ರೈತ ಮಹಿಳೆಗೆ ನೋಟಿಸ್‌


Team Udayavani, Nov 21, 2018, 6:00 AM IST

w-14.jpg

ವಿಜಯಪುರ: ಸಹಕಾರಿ ಬ್ಯಾಂಕ್‌ಗಳಿಂದ ಯಾವ ಸಾಲಗಾರರಿಗೂ ಸಾಲ ಮರುಪಾವತಿಗೆ ನೋಟಿಸ್‌ ನೀಡಿಲ್ಲ ಎಂದು ಸಿಎಂ ಕುಮಾರ ಸ್ವಾಮಿ ಹೇಳಿಕೊಳ್ಳುತ್ತಿದ್ದಾರೆ. ಆದರೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ರೈತ ಮಹಿಳೆಯೊಬ್ಬರಿಗೆ
ಕಟ್‌ ಬಾಕಿದಾರರೆಂದು ನೋಟಿಸ್‌ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರ ತಾಲೂಕಿನ ಹಡಗಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ಪಡೆದಿದ್ದ ಗೌರಾಬಾಯಿ ಗೌಡಪ್ಪ ಪಾಟೀಲ ಎಂಬ ರೈತ ಮಹಿಳೆಗೆ ನ. 15ರಂದು ಸಾಲ ಮರುಪಾವತಿಸಲು ನೋಟಿಸ್‌ ನೀಡಲಾಗಿದೆ. ಕೃಷಿ ಮಹಿಳೆ ಪಡೆದಿರುವ 29,200 ರೂ.ಸಾಲದ ಅಸಲು, 3,072 ರೂ.ಬಡ್ಡಿ ಸೇರಿ
30-11-2018ಕ್ಕೆ ಒಟ್ಟು 31,872 ರೂ.ಆಗಿದೆ. ಈ ನೋಟಿಸ್‌ ಮುಟ್ಟಿದ 7 ದಿನಗಳಲ್ಲಿ ಅಸಲು, ಬಡ್ಡಿ, ದಂಡದ ಬಡ್ಡಿ, ಇತರ ಖರ್ಚನ್ನೆಲ್ಲ ಭರಿಸುವಂತೆ ನೋಟಿಸ್‌ನಲ್ಲಿ ವಿವರಿಸಲಾಗಿದೆ.  ಒಂದೊಮ್ಮೆ, ನೋಟಿಸ್‌ ತಲುಪಿದ 7 ದಿನಗಳಲ್ಲಿ ಸಾಲ ಮರುಪಾವತಿ ಸದಿದ್ದರೆ ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ ಕಲಂ-70ರಂತೆ ಪಂಚಾಯತ್‌ ದಾವೆ ಹೂಡಲಾಗುತ್ತದೆ. ಅಲ್ಲದೆ, ಕೋರ್ಟ್‌ ಖರ್ಚು ವೆಚ್ಚಕ್ಕೆ ನೀವೇ ಜವಾಬ್ದಾರಿ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ. ನೋಟಿಸ್‌ನಲ್ಲಿ ನ.15 ಎಂದು ದಿನಾಂಕ ನಮೂದಿಸಿದ್ದರೂ ನೋಟಿಸ್‌ ನೀಡಿದ್ದು ಮಾತ್ರ ನ. 19ರಂದು. ನೋಟಿಸ್‌ ತಲುಪುವ ಮುನ್ನ ಸಹಕಾರಿ ಬ್ಯಾಂಕ್‌ ಅಧಿಕಾರಿ-ಸಿಬ್ಬಂದಿ ಕಂಡಲೆಲ್ಲ ಸಾಲ ಮರುಪಾವತಿಗೆ ಪೀಡಿಸುತ್ತಿದ್ದಾರೆ ಎಂದು ನೋಟಿಸ್‌ ಪಡೆದಿರುವ ಕೃಷಿ ಮಹಿಳೆಯ ಮಗ ಧನ್ಯಕುಮಾರ ಪಾಟೀಲ ದೂರಿದ್ದಾರೆ.

ಸದರಿ ಬ್ಯಾಂಕ್‌ನಿಂದ ಪಡೆದ ಸಾಲದಲ್ಲಿ ಸಿದ್ದರಾಮಯ್ಯ ಸರ್ಕಾರ ಮಾಡಿದ ಸಾಲ ಮನ್ನಾ ಹಣ 36 ಸಾವಿರ ರೂ.ನಲ್ಲಿ 28 ಸಾವಿರ ರೂ. ಗಳನ್ನು ಜಮೆ ಮಾಡಿಕೊಂಡಿದ್ದಾರೆ. ಅಲ್ಲದೆ, ಎರಡು ಪ್ರತ್ಯೇಕ ವಿಷಯದಲ್ಲಿ 8 ಸಾವಿರ ರೂ.ಠೇವಣಿ ಇರಿಸಿ ಕೊಂಡಿದ್ದಾರೆ. 1 ಸಾವಿರ ರೂ.ಕಟ್ಟಡ ಶುಲ್ಕ ಎಂದು ಕಡಿತ ಮಾಡಿದ್ದಾರೆ. ಇದರ ಹೊರತಾಗಿಯೂ ನಾವು ಬ್ಯಾಂಕ್‌ನಲ್ಲಿ ಕಟ್ಟಿರುವ ಪಿಗ್ಮಿ ಹಣ ಹಾಗೂ ಠೇವಣಿ ಹಣವನ್ನು ನಮ್ಮ ಸಾಲಕ್ಕೆ ಜಮೆ ಮಾಡಿಕೊಳ್ಳುವಂತೆ ಮಾಡಿಕೊಂಡ ಮನವಿಗೆ ಸ್ಪಂದಿಸದೆ ಕಿರುಕುಳ ನೀಡಲಾಗುತ್ತಿದೆ ಎಂದು ಗೌರಾಬಾಯಿ ಅವರ ಮಗ ಧನ್ಯಕುಮಾರ ದೂರಿದ್ದಾರೆ. ಆದರೆ, ಈ ಆರೋಪವನ್ನು ಸಂಘ ಅಲ್ಲಗಳೆದಿದೆ. ಹಡಗಲಿ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಅಶೋಕ ಪಾಟೀಲ ಮಾತನಾಡಿ, ಸದರಿ ಕೃಷಿ ಮಹಿಳೆ ನಮ್ಮ ಬಳಿ ಕೃಷಿ ಹಾಗೂ ಕೃಷಿಯೇತರ ಕೆಲಸಕ್ಕೆ ಎರಡು ಸಾಲ ಪಡೆದಿದ್ದಾರೆ.

ಕೃಷಿಯೇತರ ಸಾಲದ ಕಾಲ ಮಿತಿ ಮೀರಿರುವ ಕಾರಣ ಸಹಕಾರಿ ಬ್ಯಾಂಕ್‌ ನಿಯಮದಂತೆ ನೋಟಿಸ್‌ ನೀಡಲಾಗಿದೆ. ಇದರ ಹೊರತು ಕೃಷಿ ಅಥವಾ ಬೆಳೆ ಸಾಲಕ್ಕಲ್ಲ. ಜಿಲ್ಲೆಯ ಕೇಂದ್ರ ಸಹಕಾರಿ ಬ್ಯಾಂಕ್‌ ಸೂಚನೆ ಮೇರೆಗೆ ಠೇವಣಿ ಸಂಗ್ರಹಿಸಲಾಗಿದೆ. ನಮ್ಮ ಸಹಕಾರಿ ಸಂಘಕ್ಕೆ ನಮ್ಮ ಅವಧಿಯಲ್ಲಿ ಕಟ್ಟಡ ನಿರ್ಮಿಸುವ ಸಲುವಾಗಿ ಸಹಕಾರಿ ಸಂಘದಲ್ಲಿರುವ 960 ಸಹಕಾರಿ ಸದಸ್ಯರಲ್ಲಿ 945 ಸದಸ್ಯರು ಮಾತ್ರ ಕಟ್ಟಡ ಶುಲ್ಕ ನೀಡಿದ್ದರು. ಕೆಲವರು ತಕರಾರು ತೆಗೆದ ಕಾರಣ ಎಲ್ಲ ಸದಸ್ಯರಿಗೂ ಇದೀಗ ಕಟ್ಟಡ ಶುಲ್ಕ ಸಂಗ್ರಹದ
ಹಣವನ್ನು ಮರುಪಾವತಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೃಷಿ ರಹಿತ ಸಾಲ ಪಡೆದವರಿಗೆ ಕಾಲಮಿತಿ ಮೀರಿದ್ದರಿಂದ ಕಾನೂನಾತ್ಮಕವಾಗಿ ನೋಟಿಸ್‌ ನೀಡಲಾಗಿದೆ. ಕೃಷಿಗೆ ಸಾಲ ಪಡೆದಿರುವ ಯಾವ ರೈತರಿಗಾಗಲಿ, ರೈತ ಮಹಿಳೆಯರಿ ಗಾಗಲಿ ಸಾಲ ಮರುಪಾವತಿಗೆ ನೋಟಿಸ್‌ ನೀಡಿಲ್ಲ. 
ಅಶೋಕ ಪಾಟೀಲ,ಅಧ್ಯಕ್ಷರು, ಪ್ರಾ.ಕೃ.ಸ. ಸಂಘ, ಹಡಗಲಿ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.