ಕಾಲುವೆಗೆ ಬಿದ್ದ ಕಾರು: ಐವರ ಜಲಸಮಾಧಿ
Team Udayavani, Jan 16, 2019, 12:30 AM IST
ಸವದತ್ತಿ/ಕೆ.ಶಿವಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಕಾರು ಬಿದ್ದು ಒಂದೇ ಕುಟುಂಬದ ಐವರು ನೀರು ಪಾಲಾದ ಘಟನೆ ಸೋಮ ವಾರ ತಡರಾತ್ರಿ ತಾಲೂಕಿನ ಕಡಬಿ- ಶಿವಾಪುರದ ಹತ್ತಿರ ನಡೆದಿದೆ. ಗೋಕಾಕ ಮೂಲದ ಪೂಜೇರಿ ಕುಟುಂಬದ ಫಕ್ಕಿರವ್ವ (29), ಹನುಮಂತ (60), ಲಗಮಣ್ಣ (38), ಪಾರವ್ವ (50), ಲಕ್ಷ್ಮೀ (40) ಮೃತರು. ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ಕಳೆದು ಕೊಂಡ ಕಾರು ಘಟಪ್ರಭಾ ಎಡ ದಂಡೆ ಕಾಲುವೆಗೆ ಬಿದ್ದಿದೆ. ಕಾರು ಚಾಲಕ ಅಡಿವೆಪ್ಪ ಮಾಳಗಿ ಈಜಿ ದಡ ಸೇರಿದ್ದಾರೆ. ಉಳಿದವರು ನೀರು ಪಾಲಾಗಿದ್ದಾರೆ. ನಾಲ್ವರ ಶವಗಳನ್ನು ಹೊರ ತೆಗೆಯಲಾಗಿದೆ.