ಯುಎಸ್ಎಲ್ಗೂ, ಮಲ್ಯ ಸಾಲಕ್ಕೂ ಸಂಬಂಧವಿಲ್ಲ
Team Udayavani, Nov 29, 2018, 6:20 AM IST
ಬೆಂಗಳೂರು: ವಿಜಯ ಮಲ್ಯ ಒಡೆತನದ ಕಿಂಗ್ಫಿಷರ್ ಕಂಪನಿ ಮಾಡಿದ ಸಾಲಕ್ಕೂ, ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ (ಯುಎಸ್ಎಲ್) ಸಂಸ್ಥೆಗೂ ಸಂಬಂಧವಿಲ್ಲ. ಸಾಲಕ್ಕೆ ಯುಎಸ್ಎಲ್ ಸಂಸ್ಥೆ ಹೊಣೆಯಲ್ಲ ಎಂದು ಹಿರಿಯ ವಕೀಲ ಹಾಗೂ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಬುಧವಾರ ಹೈಕೋರ್ಟ್ಗೆ ತಿಳಿಸಿದರು.
ಸಾಲ ತೀರಿಸಿದ್ದರೂ ಋಣಮುಕ್ತ ಪತ್ರ ನೀಡಿಲ್ಲ ಎಂದು ಆಕ್ಷೇಪಿಸಿ ಐಡಿಬಿಐ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿರುದಟಛಿ ಯುಎಸ್ಎಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನ್ಯಾ.ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ನಡೆಯಿತು. ವಿಚಾರಣೆ ವೇಳೆ ಯುಎಸ್ಎಲ್ ಪರ ವಾದ ಮಂಡಿಸಿದ ಪಿ.ಚಿದಂಬರಂ, ವಿಜಯ್ ಮಲ್ಯಗೂ, ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ಗೂ ಯಾವುದೇ ಸಂಬಂಧವಿಲ್ಲ. ಯುಎಸ್ಎಎಲ್ನಲ್ಲಿ ಮಲ್ಯ ಶೇ.2ರಷ್ಟು ಮಾತ್ರ ಷೇರು ಹೊಂದಿದ್ದಾರೆ. ಕಿಂಗ್μಷರ್ ಮಾಡಿದ ಸಾಲಕ್ಕೆ ಯುಎಸ್ಎಲ್ನ್ನು ಹೊಣೆ ಮಾಡಲು ಆಗುವುದಿಲ್ಲ. ಆದ್ದರಿಂದ ಸಾಲದಿಂದ ಯುಎಸ್ಎಲ್ ಕಂಪನಿಯನ್ನು ಮುಕ್ತಗೊಳಿಸಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಐಡಿಬಿಐ ಪರ ವಕೀಲರು, ಸಾಲ ನೀಡುವಾಗ ವಿಜಯ್ ಮಲ್ಯ ಅವರು ಯುಎಸ್ಎಲ್ ಅಧ್ಯಕ್ಷರಾಗಿದ್ದರು. ಕಿಂಗ್ಫಿಷರ್ಗೆ ಕೊಟ್ಟ ಸಾಲಕ್ಕೆ ಯುಎಸ್ಎಲ್ಕಾಪೋರೇಟ್ ಖಾತರಿ ನೀಡಿತ್ತು ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.