ಸಿದ್ದರಾಮಯ್ಯ ಹಿಂಬಾಲಕರಿಗೆ ಸಚಿವ ಸ್ಥಾನ: ಶಾಮನೂರು
Team Udayavani, Dec 25, 2018, 9:37 AM IST
ದಾವಣಗೆರೆ: ಸಿದ್ದರಾಮಯ್ಯನವರ ಬೆಂಬಲಿಗರಿಗೆ ಸಚಿವ ಸ್ಥಾನ ನೀಡಲಾಗಿದೆ. ನಾನು ಇರುವ ಸತ್ಯವನ್ನೇ
ಹೇಳಿದ್ದೇನೆ. ಅದನ್ನು ಎಷ್ಟು ಸಲ ಬೇಕಾದರೂ ಹೇಳುತ್ತೇನೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬೇಜಾರೇನೂ ಇಲ್ಲ. ಮಿನಿಸ್ಟ್ರೆ ಸ್ಥಾನದ ಅಪ್ಪನಗಿಂತಲೂ ಚೆನ್ನಾಗಿ ಕೆಲಸ ಮಾಡಿಸುತ್ತಿದ್ದೇನೆ ಎಂದರು. ಹಿರಿಯ ಸಚಿವರಾದ ದೇಶಪಾಂಡೆ ಮುಂತಾದವರನ್ನು ಮುಂದುವರಿಸಲಾಗಿದೆ ಯೆಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಹಿಂದಿದ್ದವರನ್ನೇ ಮುಂದುವರಿಸಿದ್ದಾರೆ. 2 ವರ್ಷ ನಂತರ ಬದಲಾವಣೆ ಮಾಡುತ್ತೇವೆ ಅಂದಿದ್ದರು. ಈಗಿನ್ನೂ 6-7 ತಿಂಗಳಾಗಿದೆ. ಮುಂದೆ ನೋಡೋಣ ಎಂದರು.
ಎಲ್ಲಿಯೋ ಒಂದು ಕಡೆ ವೀರಶೈವರನ್ನು ಕಡೆಗಣಿಸಲಾಗುತ್ತಿದೆಯೇ…ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವೀರಶೈವರನ್ನು ಕಡೆಗಣಿಸಿದ್ದಕ್ಕೆ ಅನುಭವಿಸಿದರಲ್ಲ. 60 ಸಾವಿರ ವೋಟ್ನಲ್ಲಿ ಸೋತರಲ್ಲ. ಡಿಪಾಸಿಟ್
ಕಳೆದುಕೊಂಡು ಬಂದರಲ್ಲ ಅವರಿಗೆ ಗೊತ್ತಾಗಬೇಕು ಎಂದರು.
ವೀರಶೈವರನ್ನು ಕಡೆಗಣಿಸಿದರಿಂದ ಲೋಕಸಭಾ ಚುನಾವಣೆಗೆ ಏನಾದರೂ ಎಫೆಕ್ಟ್ ಆಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅವರು (ಹೈಕಮಾಂಡ್) ಯೋಚನೆ ಮಾಡಬೇಕು. ಅದನ್ನ ನಾವಲ್ಲ ಯೋಚನೆ ಮಾಡೋದು ಎಂದು
ಹೇಳಿದರು.
ರಾಹುಲ್ಗೆ ದೂರು ನೀಡುವಿರಾ?: ನಾವು ಅಲ್ಲಿ ತನಕ ಯೋಚನೆ ಮಾಡಿಲ್ಲ. ಇಲ್ಲಿಯೇ ಯೋಚನೆ ಮಾಡುತ್ತೇವೆ. ಅವರೇ(ರಾಹುಲ್ ಗಾಂಧಿ) ನಮ್ಮ ಹತ್ತಿರ ಬರಬೇಕು. ನಾವ್ಯಾಕೆ ಹೋಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ