ಆರ್ಟಿಪಿಎಸ್ಗೆ ಜಲಕಂಟಕ!
Team Udayavani, Jan 3, 2019, 12:30 AM IST
ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ಬೇಸಿಗೆಯಲ್ಲಿ ಎದುರಾಗುತ್ತಿದ್ದ ನೀರಿನ ಸಮಸ್ಯೆ ಈಗಲೇ ಬಂದೊದಗಿದ್ದು, ಅಧಿ ಕಾರಿಗಳು ಚಡಪಡಿಸುವಂತೆ ಮಾಡಿದೆ.
ಸದ್ಯಕ್ಕೆ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹವಿದೆ. ಆದರೆ, ಆರ್ಟಿಪಿಎಸ್ ಮತ್ತು ವೈಟಿಪಿಎಸ್ಗೆ ನಿಗದಿಪಡಿಸಿದ ನೀರು ಹರಿಸಲು ಮೀನಮೇಷ ಎಣಿಸುವಂತಾಗಿದೆ. ಈಗ ನೀರು ಹರಿಸಿದರೆ ಅದು ಕೃಷಿ ಚಟುವಟಿಕೆಗೆ ಬಳಕೆಯಾಗುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಜಲಾಶಯದ ಅ ಧಿಕಾರಿಗಳು ಅಳೆದು ತೂಗಿ ನೀರು ಹರಿಸುವಂತಾಗಿದೆ.
ಪ್ರತಿ ವರ್ಷ ಆರ್ಟಿಪಿಎಸ್ಗೆ 2.8 ಟಿಎಂಸಿ ಅಡಿ ನೀರು ಹರಿಸಬೇಕಿದೆ. ವಿದ್ಯುತ್ ಕೇಂದ್ರದ ಎಲ್ಲ 8 ಘಟಕಗಳು ಸಕ್ರಿಯವಾದರೆ ನಿತ್ಯ 0.07 ಟಿಎಂಸಿ ಅಡಿ ನೀರು ಬೇಕಾಗಲಿದೆ. ಬೇಸಿಗೆಯಲ್ಲಾದರೆ ಆ ಪ್ರಮಾಣ 0.01 ಟಿಎಂಸಿ ಅಡಿ ಆಗಲಿದೆ. ಆದರೆ, 3 ದಿನದಿಂದ ನೀರಿನ ಸಮಸ್ಯೆಯಿದ್ದು, ಅಧಿಕಾರಿಗಳು ನಾರಾಯಣಪುರ ಜಲಾಶಯದ ಆಡಳಿತ ಮಂಡಳಿಗೆ ಒತ್ತಡ ಹಾಕಿಸಿ ನೀರು ಬಿಡಿಸಿಕೊಂಡಿದ್ದಾರೆ. ಆಲಮಟ್ಟಿಯಿಂದ ಬುಧವಾರ ರಾತ್ರಿ 1 ಟಿಎಂಸಿ ಅಡಿ ನೀರು ಹರಿಸಲಾಗುತ್ತಿದೆ ಎಂಬ ಮಾಹಿತಿ ಇದೆ. ಕೃಷ್ಣ ನದಿ ಬರಿದಾಗಿದ್ದು, ಗುರ್ಜಾಪುರ ಬ್ಯಾರೇಜ್ ಕೂಡ ನೆಲಕಚ್ಚಿದೆ. ಇದರಿಂದ ಇರುವ ನೀರನ್ನೇ ಬಳಸಿ ವಿದ್ಯುತ್ ಉತ್ಪಾದಿಸಬೇಕಿದೆ.
ಒಂದು ಟಿಎಂಸಿ ನದಿಗೆ: ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ 1 ಟಿಎಂಸಿ ಅಡಿ ನೀರು ಹರಿಸಲು ಒಪ್ಪಿದ್ದು, ಬುಧವಾರ ರಾತ್ರಿಯೇ ಬಿಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಲ್ಲದೇ, ನಾರಾಯಣಪುರ ಜಲಾಶಯದಿಂದಲೂ ಬುಧವಾರ ಸಂಜೆ 5 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ ಎಂದು ನಾರಾಯಣಪುರ ಜಲಾಶಯದ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
ನೀರಿನ ಕಳವು ಸಾಧ್ಯತೆ: ಕೆಲ ಭಾಗದ ನದಿ ಪಾತ್ರದಲ್ಲಿ ರೈತರು ಬೇಸಿಗೆ ಬೆಳೆ ಬಿತ್ತನೆ ಮಾಡಿದ್ದು, ಅಕ್ರಮ ಪಂಪ್ಸೆಟ್
ಅಳವಡಿಸಿಕೊಂಡಿದ್ದಾರೆ. ನದಿಗೆ ನೀರು ಹರಿಸಿದ್ದಾರೆ ಎಂದು ತಿಳಿಯುತ್ತಿದ್ದಂತೆ ನೀರು ಕಳವು ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಲೆಕ್ಕಕ್ಕೆ ಒಂದು ಟಿಎಂಸಿ ಅಡಿ ಬಿಟ್ಟರೂ ಅದು ಬಂದು ಸೇರುವುದರಲ್ಲಿ ಸಾಕಷ್ಟು ಪೋಲಾಗುವ ಸಾಧ್ಯತೆ ಇರುತ್ತದೆ.
3 ದಿನಗಳಿಂದ ನೀರಿನ ತೀವ್ರ ಸಮಸ್ಯೆ ಕಾಡುತ್ತಿದೆ ಹೀಗಾಗಿ 1 ಟಿಎಂಸಿ ಅಡಿ ನೀರು ಬಿಡುವಂತೆ ನಾರಾಯಣಪುರ ಜಲಾಶಯದ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ. ಬುಧವಾರ ರಾತ್ರಿಯೇ ನೀರು ಹರಿಸಲು ಒಪ್ಪಿದ್ದು, 2 ದಿನದೊಳಗೆ ನಮಗೆ ತಲುಪಲಿದೆ.
– ರಾಜಮುಡಿ, ಮುಖ್ಯ ಎಂಜಿನಿಯರ್,
ಸಿವಿಲ್ ವಿಭಾಗ ಆರ್ಟಿಪಿಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು