ಬಳ್ಳಾರಿ ಜೈಲು ಹಕ್ಕಿಗಳಿಗೆ ಅಧ್ಯಾತ್ಮ ಬೋಧನೆ


Team Udayavani, Nov 28, 2018, 6:00 AM IST

c-33.jpg

ಬಳ್ಳಾರಿ: ಕೆಟ್ಟ ಘಳಿಗೆಯಲ್ಲಿ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಜೈಲು ಸೇರಿರುವ ಕೈದಿಗಳಲ್ಲಿ ಮಾನಸಿಕ ಖನ್ನತೆ, ಒತ್ತಡ, ದ್ವೇಷ, ವೈಷಮ್ಯ ಸಹಜ. ಇವುಗಳಿಂದ ಕೈದಿಗಳನ್ನು ಹೊರತರಲು ಮುಂದಾಗಿರುವ ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕರು ಅಧ್ಯಾತ್ಮದ ಮೊರೆ ಹೋಗಿದ್ದಾರೆ. ಪಿರಮಿಡ್‌ ಧ್ಯಾನ ಕೇಂದ್ರದ ಸಹಾಯದಿಂದ ಪ್ರತಿ ನಿತ್ಯ ಧ್ಯಾನ ಮತ್ತು ಸತ್ಸಂಗ ಬೋಧನೆ ಮಾಡಿಸುವ ಮೂಲಕ ಸಾತ್ವಿಕ ಗುಣಗಳನ್ನು ತುಂಬುತ್ತಿದ್ದಾರೆ.

ನಗರದ ಕೇಂದ್ರ ಕಾರಾಗೃಹದಲ್ಲಿರುವ ಸಜಾಬಂಧಿ ಹಾಗೂ ವಿಚಾರಣಾಧೀನ ಕೈದಿಗಳು ಜೈಲಿಗೆ ಬರುತ್ತಿದ್ದಂತೆ ಕೆಲವರು ಒತ್ತಡಕ್ಕೆ ಒಳಗಾಗಿ ಮಾನಸಿಕ ಖನ್ನತೆಗೆ ಒಳಗಾಗುತ್ತಾರೆ. ಇನ್ನು ಕೆಲವರು ವಿಭಿನ್ನ ರೀತಿಯಲ್ಲಿ ವರ್ತಿಸಲು ಮುಂದಾಗುತ್ತಾರೆ. ಜೈಲು ಸಿಬ್ಬಂದಿಗೆ ಸಹಕರಿಸದೆ, ಸಹ ಕೈದಿಗಳೊಂದಿಗೆ ಉತ್ತಮವಾಗಿ ನಡೆದುಕೊಳ್ಳದಂತೆ ವರ್ತಿಸುತ್ತಿದ್ದಾರೆ. ಇದರಿಂದ ಇಂಥ ಕೈದಿಗಳನ್ನು ನಿಯಂತ್ರಿಸುವುದು ಮತ್ತು ಅವರನ್ನು ಪರಿವರ್ತಿಸಿ ಬದಲಾವಣೆ ಮೂಡಿಸುವುದು ಸುಲಭದ ಕೆಲಸವಲ್ಲ. ಹಾಗಾಗಿ ಕೈದಿಗಳನ್ನು
ಅಧ್ಯಾತ್ಮದತ್ತ ಕೊಂಡೊಯ್ದರೆ ಒಂದಷ್ಟು ಸುಧಾರಿಸಬಹುದೆಂಬ ಉದ್ದೇಶದಿಂದ ಕೇಂದ್ರ ಕಾರಾಗೃಹದ ಅಧೀಕ್ಷಕರು ಇಲ್ಲಿನ ಪಿರಮಿಡ್‌ ಧ್ಯಾನ ಕೇಂದ್ರದವರ ಮೊರೆ ಹೋಗಿದ್ದಾರೆ. 

ಪ್ರತಿದಿನ ಮಧ್ಯಾಹ್ನ 2ರಿಂದ 4ರವರೆಗೆ ಧ್ಯಾನ ಮಾಡಿಸಲಾಗುತ್ತಿದ್ದು, ಸಂಜೆ 4 ಗಂಟೆಯಿಂದ ಸತ್ಸಂಗ ಬೋಧನೆ ಮಾಡಲಾಗುತ್ತಿದೆ. ಕೇಂದ್ರ ಕಾರಾಗೃಹದಲ್ಲಿ ಪಿರಮಿಡ್‌ ಧ್ಯಾನಕೇಂದ್ರದಿಂದ ಆರಂಭದಲ್ಲಿ ಕೇವಲ 41 ದಿನಗಳಿಗಷ್ಟೇ ಸೀಮಿತವಾಗಿದ್ದ ಧ್ಯಾನ ಶಿಬಿರವು ಕೈದಿಗಳಲ್ಲಿ ಕಂಡುಬರುತ್ತಿರುವ ಪರಿವರ್ತನೆಯಿಂದಾಗಿ ಇದೀಗ 70 ದಿನಗಳವರೆಗೆ ಮುಂದುವರಿದಿದೆ. ವಿಭಿನ್ನವಾಗಿ ವರ್ತಿಸುತ್ತಿದ್ದ
ಕೆಲವು ಕೈದಿಗಳು ಸ್ವಲ್ಪ ಶಾಂತಚಿತ್ತದಿಂದ ಇದ್ದಾರೆ.

ಅವರಲ್ಲಿನ ಖನ್ನತೆ, ಕೋಪ-ತಾಪಗಳೆಲ್ಲವೂ ಹತೋಟಿಗೆ ಬಂದಿವೆ. ಮೇಲಾಗಿ ಧ್ಯಾನ, ಸತ್ಸಂಗ ಬೋಧನೆಯಲ್ಲಿ ಕೈದಿಗಳು ಸಹ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಹಾಗಾಗಿ ಕಾರಾಗೃಹದಲ್ಲೇ ಕೊಠಡಿಯೊಂದರಲ್ಲಿ ಪಿರಮಿಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಆಧಾತ್ಮತೆಗೆ ಅಗತ್ಯವಾದ ಗೋಡೆ ಬರಹಗಳನ್ನು ಬಿಡಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಸಹ ಒದಗಿಸಲಾಗಿದೆ. ಅಲ್ಲದೇ, ಇದಕ್ಕಾಗಿ ಕಾರಾಗೃಹದ ಆವರಣದಲ್ಲಿ 20/20 ಅಳತೆಯಲ್ಲಿ ಪಿರಮಿಡ್‌ ಧ್ಯಾನ ಕೇಂದ್ರವನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗಿದ್ದು, ಅನುಮತಿಗಾಗಿ ಕಾರಾಗೃಹದ ಪ್ರಧಾನ ಕಚೇರಿಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಅಧೀಕ್ಷಕ ಪಿ.ರಂಗನಾಥ್‌.

ಧ್ಯಾನ ಶಿಬಿರ ಏಕೆ ಬೇಕು?
ಕಾರಾಗೃಹದ ಅಧೀಕ್ಷಕರು ಕೈದಿಗಳನ್ನು ಭೇಟಿ ಮಾಡಲು ಪ್ರತಿದಿನವೂ ತೆರಳಿದಾಗ ಬಹುತೇಕ ಕೈದಿಗಳ ಮಾನಸಿಕ ಖನ್ನತೆ, ಕ್ರೂರತ್ವ ಹಾಗೂ ಸಿಡಿಮಿಡಿಗೊಳ್ಳುವುದು ಸೇರಿ ಇತರೆ ಪ್ರಚೋದನಾತ್ಮಕ ಮನೋಭಾವ ಕಣ್ಣಾರೆ ಕಂಡಿದ್ದಾರಂತೆ. ಹಾಗಾಗಿ ಧ್ಯಾನ, ಸತ್ಸಂಗ ಮಾಡುವುದರಿಂದ ಆಧ್ಯಾತ್ಮಿಕತೆ ಬೆಳೆಯಲಿದೆ. ಖನ್ನತೆ ದೂರವಾಗಿ ಮಾನಸಿಕ ಆರೋಗ್ಯ ವೃದ್ಧಿಯಾಗಲಿದೆ. ನೈತಿಕ ಸ್ಥೆರ್ಯ ಹೆಚ್ಚಾಗಲಿದೆ. ಅಧ್ಯಾತ್ಮ ಜ್ಞಾನ, ಏಕಾಗ್ರತೆ ಹೆಚ್ಚಲಿದೆ. ಆದ್ದರಿಂದ ಕೈದಿಗಳನ್ನು ಮೊದಲು ಧ್ಯಾನ, ಸತ್ಸಂಗ ಬೋಧನೆಯಿಂದಾಗಿ ಅಧಾತ್ಮದತ್ತ ಕೊಂಡೊಯ್ಯಲಾಗುತ್ತಿದ್ದು, ರಾಜ್ಯದ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಆರಂಭಿಸಿರುವುದು ವಿಶೇಷ. 

ಮೊದಲು 41 ದಿನಗಳಿಗೆ ಸೀಮಿತವಾಗಿದ್ದ ಶಿಬಿರ, ಇದೀಗ 70 ದಿನಗಳವರೆಗೆ ಮುಂದುವರಿದಿದೆ. ಕೈದಿಗಳು ನಿಧಾನವಾಗಿ ಧ್ಯಾನ, ಸತ್ಸಂಗಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಕೆಲವರು ಬದಲಾವಣೆಯೂ ಆಗಿದ್ದಾರೆ. ಹಾಗಾಗಿ ಕಾರಾಗೃಹದಲ್ಲಿ ಶಾಶ್ವತವಾಗಿ ಪಿರಮಿಡ್‌ ಧ್ಯಾನಕೇಂದ್ರವನ್ನು ನಿರ್ಮಿಸಲು ಅನುಮತಿ ಕೋರಿ ಕಾರಾಗೃಹ ಪ್ರಧಾನ ಕಚೇರಿಗೆ ಪತ್ರ ಬರೆಯಲಾಗಿದೆ.
● ಪಿ.ರಂಗನಾಥ್‌, ಅಧೀಕ್ಷಕ, ಕೇಂದ್ರ ಕಾರಾಗೃಹ, ಬಳ್ಳಾರಿ

ನಿರಂತರ ಧ್ಯಾನ ಶಿಬಿರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಹುತೇಕ ಕೈದಿಗಳು ಈಗ ನಿರಾಳಭಾವ ಹಾಗೂ ಮಾನಸಿಕ ಪ್ರಸನ್ನತೆಯಿಂದ ಇದ್ದಾರೆ. ಧ್ಯಾನದಿಂದ ಆರೋಗ್ಯ, ಜ್ಞಾಪಕಶಕ್ತಿ ವೃದಿಟಛಿಯಾಗಲಿದ್ದು, ಏಕಾಗ್ರತೆ, ಆತ್ಮವಿಶ್ವಾಸ ಹೆಚ್ಚಲಿದೆ. ಭಯ, ದುಃಖ, ಆತಂಕ, ನಿದ್ರಾಹೀನತೆ ದೂರವಾಗಲಿದೆ.
● ಪುರುಷೋತ್ತಮ, ಹನುಮಂತರಾವ್‌, ತರಬೇತುದಾರರು, ಪಿರಮಿಡ್‌ ಧ್ಯಾನಕೇಂದ್ರ, ಬಳ್ಳಾರಿ

ಶಿಬಿರದಲ್ಲಿ ಆಹಾರದ ಬಗ್ಗೆಯೂ ಹೇಳಿಕೊಡಲಾಗುತ್ತಿದೆ. ನೀತಿ ಕತೆಗಳನ್ನು ಹೇಳುವ ಮೂಲಕ ನಮ್ಮ ಮನಃ ಪರಿವರ್ತಿಸಲಾಗುತ್ತಿದೆ. ಈ ಹಿಂದೆ ಇದ್ದ ಮಾನಸಿಕ ಒತ್ತಡ ಇದೀಗ ನಿಯಂತ್ರಣಗೊಂಡಿದೆ. ಕೋಪ, ತಾಪಗಳೆಲ್ಲವೂ ಕಡಿಮೆಯಾಗಿವೆ.
● ಸಿದ್ಧಾರೂಢ, ಸಜಾಬಂಧಿ, ಕೇಂದ್ರ ಕಾರಾಗೃಹ, ಬಳ್ಳಾರಿ

ವೆಂಕೋಬಿ ಸಂಗನಕಲ್ಲು

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.