ಲಂಚ, ಅಕ್ರಮ ಎಂದರೆ ನೋವಾಗುತ್ತದೆ: ಸ್ಪೀಕರ್
Team Udayavani, Dec 15, 2018, 7:05 AM IST
ವಿಧಾನಸಭೆ: ಶಿವಮೊಗ್ಗ ಎಂದರೆ ಶಾಂತವೇರಿ ಗೋಪಾಲಗೌಡರು, ಕಡಿದಾಳ್ ಮಂಜಪ್ಪನವರು ನೆನಪಾಗುತ್ತಾರೆ. ಅಲ್ಲಿ ಲಂಚ, ಅಕ್ರಮ ಎಂದರೆ ನೋವಾಗುತ್ತದೆ ಎಂದು ಸ್ಪೀಕರ್ ರಮೇಶ್ಕುಮಾರ್ ಬೇಸರ ವ್ಯಕ್ತಪಡಿಸಿದರು.
ಶೂನ್ಯ ವೇಳೆಯಲ್ಲಿ ಬಿಜೆಪಿಯ ಕುಮಾರ್ ಬಂಗಾರಪ್ಪ ಅವರು, ಹಾಸ್ಟೆಲ್ಗಳಿಗೆ ಆಹಾರ ಪೂರೈಕೆ ಟೆಂಡರ್ನಲ್ಲಿ 1 ರೂ.ಗೆ ರಾಗಿ, 10 ರೂ.ಗೆ ದಪ್ಪ ಅಕ್ಕಿ, 5 ರೂ.ಗೆ ಎಣ್ಣೆ ವಿತರಣೆ ಮಾಡಲಾಗುವುದು ಎಂದು ಕಡಿಮೆ ದರಕ್ಕೆ ಟೆಂಡರ್ ಹಾಕಿದವರಿಗೆ ನೀಡಲಾಗಿದೆ. ಹತ್ತು ವರ್ಷದಿಂದಲೇ ಅದೇ ಸಂಸ್ಥೆ ಆಹಾರ ಪೂರೈಸುತ್ತಿದೆ ಎಂದು ಹೇಳಿದರು. ಇದಕ್ಕೆ ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ಹಾಲಪ್ಪ ಧ್ವನಿಗೂಡಿಸಿದರು. ಇದೊಂದು ಕರ್ಮಕಾಂಡ ಶಿವಮೊಗ್ಗ ಭಾಗದಲ್ಲಿ ಲೂಟಿ ಮಾಡಲಾಗುತ್ತಿದೆ. ರಾಜ್ಯಪೂರ್ತಿ ಲೂಟಿ ಮಾಡಲು
ಇದೀಗ ರಾಜ್ಯಕ್ಕೆಲ್ಲಾ ಒಂದೇ ಟೆಂಡರ್ ಕರೆಯಲು ಸಿದ್ಧತೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಆಗ ರಮೇಶ್ಕುಮಾರ್, ಅಯ್ಯೋ ಶಿವಮೊಗ್ಗ ಎಂದರೆ ಗೋಪಾಲಗೌಡರು, ಕಡಿದಾಳ್ ಮಂಜಪ್ಪ ಹುಟ್ಟಿದ ಜಿಲ್ಲೆ. ಅಲ್ಲಿ ಲಂಚ, ಭ್ರಷ್ಟಾಚಾರ ಎಂದರೆ
ನೋವಾಗುತ್ತದೆ. 1 ರೂ.ಗೆ ರಾಗಿ ಕೊಡಲು ಟೆಂಡರ್ ಹಾಕಿದ್ದಾನೆ ಎಂದರೆ ವಿಚಾರಣೆಯೇ ಇಲ್ಲದೆ ಅವನು ಫ್ರಾಡ್ ಎಂದು ಹೇಳಬಹುದು. ಇಲ್ಲವೇ ರಾಜ್ಯಪೂರ್ತಿ ಆತನಿಗೆ ಟೆಂಡರ್ ಕೊಟ್ಟು ಸಪ್ಲೆç ಮಾಡು ಎಂದು ಹೇಳಬೇಕು. ಮೊದಲು ಟೆಂಡರ್ ಕ್ಯಾನ್ಸಲ್ ಮಾಡಿ ಎಂದು ತಾಕೀತು ಮಾಡಿದರು. ಸದುದ್ದೇಶದಿಂದ ತಂದ ಕೆಟಿಟಿಪಿ ಕಾಯ್ದೆ ದುರುಪಯೋಗವಾಗುತ್ತಿದೆ ಎಂದು ಹೇಳಿದರು.
ಅದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಯ್ದೆಯಲ್ಲಿ ಕೆಲವು ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ. 1 ರೂ.ಗೆ ರಾಗಿ ಕೊಡಲು ಟೆಂಡರ್ ಪಡೆದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗು ವುದು. ನಿಜವಾಗಿಯೂ 1 ರೂ.ಗೆ ರಾಗಿ ಕೊಡುವುದಾದರೆ ಅವರನ್ನು ಕರೆದು ಸನ್ಮಾನಿಸಬೇಕು. ಲೋಪ ಆಗಿದ್ದರೆ ಖಂಡಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ