ಪ್ರಶಂಸೆ ಬೇಕಿಲ್ಲದಷ್ಟು ದೊಡ್ಡ ಸಾಧನೆ
Team Udayavani, Jan 22, 2019, 12:50 AM IST
ಸಿದ್ಧಗಂಗಾ ಕ್ಷೇತ್ರಕ್ಕೆ ನೂರು ಪಾಲು ವೈಭವ ಉಂಟಾಗುವ ಶಕ್ತಿ ಬಂದುದು ಈ ಶ್ರೀ ಶಿವಕುಮಾರ ಸ್ವಾಮೀಜಿಯವರ ಉದಾರ, ವಿಶಾಲ ದೃಷ್ಟಿಯಿಂದ. ಸಾವಿರಾರು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯ, ಭಾವೀ ಜೀವನ ವಿಕಾಸದ ಒಂದು ಬೃಹತ್ ಕ್ಷೇತ್ರವಾದುದು ಇಲ್ಲಿನ ಸ್ವಾಮೀಜಿಯವರ ಅನುಗ್ರಹದಿಂದ.
ನಾಡಿನ ಮೂಲೆ ಮೂಲೆಗಳಿಂದ ಅನಾಥರನ್ನು ಬರಮಾಡಿಕೊಂಡು, ಅವರಿಗೆಲ್ಲ ಅನ್ನದಾನದ ಜತೆಯಲ್ಲಿ ಜ್ಞಾನದ ದಾನವನ್ನೂ ಮಾಡುತ್ತಿರುವ ದೃಶ್ಯವಂತೂ ನನ್ನ ಪಾಲಿಗೆ ಅಸಾಮಾನ್ಯ ನೋಟವೆನಿಸಿದೆ. ಅಸಂಖ್ಯಾತ ಬಡಬಗ್ಗರಿಗೆ ಇಹದ ಆವಶ್ಯಕತೆಗಳನ್ನು ಪೂರೈಸುತ್ತಿರುವುದು ಮಾತ್ರವಲ್ಲ, ಅವರ ಪರವನ್ನು ಸಹ ಈ ನಾಡಿಗೆ ಋಣಿಯನ್ನಾಗಿ ಮಾಡುತ್ತಿರುವ ಕರ್ಮಭೂಮಿ ಇದಾಗಿದೆ. ಈ ಸಂಸ್ಥೆಯು ನಮ್ಮ ನಾಡಿನ ವೀರಶೈವ ಪಂಥಿಯರ ಸಂಸ್ಥೆಯಾದರೂ, ಯಾವೊಂದು ಜಾತಿ, ಮತದ ತಾರತಮ್ಯ ತೋರಿಸದೇ, ವಿದ್ಯಾರ್ಥಿಗಳ ಪೋಷಣೆ, ಶಿಕ್ಷಣ, ಭಾವನೆಗಳನ್ನು ಬೆಳೆಸುತ್ತಾ ಬಂದಿದೆ. ಎಲ್ಲೆಲ್ಲಿ ಸಾರ್ವಜನಿಕ ಸಂಸ್ಥೆಗಳು ಹೀಗೆ ಅದ್ಭುತ ಪ್ರಮಾಣದಲ್ಲಿ ಕಂಡು ಬರುತ್ತವೆಯೋ, ಅವುಗಳ ಬಗ್ಗೆ ನಾನೇ ಆಗಲಿ, ನನ್ನಂಥವರಾಗಲೀ, ಸಂತೋಷ ಪಡಲೇಬೇಕು. ಸಂಸ್ಥೆಗಳ ಇಂಥ ಸಾರ್ವಜನಿಕ ಸೇವೆಯ ಬಗ್ಗೆ ನಾನು ಹಲವಾರು ಸಾರ್ವಜನಿಕ ಸಭೆಗಳಲ್ಲಿ ಉಲ್ಲೇಖೀಸಿದ್ದೇನೆ. ಈ ದೃಷ್ಟಿಯಿಂದ ಪರಿಶೀಲಿಸಿದಾಗ, ಅನ್ಯಮತೀಯ ಸಂಸ್ಥೆಗಳನ್ನು ನೋಡುವಾಗ, ಅವುಗಳ ಸ್ವಾರ್ಥಪರ, ಮತೀಯ ಸಂಕುಚಿತ ದೃಷ್ಟಿ ತಮ್ಮ ಪೋಷಣೆಯನ್ನು ಕೇವಲ ಸ್ವಪಂಥೀಯರ ಸಲುವಾಗಿ ಮಾತ್ರ ಉಳಿಸಿಕೊಂಡಿರುವುದನ್ನು ಕಾಣಬಹುದು. ಶ್ರೀ ಕ್ಷೇತ್ರದ ಸಾಧನೆಗೆ ನನ್ನಂಥ ಲೇಖಕನ ಪ್ರಶಂಸೆ ಬೇಕಾಗಿಯೇ ಇಲ್ಲ ಎಂಬಷ್ಟು ದೊಡ್ಡ ಸಾಧನೆ ಶ್ರೀಗಳದ್ದು.
– ಕೆ. ಶಿವರಾಮ ಕಾರಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ