹೇಳಿದ್ದಂತೆ ಅಧಿವೇಶನ ನಡೆಯುತ್ತಿದ್ದರೂ ಪ್ರತಿ ದಿನ ಹಾಸನದಿಂದ ಬೆಂಗಳೂರಿಗೆ ಓಡಾಡಿದರು. ಅಧಿಕಾರ, ಕುರ್ಚಿ ಆಸೆಗಾಗಿ ನಿಂಬೆ ಹಣ್ಣು, ಮಾಟ-ಮಂತ್ರ ಅಂತ ಓಡಾಡುತ್ತಾರೆ. ಅದಕ್ಕೆ ಏನಾದರೂ ಡಾಕ್ಟರೇಟ್ ಕೊಡೋಡು ಇದ್ದರೆ ಅವರ ಕುಟುಂಬಕ್ಕೇ ಕೊಡಬೇಕಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!
Mollywood: ಸೂಪರ್ ಹಿಟ್ ʼಪ್ರೇಮಲುʼ ಸೀಕ್ವೆಲ್ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ
Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು