ಸಾಗರ ತಾಲೂಕಿನಲ್ಲಿ ಮತ್ತೆ ಮೂವರಿಗೆ ಜ್ವರ
Team Udayavani, Jan 12, 2019, 12:35 AM IST
ಸಾಗರ: ಮಲೆನಾಡಿನ ಜನರನ್ನು ಕಂಗಾಲಾಗಿಸಿದ ಮಂಗನ ಕಾಯಿಲೆ ಉಲ್ಬಣಗೊಳ್ಳುತ್ತಲೇ ಇದ್ದು, ಸಾಗರ ತಾಲೂಕಿನ ಅರಳಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಮತ್ತೆ ಮೂವರು ಜ್ವರಕ್ಕೆ ತುತ್ತಾಗಿದ್ದಾರೆ. ಅಲ್ಲದೆ ಹಲವೆಡೆ ಮೃತ ಮಂಗಗಳೂ ಪತ್ತೆಯಾಗಿವೆ.
ಶುಕ್ರವಾರ ಒಟ್ಟು ನಾಲ್ಕು ಮಂದಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಳಗೋಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂರು ಜ್ವರದ ಪ್ರಕರಣ ದಾಖಲಾಗಿದೆ. ಮುಂಜಾಗ್ರತೆ ಕ್ರಮವಾಗಿ ದೀಪಾ ಮರಬಿಡಿ, ವಿಜಯಕುಮಾರ್ ಹಾಗೂ ಸುರೇಂದ್ರ ಅವರನ್ನು ಮಣಿಪಾಲ್ಗೆ ಕಳುಹಿಸಿಕೊಡಲಾಗಿದೆ. ಸಾಗರ ಆಸ್ಪತ್ರೆಯಿಂದ ಕೂಡ ಓರ್ವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ರವಾನಿಸಲಾಗಿದೆ. ಈವರೆಗೆ 44 ಪ್ರಕರಣಗಳಲ್ಲಿ ಕೆಎಫ್ಡಿ ವೈರಸ್ ಇದ್ದಿರುವುದು ದೃಢಪಟ್ಟಿದ್ದು 9 ವರ್ಷದ ಪೂಜಾ ಎಂಬ ಬಾಲಕಿ ಹಾಗೂ ನಾಲ್ಕು ವರ್ಷದ ಸುಪ್ರೀತ್ ಎಂಬ ಬಾಲಕನಲ್ಲೂ ಕಾಯಿಲೆಯ ವೈರಸ್ ಪತ್ತೆಯಾಗಿವೆ ಎಂದು ಹೇಳಲಾಗಿದೆ. ಆದರೆ ಆರೋಗ್ಯ ಇಲಾಖೆ ಇದನ್ನು ದೃಢಪಡಿಸಿಲ್ಲ.
ಇನ್ನು ಮಂಗಗಳ ಸಾವು ಮುಂದುವರಿದಿದ್ದು, ಕೆಳದಿ ಹತ್ತಿರದ ಹಾರೆಗೊಪ್ಪದಲ್ಲಿನ ಸುಬ್ರಾಯ ಭಟ್ ಅವರ ಅಡಕೆ ತೋಟದಲ್ಲಿ ಶುಕ್ರವಾರ ಸತ್ತ ಮಂಗವೊಂದು ಕಂಡುಬಂದಿದೆ. ಪೋಸ್ಟ್ಮಾರ್ಟಂ ಮಾಡಿ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಗ್ಯ ಇಲಾಖೆಯ ವೀರಭದ್ರಪ್ಪ, ಸುರೇಶ್ ಜವಳಿ, ವೈದ್ಯರಾದ ಡಾ|ಉಮಾದೇವಿ, ಅರಣ್ಯ ಇಲಾಖೆಯ ಕಿರಣ್, ಶ್ರೀಧರ್ ಸಾಗರ್ ಇತರರ ಸಮ್ಮುಖದಲ್ಲಿ ಮಂಗನನ್ನು ಸುಡಲಾಯಿತು.
ಇದಲ್ಲದೆ ತಾಲೂಕಿನ ಕರೂರು ಮತ್ತು ಬ್ರಾಹ್ಮಣ ಮಂಚಾಲೆಯಲ್ಲಿ ತಲಾ ಒಂದು ಮಂಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತುಮರಿ ಭಾಗದಲ್ಲಿ ಒಂದು ಮಂಗ ಅಸ್ವಸ್ಥ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಹೊಸನಗರ ತಾಲೂಕಿನ ಸೊನಲೆಯಲ್ಲಿ ಒಂದು ಮಂಗ ಮೃತಪಟ್ಟಿದೆ. ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಈವರೆಗೆ 22 ಮಂಗಗಳು ಮೃತಪಟ್ಟಿರುವ ದಾಖಲೆಯಿದ್ದು, ತಾಲೂಕಿನಲ್ಲಿ ಒಂದು ತಿಂಗಳಿನಲ್ಲಿ ಸಾವನ್ನಪ್ಪಿದ ಮಂಗಗಳ ಸಂಖ್ಯೆ 40 ದಾಟಿದ್ದರೆ, ಹೊಸನಗರ ತಾಲೂಕಿನಲ್ಲಿ 18 ಮಂಗಗಳು ಮೃತಪಟ್ಟಿವೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ