ವಿಷ್ಣು ವಿಚಾರದಲ್ಲಿ ನಿರುತ್ಸಾಹ ಯಾಕೆ? ಅನಿರುದ್ಧ್ ಪ್ರಶ್ನೆ
Team Udayavani, Dec 2, 2018, 6:00 AM IST
ಬೆಂಗಳೂರು: ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರದಲ್ಲಿ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸರ್ಕಾರದ ವಿರುದ್ಧ ಮತ್ತೆ ಗರಂ ಆಗಿದ್ದಾರೆ.
ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅನಿರುದ್ಧ್, ಕಳೆದ 9 ವರ್ಷಗಳಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅಂಬಿ ಅಂಕಲ್ ಹೆಸರಲ್ಲಿ ಫಿಲ್ಮ್ ಸಿಟಿ ಮತ್ತು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತಿದೆ ಎಂದು ಘೋಷಣೆ ಮಾಡಿದ್ದಾರೆ. ಈ ಉತ್ಸಾಹದ ಕೆಲಸ ಅಪ್ಪಾಜಿ ಹೆಸರಲ್ಲಿ ಮಾತ್ರ ಯಾಕೆ ಆಗುತ್ತಿಲ್ಲ. ನಮ್ಮ ಅಪ್ಪಾಜಿ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿಲ್ವಾ? ಅವರಿಗೆ ಯಾಕಿಷ್ಟು ಅವಮಾನ ಮಾಡುತ್ತಿದ್ದಾರೆಎಂದು ಪ್ರಶ್ನಿಸಿದ್ದಾರೆ.
ಕಳೆದ 9 ವರ್ಷಗಳಿಂದ ವಿಷ್ಣು ಹೆಸರಿನಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್ ಮಾಡಬೇಕೆಂದು ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಲ್ಲದೇ ಬ್ಲೂ ಪ್ರಿಂಟ್ ಹಾಗೂ ಬಜೆಟ್ ಬಗ್ಗೆ ವರದಿ ನೀಡಿದರೂ, ಯಾವುದೇ ಪ್ರಯೋಜನವಿಲ್ಲ. ಇದು ಮೇರು ನಟನಿಗೆ ಆಗುತ್ತಿರುವ ಅನ್ಯಾಯ. ಇನ್ನು ಮೈಸೂರಲ್ಲಿ ಫಿಲ್ಮಂ ಸಿಟಿ ಪ್ಲಾನ್ ಆಗುತ್ತೆ. ರಾಮನಗರದಲ್ಲಿ ಫಿಲ್ಮಂ ಯೂನಿವರ್ಸಿಟಿ ಮಾಡಲು ಹೊರಡುತ್ತಾರೆ. ಆದ್ರೆ ವಿಷ್ಣು ಹೆಸರಲ್ಲಿ ನಾವು ಪುಣೆ ಫಿಲಂ ಇನ್ಸ್ಟಿಟ್ಯೂಟ್ ಥರ ಎಫ್ಟಿಐ ಮಾಡಬೇಕು ಅಂತಾ ಸುಮಾರು ವರ್ಷಗಳಿಂದ ಹೇಳ್ತಾನೆ ಇದ್ದೀವಿ. ಯಾರೂ ಅದನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕೊನೆಗೆ ವಿಷ್ಣು ಹೆಸರನ್ನಾದ್ರೂ ತೆಗೆದುಕೊಳ್ಳಿ ಅಂದ್ರೆ ಅದೂ ಮಾಡಲಿಲ್ಲ. ಯಾಕೆ ಹೀಗೆ ಮಾಡುತ್ತಿದ್ದಾರೆ ಎಂದು ಬೇಸರಿಸಿಕೊಂಡರು.
ವಿಷ್ಣು ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಕಲೆಯಲ್ಲಿ ಜಾತಿ ಹುಡುಕಬಾರದು. ನಮಗ್ಯಾವ ಜಾತಿಯೂ ಇಲ್ಲ. ನಾವು ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸುತ್ತೇವೆ. ನಮ್ಮದು ವಸುಧೈವ ಕುಟುಂಬಕಂ, ನಾವೆಲ್ಲರೂ ಒಂದು. ಹಾಗೇನಾದ್ರೂ ಅಪ್ಪಾಜಿ ಸ್ಮಾರಕ ವಿಚಾರದಲ್ಲಿ ಜಾತಿ ವಿಚಾರವಿದ್ದರೆ ಅದು ದುಃಖದ ವಿಚಾರ. ರಾಜ್ಕುಮಾರ್, ಅಂಬರೀಶ್ ಹೆಸರಿನಲ್ಲಿ ಫಿಲಂ ಇನ್ಸ್ಟಿಟ್ಯೂಟ್ ಮಾಡ್ತಿರೋದು ಖುಷಿನೇ. ಆದರೆ, ವಿಷ್ಣು ಅವರ ಫಿಲಂ ಇನ್ಸ್ಟಿಟ್ಯೂಟ್ ಬಗ್ಗೆ ಯಾಕೆ ಸರ್ಕಾರ ಮಾತನಾಡುತ್ತಿಲ್ಲ. ಸಿಎಂ ವಿಚಾರದಲ್ಲಿ ನಮಗ್ಯಾವ ಕೋಪವೂ ಇಲ್ಲ. ಅವರು ಸಿನಿಮಾ ಹಿನ್ನೆಲೆಯಿಂದ ಬಂದವರೇ. ಹೀಗಾಗಿ, ಅವರ ಮೇಲೆ ಭರವಸೆಯಿದೆ. ಅವರ ವಿರುದ್ಧ ನನ್ನ ಹೇಳಿಕೆ ವೈಯಕ್ತಿಕವಾಗಿರಲಿಲ್ಲ. ಎರಡು ದಿನದಂದಲೂ ನಾನು ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದೇನೆ. ಆದರೂ, ಸಿಎಂ ನಮ್ಮ ಯೋಜನೆಯನ್ನು ಯಾಕೆ ಸಭೆಯಲ್ಲಿ ಪ್ರಸ್ತಾಪ ಮಾಡಲಿಲ್ಲ. ಅಭಿಮಾನಿಗಳಿಗೆ ಉತ್ತರ ಕೊಟ್ಟು ಸಾಕಾಗಿದೆ. ಡಾ.ವಿಷ್ಣುವರ್ಧನ್ ಪ್ರತಿಷ್ಠಾನ ಟ್ರಸ್ಟ್ ಸರ್ಕಾರದ್ದು. ಇದರ ಹೊಣೆಯನ್ನು ಸರ್ಕಾರವೇ ಮುಂದುವರಿಸಬೇಕು. ಇದಕ್ಕೆ ಇಡೀ ಚಿತ್ರರಂಗ ಒಟ್ಟಾಗುವ ಅವಶ್ಯಕತೆಯಿಲ್ಲ. ಬದಲಾಗಿ ಸರ್ಕಾರ ಗಮನ ಹರಿಸಿದ್ರೆ ಸಾಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ