ಬೋಟ್ ಮುಳುಗಿ ಎಂಟು ಮಂದಿ ಜಲಸಮಾಧಿ
Team Udayavani, Jan 22, 2019, 12:30 AM IST
ಕಾರವಾರ: ಅರಬ್ಬಿ ಸಮುದ್ರದ ನಡುಗಡ್ಡೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ನರಸಿಂಹ ದೇವರ ಜಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ಯಾಂತ್ರಿಕ ಬೋಟ್ ಮುಳುಗಿ ಮೂರು ವರ್ಷದ ಮಗು ಸೇರಿ ಎಂಟು ಮಂದಿ ಸೋಮವಾರ ಮೃತಪಟ್ಟಿದ್ದಾರೆ.
ಇನ್ನೂ ಏಳು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.ಕೂರ್ಮಗಡ ಮತ್ತು ದೇವಭಾಗ ಬೀಚ್ ನಡುವೆ ಕಾಳಿನದಿ-ಸಮುದ್ರ ಸಂಗಮ ಸ್ಥಳದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಮುಂಬೈ ನಿವಾಸಿ, ಮೂಲತಃ ಕಾರವಾರದ ನಿಲೇಶ್ ರೋಹಿದಾಸ ಫಡೆ°àಕರ್ (38), ಕಾರವಾರದ ಕಡವಾಡದ ಜಯಶ್ರೀ ಯಾನೆ ಮೀನಾಕ್ಷಿ ಕೋಟಾರಕರ್(55), ಗಣಪತಿ ಕೋಠಾರಕರ್(70), ಗೋವಾ ಪೊಂಡಾದ ಗೀತಾ ಜೆ. ತಳೇಕರ್(48), ಹಾವೇರಿ ಜಿಲ್ಲೆ ಶಿಗ್ಗಾವಿಯ ಹೊಸೂರಿನ ಭಾರತಿ ಪರಶುರಾಮ (33), ಬಾಲಕ ಅರುಣ್ ಸೋಮಪ್ಪ (ಒಂದೂವರೆ ವರ್ಷ) ಹಾಗೂ ಮಂಜವ್ವ ಸೋಮಪ್ಪ (30) ಹಾಗೂಕಾರವಾರ ನಿವಾಸಿ ಮೂಲತಃ ಕೊಪ್ಪಳ ಜಿಲ್ಲೆ ಕುಷ್ಠಗಿಯ ಅಣ್ಣಕ್ಕ ಮಲ್ಲಪ್ಪಾ ಇಂಗಳದಾಳ (55)ಎಂದು ಗುರುತಿಸಲಾಗಿದೆ. ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.
7 ಜನ ಆಸ್ಪತ್ರೆಗೆ ದಾಖಲು: “ದೇವಭಾಗ ಅಡ್ವೆಂಚರ್ ಬೋಟಿಂಗ್ ಸೆಂಟರ್’ ಎಂದು ಬರೆದಿದ್ದ ಬೋಟ್ ಮುಳುಗುತ್ತಿದ್ದಂತೆ ಅದರಲ್ಲಿದ್ದ ನಾಲ್ವರು ಸಿಬ್ಬಂದಿ ಈಜಿ ಪಾರಾದರು. ಹಾಗೆಯೇ ಹನ್ನೆರಡು ಜನರನ್ನು ರಕ್ಷಿಸಲಾಗಿದೆ. ಈ ಪೈಕಿ ಏಳು ಜನರನ್ನು ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಗತ್ಯಕ್ಕಿಂತ ಹೆಚ್ಚು ಜನರ ಪ್ರಯಾಣ?
ಸಮುದ್ರ ಅಬ್ಬರಿಸುತ್ತಿತ್ತು. ದೊಡ್ಡ ದೊಡ್ಡ ಅಲೆಗಳು ಆಗಾಗ ಏಳುತ್ತಿದ್ದವು.ಅಲ್ಲದೇ 12 ಜನರನ್ನು ಹಾಕಬೇಕಾದ ಬೋಟ್ನಲ್ಲಿ 33 ಜನರನ್ನು ಹಾಕಿದ್ದೇ ಬೋಟ್ ನಿಯಂತ್ರಣ ಕಳೆದುಕೊಳ್ಳಲು ಕಾರಣ ಎನ್ನಲಾಗುತ್ತಿದೆ. ಲೈಫ್ ಜಾಕೆಟ್ಗಳನ್ನು ಬೋಟ್ನಲ್ಲಿದ್ದ ಪ್ರಯಾಣಿಕರಿಗೆ ಕಡ್ಡಾಯವಾಗಿ ನೀಡಿದ್ದರೆ ದುರಂತ ತಪ್ಪುತ್ತಿತ್ತು ಎನ್ನಲಾಗುತ್ತಿದೆ. ಹದಿನೆಂಟು ವರ್ಷ ಹಿಂದೆಯೂ ಇದೇ ರೀತಿ ದುರಂತ ಸಂಭವಿಸಿ ಮೂವರು ಮೃತಪಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ