ಕಾಂಗ್ರೆಸ್-ಜೆಡಿಎಸ್ ಒಂದೇ ಪಕ್ಷ: ಎಚ್.ಡಿ.ರೇವಣ್ಣ
Team Udayavani, Jan 1, 2019, 12:30 AM IST
ಬೆಂಗಳೂರು:ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದೇ ಪಕ್ಷ ಇದ್ದಂತೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ನಿಂದ ದಲಿತರಿಗೆ ಸಚಿವಗಿರಿ ಕೊಟ್ಟರೂ ಜೆಡಿಎಸ್ನಿಂದ ಸಚಿವಗಿರಿ ಕೊಟ್ಟರೂ ಒಂದೇ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಜೆಡಿಎಸ್ನಿಂದ ದಲಿತರಿಗೆ ಸಚಿವಗಿರಿ ಕೊಡಲಿ ಎಂಬ ದೇಶಪಾಂಡೆ, ತಿಮ್ಮಾಪುರ ಹೇಳಿಕೆಗೆ ಟಾಂಗ್ ನೀಡಿರುವ ಅವರು, ಎರಡೂ ಪಕ್ಷಗಳು ಒಂದೇ ಆದಾಗ ದಲಿತರಿಗೆ ಯಾರು ಸಚಿವಗಿರಿ ಕೊಟ್ಟರೂ ಒಂದೇ ಅಲ್ಲವೇ ಎಂದರು.ಜೆಡಿಎಸ್ನ ಕೋಟಾದ ಎರಡು ಸಚಿವ ಸ್ಥಾನ ಆದಷ್ಟು ಬೇಗ ತುಂಬಲಾಗುವುದು. ಎಲ್ಲರಿಗೂ ನ್ಯಾಯ ಕೊಡಲಾಗುವುದು ಎಂದು ಹೇಳಿದರು.
ಬಿಜೆಪಿಯವರು ಆರು ತಿಂಗಳಿನಿಂದ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಿ ನಾವು ಸರ್ಕಾರ ರಚನೆ ಮಾಡಬಹುದು ಎಂದು ಕನಸು ಕಾಣುತ್ತಲೇ ಇದ್ದಾರೆ. ಅವರ ಆಸೆ ಈಡೇರುವುದಿಲ್ಲ ಎಂದು ತಿಳಿಸಿದರು.
ನಾನು ಬೇರೆಯವರು ಖಾತೆಯಲ್ಲಿ ಹಸ್ತಕ್ಷೇಪ ಮಾಡುತ್ತೇನೆ. ಗೃಹ ಖಾತೆ ಬೇರೆಯವರಿಗೆ ಕೊಟ್ಟರೆ ನಾನು ಹಸ್ತಕ್ಷೇಪ ಮಾಡಲು ಆಗಲ್ಲ ಎಂದು ವಿರೋಧ ಮಾಡಿದೆ ಎಂಬೆಲ್ಲಾ ಮಾತುಗಳು ಸತ್ಯಕ್ಕೆ ದೂರ. ನಾನು ಎಂದೂ ಯಾವ ಖಾತೆಯಲ್ಲೂ ಮಧ್ಯಪ್ರವೇಶ ಮಾಡಿಲ್ಲ, ಅದರ ಅವಶ್ಯಕತೆಯೂ ನನಗಿಲ್ಲ ಎಂದು ಹೇಳಿದರು.
ನಾನು ಎಂದಾದರೂ ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದೆನಾ ಎಂದು ಗೃಹ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್ ಅವರನ್ನೇ ಬೇಕಾದರೆ ಕೇಳಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು