ಮಲೆನಾಡಿನ ಅಡಕೆ ವ್ಯಾಪಾರದಲ್ಲಿ ಹೆಚ್ಚಾಯ್ತು ಗೋಲ್‌ಮಾಲ್‌ ​​​​​​​


Team Udayavani, Dec 7, 2018, 6:35 AM IST

arecanu.jpg

ಶಿವಮೊಗ್ಗ: ಬೇರೆ ರಾಜ್ಯಗಳ ಕಡಿಮೆ ಗುಣಮಟ್ಟದ ಅಡಕೆಯನ್ನು ಶಿವಮೊಗ್ಗಕ್ಕೆ ತಂದು ಇಲ್ಲಿ ಮಿಕ್ಸಿಂಗ್‌ ಮಾಡುತ್ತಿರುವ ಆರೋಪದ ಬೆನ್ನಲ್ಲೇ ಉತ್ತರ ಭಾರತದ ಮಾರುಕಟ್ಟೆಯಿಂದ ಮಲೆನಾಡಿನ ಅಡಕೆ ವಾಪಸ್ಸಾಗುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ಪ್ರತಿ ದಿನ 10ರಿಂದ 20 ಲಾರಿಗಳಲ್ಲಿ ಉತ್ತರ ಭಾರತದ ಗುಜರಾತ್‌, ಮಹಾರಾಷ್ಟ್ರಗಳಿಗೆ ಶಿವಮೊಗ್ಗದ ಎಪಿಎಂಸಿಯಿಂದ ಅಡಕೆ ರವಾನೆಯಾಗುತ್ತದೆ. ಇದರಲ್ಲಿ ಒಂದು ಅಥವಾ ಎರಡು ಲಾರಿಗಳು ಕಳಪೆ ಗುಣಮಟ್ಟದ್ದು ಎಂಬ ಕಾರಣಕ್ಕೆ ವಾಪಸ್ಸಾಗುತ್ತಿವೆ. ಹೀಗೆ ವಾಪಸ್‌ ಆಗುವ ಅಡಕೆಗೆ ತೆರಿಗೆ ವಾಪಸ್‌ ನೀಡಲಾಗುತ್ತಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವ್ಯಾಪಾರಸ್ಥರು ಸರಕಾರಕ್ಕೆ ಕೋಟ್ಯಂತರ ರೂ.ತೆರಿಗೆ ವಂಚಿಸುತ್ತಿದ್ದಾರೆ. ಎಲ್ಲ ವಹಿವಾಟುಗಳು ನಿಯಾಮವಳಿ ಪ್ರಕಾರವೇ ನಡೆಯುವುದರಿಂದ ಈ ಜಾಲ ಪತ್ತೆ ಹಚ್ಚಲು ಅಧಿ ಕಾರಿಗಳೂ ವಿಫಲರಾಗಿದ್ದಾರೆ.

ತಿರಸ್ಕೃತ ಪ್ರಮಾಣ ದುಪ್ಪಟ್ಟು:
2016, 2017ರಲ್ಲಿ ವರ್ಷಕ್ಕೆ ಎರಡೂ¾ರು ಲಾರಿ ಲೋಡ್‌ ಅಡಕೆ ವಾಪಸ್‌ ಬರುತ್ತಿದ್ದವು. ಆದರೆ, ಈ ವರ್ಷ ಇದರ ಪ್ರಮಾಣ ಒಮ್ಮೇಲೇ ಹೆಚ್ಚಾಗಿದೆ. ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿಯೇ 18 ಲೋಡ್‌ಗಳಿಗೂ ಹೆಚ್ಚು ಅಡಕೆ ವಾಪಸ್ಸಾಗಿದೆ. ಇಷ್ಟು ವರ್ಷ ಇಲ್ಲದಿದ್ದ ಕಳಪೆ ಗುಣಮಟ್ಟದ ಅಡಕೆ ಈಗ ಹೇಗೆ ಸಿಗುತ್ತಿದೆ ಎಂಬುದೇ ಪ್ರಶ್ನೆಯಾಗಿದ್ದು, ಉತ್ತರ ಸಿಗುತ್ತಿಲ್ಲ. ಮಲೆನಾಡಿನ ಅಡಕೆಯಲ್ಲಿ ಗುಣಮಟ್ಟದ ಕೊರತೆ ಇರೋದು ತೀರಾ ಕಡಿಮೆ. ಅಲ್ಲದೆ ಗ್ರೇಡಿಂಗ್‌ ಸಹ ಸರಿಯಾಗಿ ಮಾಡಲಾಗುತ್ತದೆ. ಆದರೂ ಇದ್ದಕ್ಕಿದ್ದಂತೆ ಇಷ್ಟೊಂದು ಪ್ರಮಾಣದಲ್ಲಿ ಅಡಕೆ ವಾಪಸ್ಸಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ತಿರಸ್ಕೃತ ಅಡಕೆ ಯಾರಿಗೆ ಲಾಭ?
ಗುಟ್ಕಾ ಮತ್ತು ಅಡಕೆ ಪುಡಿ ಉತ್ಪಾದನಾ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಶಿವಮೊಗ್ಗದಿಂದ ಉತ್ತರ ಭಾರತದ ನಿಗದಿತ ವಿಳಾಸಕ್ಕೆ ಅಡಕೆ ವಿಲೇವಾರಿಯಾಗುತ್ತದೆ. ಆದರೆ, ಅದೇ ಲಾರಿಯಲ್ಲಿ ಕಳಪೆ ಗುಣಮಟ್ಟದ ಅಡಕೆ ತುಂಬಿ ತಿರಸ್ಕೃತದ ಲೇಬಲ್‌ ಅಂಟಿಸಿಕೊಂಡು ಶಿವಮೊಗ್ಗಕ್ಕೆ ತರಲಾಗುತ್ತದೆ. ಎಪಿಎಂಸಿಯಲ್ಲಿ ಖರೀದಿಯಾಗಿ ಹೊರಗೆ ಹೋಗುವ ಅಡಕೆಗೆ ಶೇ.1.50 ಎಪಿಎಂಸಿ ಸೆಸ್‌ ಮತ್ತು ಶೇ.3ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಒಟ್ಟಾರೆ ಶೇ.4.50ರಷ್ಟು ತೆರಿಗೆ ಬೀಳುತ್ತದೆ. ಸಾಮಾನ್ಯವಾಗಿ ಲಾರಿಗಳಲ್ಲಿ 70ರಿಂದ 80 ಲಕ್ಷ ರೂ.ಮೌಲ್ಯದ 20ರಿಂದ 21 ಟನ್‌ ಅಡಕೆ ತುಂಬಲಾಗುತ್ತದೆ. ಅಂದರೆ, ಅದಕ್ಕೆ 3ರಿಂದ 4 ಲಕ್ಷ ರೂ.ನಷ್ಟು ತೆರಿಗೆ ವಿಧಿಸಲಾಗುತ್ತದೆ. ಅಕಸ್ಮಾತ್‌ ಅಡಕೆ ತಿರಸ್ಕೃತಗೊಂಡಲ್ಲಿ ಸಂಪೂರ್ಣ ತೆರಿಗೆ ಮನ್ನಾ ಆಗಲಿದೆ. ಹೀಗೆ ತಿರಸ್ಕೃತಗೊಂಡ ಅಡಕೆಯಿಂದ ಅಕ್ಟೋಬರ್‌ ತಿಂಗಳಲ್ಲೇ ವರ್ತಕರು 70ರಿಂದ 80 ಲಕ್ಷ ರೂ. ತೆರಿಗೆ ವಾಪಸ್‌ ಪಡೆದಿದ್ದಾರೆ.

ಈ ಅವಕಾಶವನ್ನೇ ಬಳಸಿಕೊಂಡು ವರ್ತಕರು ಉತ್ತರ ಭಾರತದ ಕಡೆಯಿಂದ ಕಳಪೆ ಗುಣಮಟ್ಟದ ಅಡಕೆಯನ್ನು ತಿರಸ್ಕೃತದ ಲೆಕ್ಕದಲ್ಲಿ ಶಿವಮೊಗ್ಗಕ್ಕೆ ತರಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದೆ. ರೈತರು ಅಡಕೆಯನ್ನು ಎಪಿಎಂಸಿಗೆ ತಂದಾಗ  “ಎ’ ಬಿಲ್‌ ನೀಡಲಾಗುತ್ತದೆ. ಖರೀದಿಯಾದ ಬಳಿಕ  “ಬಿ’ ಬಿಲ್‌ ಹಾಗೂ ಅದೇ ಅಡಕೆಯನ್ನು ಹೊರಗೆ ಮಾರಾಟ ಮಾಡಿದಾಗ  “ಸಿ’ ಬಿಲ್‌ ನೀಡಲಾಗುತ್ತದೆ. ಆದರೆ, ಸಿ ಬಿಲ್‌ನಲ್ಲಿ ಅಡಕೆಯ ತೂಕ ಮತ್ತು ಧಾರಣೆ ಇರುತ್ತದೆಯೇ ಹೊರತು ಯಾವ ಮಾದರಿ ಎಂಬುದು ಇರುವುದಿಲ್ಲ.

ಕಳಪೆ ಗುಣಮಟ್ಟದ ಅಡಕೆ ತಿರಸ್ಕೃತಗೊಂಡು ವಾಪಸಾಗುವುದು ವರ್ತಕರಿಗೆ ನಷ್ಟ. ಮಲೆನಾಡಿನ ಅಡಕೆಗೆ ಅವಮಾನವೆಂದು ಎಪಿಎಂಸಿ ಭಾವಿಸಿತ್ತು. ಆದರೆ, ಇದರ ಹಿಂದೆ ತೆರಿಗೆ ವಂಚನೆಯ ಹುನ್ನಾರ ಅಡಗಿರಬಹುದೆಂಬ ಸಂಶಯವೂ ಮೂಡಿದೆ.

ಹಿಂದೆಲ್ಲ ಇಷ್ಟೊಂದು ಪ್ರಮಾಣದಲ್ಲಿ ಅಡಕೆ ವಾಪಸ್‌ ಬರುತ್ತಿರಲಿಲ್ಲ. ಈ ವರ್ಷ ಇದರ ಪ್ರಮಾಣ ತೀವ್ರವಾಗಿ ಏರಿದೆ. ಕೆಲ ವ್ಯಾಪಾರಿಗಳ ಪ್ರಕಾರ ದೆಹಲಿಯ ವ್ಯಾಪಾರಿಯೊಬ್ಬರೇ ಈ ರೀತಿ ಮಾಡುತ್ತಿದ್ದಾರೆ. ಆ ಕಂಪನಿಯಲ್ಲಿ ಹೊಸದಾಗಿ ಬಂದಿರುವ ಯುವಕರು ಮುಲಾಜಿಲ್ಲದೆ ಮಾಲನ್ನು ರಿಜೆಕ್ಟ್ ಮಾಡುತ್ತಿದ್ದಾರೆ ಎನ್ನುತ್ತಾರೆ. ಇತ್ತೀಚೆಗೆ ಅಡಕೆ ವಾಪಸ್‌ ಬರುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
– ಹೆಸರು ಹೇಳಲಿಚ್ಛಿಸದ ಎಪಿಎಂಸಿ ಅಧಿಕಾರಿ.

ಭಾರೀ ಪ್ರಮಾಣದಲ್ಲಿ ಅಡಕೆ ವಾಪಸ್ಸಾಗುತ್ತಿರುವುದು ಅನುಮಾನ ಮೂಡಿಸಿದೆ. ಈ ಬಗ್ಗೆ ಮೇಲಧಿ ಕಾರಿಗಳಿಗೆ ಮನವಿ ಮಾಡಿದ್ದೇವೆ. ಸಚಿವರಿಗೂ ಈ ಬಗ್ಗೆ ಗಮನಕ್ಕೆ ತರಲಾಗುವುದು. ಇದುವರೆಗೆ ಎಷ್ಟು ಲಾರಿಗಳು ತಿರಸ್ಕೃತದ ಹೆಸರಲ್ಲಿ ವಾಪಸ್ಸಾಗಿದೆ, ಎಲ್ಲಿಂದ ಬಂದಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
– ದುಗ್ಗಪ್ಪಗೌಡ, ಅಧ್ಯಕ್ಷರು, ಎಪಿಎಂಸಿ, ಶಿವಮೊಗ್ಗ.

– ಶರತ್‌ ಭದ್ರಾವತಿ

ಟಾಪ್ ನ್ಯೂಸ್

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.