ಸ್ವತಂತ್ರವಾಗಿ ಉಸಿರಾಡಿದ ಶ್ರೀಗಳು!; ಮುಂದುವರಿದ ಚಿಕಿತ್ಸೆ
Team Udayavani, Jan 17, 2019, 4:05 PM IST
ತುಮಕೂರು: ತೀವ್ರ ಅನಾರೋಗ್ಯದಿಂದಾಗಿ ಮಠದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಸ್ವಾಮೀಜಿಗಳ ಆರೋಗ್ಯ ಗುರುವಾರ ಸ್ಥಿರವಾಗಿದ್ದು , ಸುಮಾರು 45 ನಿಮಿಷಗಳ ಕಾಲ ವೆಂಟಿಲೇಟರ್ ಇಲ್ಲದೆ ಸ್ವತಂತ್ರವಾಗಿ ಉಸಿರಾಟ ನಡೆಸಿದ್ದಾರೆ.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿದ್ಧಗಂಗಾ ಶ್ರೀಗಳನ್ನು ಬುಧವಾರ ಬೆಳಗ್ಗೆ ಹಳೇ ಲ್ಲಿಮಠಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಗುತ್ತಿದೆ.ತಜ್ಞ ವೈದ್ಯರು ಶ್ರೀಗಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.
ಭಕ್ತರಿಗೆ ಶ್ರೀಗಳ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ.ಜತೆಗೆ ಮಠದ ಸುತ್ತಲೂ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿದೆ.
ಗಣ್ಯಾತೀಗಣ್ಯರು ಮಠಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮಠಕ್ಕೆ ಸಮೀಪ ಇರುವ ಜಾಗಗಳಲ್ಲಿ 14 ಹೆಲಿಪ್ಯಾಡ್ಗಳನ್ನು ನಿರ್ಮಾಣ ಮಾಡಲಾಗಿದೆ.