ಬದುಕಲು ಕಲಿಯಿರಿ’ ಖ್ಯಾತಿಯ ಸ್ವಾಮಿ ಜಗದಾತ್ಮಾನಂದ ಇನ್ನಿಲ್ಲ
Team Udayavani, Nov 16, 2018, 6:20 AM IST
ಬೆಂಗಳೂರು: ಬದುಕಲು ಕಲಿಯಿರಿ ಖ್ಯಾತಿಯ ಸ್ವಾಮಿ ಜಗದಾತ್ಮಾನಂದ(89) ಅವರು ಗುರುವಾರ ಸಂಜೆ ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ಪೊನ್ನಂಪೇಟೆ ರಾಮಕೃಷ್ಣಾ ಶಾರದಾಶ್ರಮ ಸ್ವಾಮೀಜಿಯಾಗಿದ್ದ ಅವರು,ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿಯೇ
ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಬರೆದಿದ್ದ “ಬದುಕಲು ಕಲಿಯಿರಿ’ ಪುಸ್ತಕ ಜನಪ್ರಿಯಗೊಂಡಿತ್ತು. ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ 11 ಗಂಟೆವರೆಗೆ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಹಾಗೂ ಮಧ್ಯಾಹ್ನ 1ಯಿಂದ ಪೊನ್ನಂಪೇಟೆ ರಾಮಕೃಷ್ಣ ಆಶ್ರಮದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು.
ಸಂಜೆ 5.30ಕ್ಕೆ ಪೊನ್ನಂಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. “ಬದುಕಲು ಕಲಿಯಿರಿ’ ಪುಸ್ತಕ 9 ಭಾಷೆಗಳಿಗೆ ತರ್ಜುಮೆಗೊಂಡಿದ್ದು, ಮೂರು ಲಕ್ಷಕ್ಕೂ ಹೆಚ್ಚು ಪ್ರತಿ ಮಾರಾಟವಾಗಿದೆ.