ಸನ್ಯಾಸ ದೀಕ್ಷೆ ಕೊಡಿಸಿದ ತಂದೆ ಮೇಲೆ ಸಿಟ್ಟಿತ್ತು 


Team Udayavani, Jan 20, 2019, 1:00 AM IST

95.jpg

ಬೆಂಗಳೂರು: “ಒಲ್ಲದ ಮನಸ್ಸಿನಿಂದ ನಾನು ಸನ್ಯಾಸ ದೀಕ್ಷೆ ಸ್ವೀಕರಿಸಿದೆ. ಸನ್ಯಾಸ ದೀಕ್ಷೆ ಇಷ್ಟ
ವಿಲ್ಲದಿದ್ದರೂ ಅದನ್ನು ಕೊಡಿಸಿ, ಕೆಡಿಸಿ ಬಿಟ್ಟರಲ್ಲ ಎಂದು ನನ್ನ ತಂದೆಯ ಮೇಲೆ ಸಿಟ್ಟಿತ್ತು’ಎಂದು ವಿದ್ವಾನ್‌ ವಿದ್ಯಾಭೂಷಣರು ಹೇಳಿದರು.

ತಮ್ಮ ಜೀವನ ಕಥನ “ನೆನಪೇ ಸಂಗೀತ’, ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮನದುಂಬಿ ಮಾತನಾಡಿದರು.”ಅಪ್ಪನನ್ನು ಅಷ್ಟೊಂದು ನಾನು, ಹಚ್ಚಿಕೊಂಡಿರಲಿಲ್ಲ.ಆದರೆ, ಪುಸ್ತಕ ಬರೆಯುತ್ತಿದ್ದಾಗ ಅಪ್ಪಯ್ಯ ನನ್ನ ಮೇಲೆ ಎಷ್ಟೊಂದು ಪ್ರಭಾವ ಬೀರಿದ್ದಾರೆ ಎಂಬುದು ಗೊತ್ತಾಯಿತು. ಅಪ್ಪಯ್ಯನ (ಅಪ್ಪನ)ಬಗ್ಗೆ ನನಗೆ ಭಯವಿತ್ತು. ಆ ಮೇಲೆ ಇಂತಹ ಸನ್ಯಾಸವನ್ನು ಕೊಡಿಸಿ, ಕೆಡಿಸಿಬಿಟ್ಟನಲ್ಲ ಎಂಬ ಸಿಟ್ಟಿತ್ತು. ಮನಸ್ಸಿನಲ್ಲಿ ವಿಷಾದವಿತ್ತು. ನಂತರ ಅದು ಪ್ರೀತಿಯಾಗಿ ಪರಿಣಮಿಸಿತು. ಅವರು ತೀರಿಹೋದಾಗ ಪಶ್ಚಾತ್ತಾಪ ಎನಿಸಿತು,’ ಎಂದು ತಂದೆಯನ್ನು ನೆನಪಿಸಿ ಕೊಂಡರು.

“ಆತ್ಮಕತೆ ಬರೆಯುವುದು ಒಂದು ಸವಾಲು. ಎಲ್ಲ ಆತ್ಮಕತೆಗಳು ಹೆಚ್ಚಾಗಿ ಅತಿ ಶಯೋಕ್ತಿಯಿಂದ ಕೂಡಿರುತ್ತೆ. ತನ್ನನ್ನು ತಾನು ವಿಜೃಂಭಿಸಿಕೊಳ್ಳುವಂತಹ ಸಂದರ್ಭಗಳಿರುತ್ತವೆ. ಅದನ್ನು ಮೀರಿ ಯಾರಿಗೂ ಹಾನಿಯಾಗದ ರೀತಿಯಲ್ಲಿ ಶಿಸ್ತನ್ನು ಇಟ್ಟು ಕೊಂಡು ಆತ್ಮಕತೆ ಬರೆಯಬೇಕು. ಅದೇ ರೀತಿಯ ಹಾದಿಯಲ್ಲಿ ನನ್ನ ಬರಹ ಸಾಗಿದೆ,’ಎಂದರು.

ನೆನಪಿನ ಗುಚ್ಛ: “ಜೀವನ ಕಥೆ ಬಿಡುಗಡೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆಗ
ಫೋನ್‌ ಕರೆಗಳು ನನಗೆ ಬರ ತೊಡಗಿದವು. ವಿದ್ಯಾಭೂಷಣ್‌ಜಿ, ಆ ಪುಸ್ತಕವನ್ನು ನೀವೇ ಬರೆದದ್ದಾ? ಅಥವಾ ಬೇರೆಯವರಿಂದ ಬರೆಯಿಸಿದ್ದಾ ಎಂಬ ಪ್ರಶ್ನೆಗಳು ಕೇಳಿ ಬಂದವು. ಅವರ ಮಾತಿನಿಂದ ನನಗೇನೂ ಗಾಬರಿಯಾಗಲಿಲ್ಲ. ಆ ರೀತಿ ಸಂಶಯ ಪಟ್ಟರಲ,ಅದು ಪುಸ್ತಕ ಅಷ್ಟು ಚೆನ್ನಾಗಿ ನಾನು ಬರೆದಿದ್ದೇನಾ ಎಂದು ಅನಿಸಿತು,” ಎಂದು ಹೇಳಿದರು.

“ಸಂಗೀತದ ಬಗ್ಗೆ ನನಗೇನೂ ಗೊತ್ತಿರಲಿಲ್ಲ.ಆದರೆ ಹಾಡಲು ಆರಂಭಿಸಿದ ಮೇಲೆಸಂಗೀತದ ಬಗ್ಗೆ ಮತ್ತಷ್ಟು ಪರಿಚಯವಾಯಿತು. ನಾನು ಹಾಡಿದ ಹಾಡಿಗೆ ಹೈದ್ರಾಬಾದ್‌ನ ಆಕಾಶವಾಣಿಯ ಕನ್ನಡ ವಿಭಾಗದವರು 25 ರೂ. ಸಂಭಾವನೆ ಕೊಟ್ಟಾಗ ಮತ್ತಷ್ಟು ಖುಷಿಯಾಯ್ತು,’ ಎಂದು ಹೇಳಿದರು.

ಸಾಹಿತಿ ಜಯಂತ ಕಾಯ್ಕಿಣಿ ಮಾತನಾಡಿ, ಬೇಂದ್ರೆಯವರು ಆತ್ಮಕಥೆಯನ್ನೇ ಬರೆಯಲಿಲ್ಲ. ಒಂದು ಸಲ ಅನುಭವಿಸಿದ್ದನ್ನು ಮತ್ತೆ ಮತ್ತೆ ಏಕೆ ಅನುಭವಿಸಬೇಕು ಎನ್ನುತ್ತಿದ್ದರು. ಹೀಗಾಗಿ ಆತ್ಮಕತೆಯ ಬರವಣಿಗೆಯ ಬಗ್ಗೆ ನಾನಾ ರೀತಿಯ ಜಿಜ್ಞಾಸೆಗಳಿವೆ. ಆದರೂ, ಸಂಗೀತದ ಬಗ್ಗೆ ಅಪಾರ ಒಲವು ಹೊಂದಿರುವ ವಿದ್ಯಾಭೂಷಣರಲ್ಲಿ ಸಾಹಿತ್ಯ ಪ್ರಜ್ಞೆ ಇದೇ ಎಂಬುವುದು ಈ ಪುಸ್ತಕದ ಮುಖೇನ ಗೊತ್ತಾಗುತ್ತದೆ. ಇದು ಅವರ ಮೊದಲ ಪುಸ್ತಕ ಮತ್ತಷ್ಟು ಪುಸ್ತಕ ಬರಲಿ ಎಂದರು. ಲೇಖಕ ಲಕ್ಷ್ಮೀ ಶ ತೋಳ್ಪಾಡಿ,ವಿದ್ಯಾಭೂಷಣರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.