ಶರಾವತಿ ಪಂಪ್ಡ್ ಸ್ಟೋರೇಜ್‌ ಪ್ರಾಜೆಕ್ಟ್ ಗೆ ಸಿದ್ಧತೆ


Team Udayavani, Jan 13, 2019, 12:30 AM IST

sharavathi.jpg

ಹೊನ್ನಾವರ: ಲಿಂಗನಮಕ್ಕಿ, ಮಹಾತ್ಮ ಗಾಂಧಿ  ವಿದ್ಯುತ್‌ ಕೇಂದ್ರದಿಂದ ಹೊರ ಬಂದ ನೀರನ್ನು ಟೇಲರೀಸ್‌ನಲ್ಲಿ ಸಂಗ್ರಹಿಸಿ, ಪುನ: ವಿದ್ಯುತ್‌ ಉತ್ಪಾದಿಸುವ ಶರಾವತಿ ಯೋಜನೆಗೆ ಹೆಚ್ಚುವರಿಯಾಗಿ ಈ ನೀರನ್ನು ಮೇಲೆತ್ತಿ ಭೂಗರ್ಭ ಕೊಳವೆ ಮುಖಾಂತರ ತಲಕಳಲೆ ಅಣೆಕಟ್ಟೆಗೆ ಸಾಗಿಸಿ, ಆ ನೀರಿನಿಂದ ಪುನಃ ಇನ್ನೊಂದು ವಿದ್ಯುತ್‌ ಕೇಂದ್ರ ಸ್ಥಾಪಿಸಿ, ವಿದ್ಯುತ್‌ ಮತ್ತು ಜಲಪಾತದ ವೈಭವ ನಿರಂತರಗೊಳಿಸುವ ಮಹಾನ್‌ ಯೋಜನೆಯೊಂದು ಸಿದ್ಧವಾಗುತ್ತಿದೆ.

ಶರಾವತಿ ಪಂಪ್ಡ್ ಸ್ಟೋರೇಜ್‌ ಪ್ರಾಜೆಕ್ಟ್ ಎಂದು ಕರೆಯಲ್ಪಡುವ ಈ ಯೋಜನೆ ಜಾರಿಗೆ ಬಂದರೆ 2,000 ಮೆ.ವ್ಯಾ. ವಿದ್ಯುತ್‌ ಉತ್ಪಾದನೆಯಾಗಿ ರಾಜ್ಯದ ವಿದ್ಯುತ್‌ ಬರ ನೀಗಲಿದೆ. ಜೊತೆಯಲ್ಲಿ ಜೋಗ ಜಲಪಾತದಿಂದ ಹಗಲು 8 ತಾಸು ಸಾವಿರ ಕ್ಯುಸೆಕ್‌ ನೀರು ಬಿಟ್ಟು ಜಲಪಾತದ ಆಕರ್ಷಣೆ ನಿರಂತರಗೊಳಿಸುವ ಯೋಜನೆಯೊಂದು ಸಿದ್ಧವಾಗಿದೆ. ಸರ್ವೇ ಮುಗಿದು ಭೂಸಮೀಕ್ಷೆ ಆರಂಭವಾಗಲಿದೆ.

5017.44 ಕೋಟಿ ರೂ.ವೆಚ್ಚದ ಈ ಯೋಜನೆಯನ್ನು 5 ವರ್ಷ 6 ತಿಂಗಳಲ್ಲಿ ಮುಗಿಸಬಹುದಾಗಿದೆ. ಹೊಸ ಅಣೆಕಟ್ಟುಗಳನ್ನು ರಚಿಸದೆ ಎತ್ತರದಲ್ಲಿರುವ ತಲಕಳಲೆ ಅಣೆಕಟ್ಟಿಗೆ ತಗ್ಗು ಪ್ರದೇಶದಲ್ಲಿರುವ ಟೇಲರೀಸ್‌ ನೀರನ್ನು ವಿದ್ಯುತ್‌ ಬಳಸಿ ಏರಿಸಿ, ಇನ್ನೊಂದು ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಿಸುವುದು ಈ ಯೋಜನೆಯ ಗುರಿ. 

ಶರಾವತಿ ಯೋಜನೆಗಳಲ್ಲಿ ಕೇವಲ 30-50 ಪೈಸೆಗೆ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗುತ್ತದೆ. ಬೇಡಿಕೆ ಕಡಿಮೆ ಇರುವ ಅವ ಧಿಯಲ್ಲಿ ಈ ವಿದ್ಯುತ್‌ ಬಳಸಿಕೊಂಡು ಟೇಲರೀಸ್‌ ಅಣೆಕಟ್ಟಿನಿಂದ ನೀರನ್ನು ಬೃಹತ್‌ ಪಂಪ್‌ಗ್ಳ ಮೂಲಕ ತಲಕಳಲೆ ಅಣೆಕಟ್ಟಿಗೆ ಸಾಗಿಸಿ ವಿದ್ಯುತ್‌ ಬೇಡಿಕೆ ಇರುವ ಅವಧಿಯಲ್ಲಿ ಹೆಚ್ಚು ಉತ್ಪಾದಿಸಿ 7-8 ರೂ.ದರದಲ್ಲಿ ಮಾರಿಕೊಳ್ಳಬಹುದು ಎಂಬುದು ಕೆಪಿಸಿಯ ಆಲೋಚನೆ.
ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್‌.ಶೆಟ್ಟಿಯವರು ಜೋಗ ಅಭಿವೃದ್ಧಿಯ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಪರಿಸರ ಹಾಳಾಗದಂತೆ ಭೂಗರ್ಭ ಕೊಳವೆಯ ಮುಖಾಂತರ ನೀರನ್ನು ಸಾಗಿಸುವ ಯೋಜನೆ ಇದು. ಇದರಿಂದಾಗಿ ಲಿಂಗನಮಕ್ಕಿಯಲ್ಲಿ ಹೆಚ್ಚುವರಿ ನೀರು ಉಳಿದುಕೊಳ್ಳುತ್ತದೆ. ಇದರಿಂದ ಕೇವಲ 30 ಮೆ.ವ್ಯಾ. ವಿದ್ಯುತ್‌ ಉತ್ಪಾದಿಸುವ ಮಹಾತ್ಮಗಾಂಧಿ  ಕೇಂದ್ರದಿಂದ ಅದರ ಗರಿಷ್ಠ ಸಾಮರ್ಥ್ಯ 139 ಮೆ.ವ್ಯಾ.ನಷ್ಟು ಉತ್ಪಾದಿಸಬಹುದು. 

ಲಿಂಗನಮಕ್ಕಿಯಲ್ಲಿ ಹೆಚ್ಚು ಉಳಿಯುವ ನೀರನ್ನು ಹೊರ ಬಿಟ್ಟು ಜೋಗ ಜಲಪಾತದ ವೈಭವ ಹೆಚ್ಚಿಸಲು ಬಳಸಿಕೊಳ್ಳಬಹುದು. ಜಲಪಾತದಿಂದ ಬಂದ ನೀರು ಟೇಲರೀಸ್‌ ತಲುಪಿದಾಗ ಅದನ್ನು ಮರಳಿ ಪಂಪ್‌ ಮಾಡಿದರೆ ತಲಕಳಲೆ ಸೇರಿಕೊಳ್ಳುತ್ತದೆ. ಮಳೆಗಾಲದಲ್ಲಿ 4 ಗೇಟ್‌ ಎರಡಡಿ ಎತ್ತಿದರೆ, ಬೇಸಿಗೆಯಲ್ಲಿ ನಿತ್ಯ ಸಾವಿರ ಕ್ಯುಸೆಕ್‌ ನೀರು ಬಿಟ್ಟರೆ ಜೋಗ ಝಗಮಗಿಸುತ್ತದೆ. ವಿದ್ಯುತ್‌ ಕೊರತೆಯೂ ನೀಗುತ್ತದೆ. ಪ್ರವಾಸೋದ್ಯಮ ಬಲಗೊಳ್ಳುತ್ತದೆ. 

ಪುಟ್ಟ ನಾರ್ವೆ ದೇಶ ನೀರಿನ ಪುನರ್‌ ಬಳಕೆಯ ಇಂತಹ ಯೋಜನೆಯಿಂದ ವಿದ್ಯುತ್‌ ಉತ್ಪಾದಿಸಿ, ವಿದೇಶಕ್ಕೆ ಮಾರುತ್ತದೆ. ಹಲವು ದೇಶಗಳಲ್ಲಿ ಇಂತಹ ಯೋಜನೆ ಜಾರಿಗೆ ಬಂದಿದೆ. ಹೆಚ್ಚುವರಿ ಅಣೆಕಟ್ಟಿಲ್ಲದೆ ನೀರನ್ನು ಪುನ: ಬಳಸಿ ನಿರಂತರ ವಿದ್ಯುತ್‌ ಉತ್ಪಾದಿಸುವ, ಪರಿಸರಕ್ಕೆ ಅತಿ ಕಡಿಮೆ ಹಾನಿ ಮಾಡುವ ಈ ಜಲವಿದ್ಯುತ್‌ ಯೋಜನೆ ಉತ್ತಮವಾದದ್ದು. ಉಷ್ಣ, ಅಣು ವಿದ್ಯುತ್‌ಗಳಿಂದ ಹಲವು ಹಾನಿ, ದುಬಾರಿ ಖರ್ಚು ಇರುವಾಗ ಇಂತಹ ಯೋಜನೆ ಅಪೂರ್ವವಾದದ್ದು, ಅಗತ್ಯವಾದದ್ದು ಎನ್ನುವ ಅಭಿಪ್ರಾಯ ಮೂಡುತ್ತಿದೆ.

– ಜೀಯು, ಹೊನ್ನಾವರ

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.