ಬಿಜೆಪಿಯಲ್ಲಿ ನಾ ಶಕ್ತಿಶಾಲಿ, ಕಾಂಗ್ರೆಸ್ನವರು ನಡುಗುತ್ತಿದ್ದಾರೆ!
Team Udayavani, Nov 17, 2018, 4:09 PM IST
ಕೊಪ್ಪಳ : ‘ನಾನು ಬಿಜೆಪಿಯಲ್ಲಿ ಬಹಳಷ್ಟು ಶಕ್ತಿ ಶಾಲಿಯಾಗಿ ಬೆಳೆದಿದ್ದೇನೆ.ನನ್ನನ್ನು ಕಂಡು ಕಾಂಗ್ರೆಸ್ ನಾಯಕರು ನಡುಗುತ್ತಾರೆ’ ಎಂದು ಶಾಸಕ ಶ್ರೀರಾಮುಲು ಅವರು ಹೇಳಿಕೆ ನೀಡಿದ್ದಾರೆ.
ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಶನಿವಾರ ಹಿರೇವಂಕಲಕುಂಟಾ ಹೋಬಳಿಯ ವಾಲ್ಮೀಕಿ ಮಹಾಸಭಾದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು ಈ ಹೇಳಿಕೆ ನೀಡಿದ್ದಾರೆ.
‘ಜನರ ಆಶೀರ್ವಾದ ದಿಂದ ನಾನು ಬಿಜೆಪಿಯಲ್ಲಿ ಬಹಳಷ್ಟು ಶಕ್ತಿಶಾಲಿಯಾಗಿದ್ದೇನೆ. ಅದಕ್ಕಾಗಿ ನನ್ನನ್ನು ಕಂಡರೆ ಕಾಂಗ್ರೆಸ್ ನಾಯಕರು ನಡುಗುತ್ತಾರೆ. ಈ ಶ್ರೀರಾಮುಲು ತೇಜೋವಧೆ ಮಾಡುವುದು ಯಾರಿಗೂ ಶೋಭೆ ತರುವ ಕೆಲಸ ಅಲ್ಲ’ ಎಂದರು.
‘ರಾಜಕೀಯ ಪಿತೂರಿಯಿಂದಲಾಗಿ ಜನಾರ್ದನ ರೆಡ್ಡಿ ಅವರನ್ನು ಬಂಧಿಸಲಾಗಿದೆ.ಇದರಲ್ಲಿ ಸರ್ಕಾರದ ನೇರ ಕೈವಾಡ ಇದೆ .ಮುಖ್ಯಮಂತ್ರಿಗಳು ರಾಜಕೀಯ ದ್ವೇಷದಿಂದ ಸೇಡು ತೀರಿಸಿಕೊಂಡಿದ್ದಾರೆ’ ಎಂದು ಕಿಡಿ ಕಾರಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಅವರ ವಿರುದ್ಧ ಸಹೋದರಿ ಜೆ.ಶಾಂತಾ ಅವರು ಭಾರೀ ಅಂತರದಿಂದ ಸೋತ ಬಳಿಕವೂ ನಾನು ಬಹಳಷ್ಟು ಶಕ್ತಿಶಾಲಿ, ಕಾಂಗ್ರೆಸ್ ನಾಯಕರು ನನ್ನನ್ನು ಕಂಡು ನಡುಗುತ್ತಾರೆ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ