ಮಾನದಂಡವೇ ಸರಿಯಿಲ್ಲ:ಕೈ ನಾಯಕರ ವಿರುದ್ಧ ರಾಮಲಿಂಗಾ ರೆಡ್ಡಿ ಆಕ್ರೋಶ
Team Udayavani, Dec 23, 2018, 1:30 PM IST
ಬೆಂಗಳೂರು: ಸಚಿವ ಸಂಪುಟಕ್ಕೆ ಕಾಂಗ್ರೆಸ್ ನಾಯಕರು ಆಯ್ಕೆ ಮಾಡಿದ ಮಾನದಂಡವೇ ಸರಿಯಿಲ್ಲ ಎಂದು ಹಿರಿಯ ಕಾಂಗ್ರೆಸ್ ಶಾಸಕ,ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಭಾನುವಾರ ತೀವ್ರ ಆಸಮಧಾನ ಹೊರ ಹಾಕಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮಲಿಂಗಾ ರೆಡ್ಡಿ ನನಗೆ ಯಾರ ವಿರುದ್ಧವೂ ವೈಯಕ್ತಿಕ ಬೇಸರ ಇಲ್ಲ. ಪಕ್ಷ ಸಚಿವ ಸ್ಥಾನ ನೀಡಲು ಪರಿಗಣಿಸಿದ ಮಾನದಂಡದ ಬಗ್ಗೆ ಬೇಸರ ಇದೆ . ಆರ್.ವಿ.ದೇಶ್ಪಾಂಡೆ, ಕೆ.ಜೆ.ಜಾರ್ಜ್,ಡಿ.ಕೆ.ಶಿವಕುಮಾರ್, ಕೃಷ್ಣ ಭೈರೇಗೌಡ, ಎಂ.ಬಿ.ಪಾಟೀಲ್ ಇವರೆಲ್ಲಾ ಹಿರಿಯರು ಪಕ್ಷಕ್ಕೆ ಅವರ ಸೇವೆ ಅಗತ್ಯವಾಗಿ ಬೇಕು ಮತ್ತು ಸಂಪುಟದಲ್ಲಿ ಅವರ ಹಿರಿತನ ಕಾಣಬೇಕು. ಅವರಿಗೆ ಕೊಟ್ಟಿದ್ದಕ್ಕೆ ನನಗೆ ಬೇಸರ ಇಲ್ಲ. ಅವರಿಗೊಂದು ನ್ಯಾಯ, ನನಗೊಂದು ನ್ಯಾಯ ಯಾಕೆ ಎಂದು ಪ್ರಶ್ನಿಸಿದರು.
ನಾನು ಇದುವರೆಗೆ ಯಾರಿಗೂ ಹೊಗಳಿಯೂ ಇಲ್ಲ, ತೆಗಳಿಯೂ ಇಲ್ಲ .ನನಗೆ ಸಚಿವ ಸ್ಥಾನ ಕೈ ತಪ್ಪಿ ಹೋಗಲು ಒಬ್ಬರು ಪ್ರಮುಖ ಕಾರಣವಾಗಿದ್ದಾರೆ, ಅವರ ಹೆಸರು ಈಗ ಹೇಳುವುದಿಲ್ಲ , ಸಮಯ ಬಂದಾಗ ಹೇಳುತ್ತೇನೆ ಎಂದರು.
ಹೈಕಮಾಂಡ್ಗೆ ನಾಲ್ವರು ಪ್ರಮುಖರು ಇಲ್ಲಿನ ವಿಚಾರಗಳನ್ನು ತಿಳಿಸುತ್ತಾರೆ, ಅವರು ಕೂಡ ನನ್ನ ಬಗ್ಗೆ ತಿಳಿಸಿಲ್ಲ ಅವರ ಹೆಸರುಗಳನ್ನೆಲ್ಲಾ ನಾನು ಹೇಳುವುದಿಲ್ಲ ಎಂದರು.
ನಮ್ಮ ಪಕ್ಷದವರೇ ನನ್ನ ಬಳಿ ಮಾತನಾಡಿಲ್ಲ, ಇನ್ನು ಬೇರೆ ಪಕ್ಷದವರು ಯಾಕೆ ಸಂಪರ್ಕ ಮಾಡುತ್ತಾರೆ ಎಂದರು.
ನನ್ನ ಮಗಳೂ ಟ್ವೀಟ್ ಮಾಡುವ ಮುನ್ನ ನನ್ನ ಅಭಿಪ್ರಾಯ ಕೇಳಿರಲಿಲ್ಲ. ಬೆಂಬಲಿಗರಿಗೆ ಪ್ರತಿಭಟನೆ ಮಾಡಲು ಹೇಳಿರಲಿಲ್ಲ ಎಂದರು.
ನನ್ನ ಮುಂದಿನ ಗುರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರುವುದು. ನನ್ನ ಕೈಲಾದಷ್ಟು ಪಕ್ಷಕ್ಕೆ ದುಡಿದಿದ್ದೇನೆ ಮುಂದೆಯೂ ದುಡಿಯುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ