ದೇವಲಾಪುರದಲ್ಲಿ ಬೋನಿಗೆ ಬಿದ್ದ 3ನೇ ನರಭಕ್ಷಕ ಚಿರತೆ
Team Udayavani, Dec 31, 2018, 12:30 AM IST
ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ ಕರೆಗುಡ್ಡದ ಹೊಲದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಮತ್ತೂಂದು ನರಭಕ್ಷಕ ಚಿರತೆ ಭಾನುವಾರ ಬೆಳಗಿನ ಜಾವ ಸೆರೆ ಸಿಕ್ಕಿದೆ. ಆದರೆ ತಾಲೂಕಿನ ಮೆಟ್ರಿ ಗ್ರಾಮದ ಶಿವಪುರ ಶಾಲೆ ಹಿಂಭಾಗದ ಗುಡ್ಡದಲ್ಲಿ ಕುರಿಗಳಿಗೆ ತಪ್ಪಲು ತರಲು ಹೋಗಿದ್ದ ಕುರಿಗಾಯಿಗೆ ಮತ್ತೂಂದು ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಸೋಮಲಾಪುರ, ದೇವಲಾಪುರ ಗ್ರಾಮದಲ್ಲಿ ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡ ನರಭಕ್ಷಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರಿದಿದೆ. ದೇವಲಾಪುರದ ಕರೆಗುಡ್ಡದ ಪಂಪಾಪತಿಯ ಹೊಲದಲ್ಲಿ ಇಟ್ಟಿದ್ದ ಬೋನಿಗೆ ಭಾನುವಾರ ಬೆಳಗಿನ ಜಾವ 5 ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಡಿ.11ರಂದು ಸೋಮಲಾಪುರದಲ್ಲಿ ಬಾಲಕ ಹಾಗೂ ಡಿ.25ರಂದು ದೇವಲಾಪುರ ಗ್ರಾಮದ ಕರೆಗುಡ್ಡದ ಹತ್ತಿ ಹೊಲದಲ್ಲಿ ಬಾಲಕಿ ಬಲಿ ಪಡೆದಿತ್ತು. ಅರಣ್ಯಾಧಿಕಾರಿಗಳ ನಿರಂತರ ಕಾರ್ಯಾಚರಣೆಗೆ ಒಂದು ಹೆಣ್ಣು, ಒಂದು ಗಂಡು ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಆದರೆ, ಇನ್ನೂ ಈ ಭಾಗದಲ್ಲಿ ಚಿರತೆಗಳಿವೆ ಎಂಬ ಹಿನ್ನೆಲೆ ಅರಣ್ಯ ಅ ಧಿಕಾರಿಗಳು ಆಯಾ ಸ್ಥಳಗಳಲ್ಲಿ ಬೋನುಗಳನ್ನಿರಿಸಿ ಶೋಧ ಕಾರ್ಯ ತೀವ್ರಗೊಂಡಿದ್ದರಿಂದ ಬೆಳಗಿನ ಜಾವ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು