ಐಟಿ ದಾಳಿ ಬಳಿಕ ಶಿವರಾಜ್ಕುಮಾರ್, ಪುನೀತ್ ಮೊದಲ ಪ್ರತಿಕ್ರಿಯೆ
Team Udayavani, Jan 5, 2019, 5:16 AM IST
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 2 ದಿನಗಳ ಕಾಲ ನಿರಂತರ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಹ್ಯಾಟ್ರಿಕ್ ಹಿರೋ ಶಿವರಾಜ್ಕುಮಾರ್ ಮತ್ತು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶುಕ್ರವಾರ ರಾತ್ರಿ 11.30 ರ ವೇಳೆಗೆ ಐಟಿ ಅಧಿಕಾರಿಗಳು ಮನೆಯಿಂದ ತೆರಳಿದ ಬಳಿಕ ಮಾತನಾಡಿದ ಪುನೀತ್ ರಾಜ್ಕುಮಾರ್, ಐಟಿಗೆ ನಾವು ನಾಗರಿಕರಾಗಿ ಸಹಕರಿಸಿದ್ದೇವೆ. ನಾವು ಅವರಿಗೆ ತೊಂದರೆ ಕೊಟ್ಟಿಲ್ಲ, ಅವರೂ ನಮಗೆ ತೊಂದರೆ ಕೊಟ್ಟಿಲ್ಲ ಸಹಕರಿಸಿದ್ದೇವೆ ಅಷ್ಟೇ ಎಂದರು.
ಅಕೌಂಟ್ ವಿಚಾರದಲ್ಲಿ ವ್ಯತ್ಯಾಸ ಕಂಡು ಬಂದರೆ ದಾಳಿ ಮಾಡುತ್ತಾರೆ. 1984 ರಲ್ಲಿ ಚೆನ್ನೈನಲ್ಲಿ ಇರುವಾಗಲೂ ದಾಳಿ ನಡೆದಿತ್ತು ಎಂದರು.
ಸ್ವಲ್ಪ ನೋವಾಗಿದೆ
ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ಕುಮಾರ್
ನನ್ನ ಮನೆಯ ಮೇಲೆ ಮೊದಲ ಬಾರಿ ದಾಳಿ ಆಗಿದೆ, ಕಾರಣ ಗೊತ್ತಿಲ್ಲ .ಆದಾಯ ತೆರಿಗೆ ಪಾವತಿಯ ಎಲ್ಲಾ ದಾಖಲೆಗಳು ಸರಿಯಾಗಿವೆ ಎಂದರು.
ಚೆನ್ನೈನಲ್ಲಿ ಇರುವಾರ 1984 ಮತ್ತು 85 ರಲ್ಲೂ ದಾಳಿ ನಡೆದಿತ್ತು. ಮೊನ್ನೆ ದಾಳಿ ಆದಾಗ ಸ್ವಲ್ಪ ಬೇಸರ ಆಗಿತ್ತು. ಸ್ವಲ್ಪ ಕಿರಿಕಿರಿಯಾದರೂ ದಾಖಲೆಗಳನ್ನು ನೀಡಬೇಕಿತ್ತು ಎಂದರು.
ಐಟಿ ಇಲಾಖೆಯವರು ಅವರ ಕೆಲಸ ಮಾಡಿದ್ದಾರೆ. ಇಂದು ಚನ್ನಪಟ್ಟಣದಲ್ಲಿ ದ್ರೋಣ ಚಿತ್ರೀಕರಣವಿತ್ತು, ಅದನ್ನು ರದ್ದು ಮಾಡಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ