ದ್ವಿತೀಯ ಪಿಯು: ಮೂರು ವಿಷಯಗಳ ಪ್ರಶ್ನೆ ಪತ್ರಿಕೆಗಳ ಪರಿಷ್ಕರಣೆ
Team Udayavani, Jan 23, 2019, 1:15 AM IST
ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಮೂರು ವಿಷಯಗಳ ಪ್ರಶ್ನೆ ಪತ್ರಿಕೆಗಳ ಅಂಕ ಕ್ರಮವನ್ನು ಪರಿಷ್ಕರಿಸಲಾಗಿದೆ. ದ್ವಿತೀಯ ಪಿಯು ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರದ ಪ್ರಶ್ನೆ ಪತ್ರಿಕೆಗಳ ಅಂಕ ಕ್ರಮವು ಉಳಿದ ವಿಷಯದ ಪತ್ರಿಕೆಗಳಿಗಿಂತ ಭಿನ್ನವಾಗಿರಲಿದ್ದು, ಬಹುಆಯ್ಕೆ ಮಾದರಿ, ಹೊಂದಿಸಿ ಬರೆಯುವ ಮತ್ತು ಬಿಟ್ಟಸ್ಥಳ ತುಂಬುವುದು ಸೇರಿದಂತೆ ಅಂಕಗಳಲ್ಲಿ ಹೊಸ ಕ್ರಮವನ್ನು ಪರಿಚಯಿಸಲಾಗಿದೆ. ಇದನ್ನು ವಿದ್ಯಾರ್ಥಿಗಳು ಕೂಡ ಸ್ವಾಗತಿಸಿದ್ದಾರೆ.
ಈ ಮೊದಲು ಪ್ರಶ್ನೆ ಪತ್ರಿಕೆಯ “ಎ’ ವಿಭಾಗದಲ್ಲಿ ಒಂದು ಅಂಕದ 10 ಪ್ರಶ್ನೆಗಳು, “ಬಿ’ ವಿಭಾಗದಲ್ಲಿ 2 ಅಂಕಗಳ 10 ಪ್ರಶ್ನೆಗಳು, “ಸಿ’ ವಿಭಾಗದಲ್ಲಿ 5 ಅಂಕದ 8 ಪ್ರಶ್ನೆಗಳು ಇರುತ್ತಿದ್ದವು. “ಡಿ’ ವಿಭಾಗದಲ್ಲಿ 10 ಅಂಕದ 2 ಪ್ರಶ್ನೆಗಳು ಹಾಗೂ “ಇ’ ವಿಭಾಗದಲ್ಲಿ 5 ಅಂಕದ ಎರಡು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಿತ್ತು. ಆದರೆ, ಈ ಬಾರಿ “ಎ’ ವಿಭಾಗದಲ್ಲಿ 1 ಅಂಕದ ಬಹು ಆಯ್ಕೆ ಮಾದರಿ (5 ಪ್ರಶ್ನೆ),ಬಿಟ್ಟಸ್ಥಳ ತುಂಬಿರಿ (5 ಅಂಕ), ಹೊಂದಿಸಿ ಬರೆಯಿರಿ (5 ಅಂಕ) ಸೇರಿಸಿ ಪ್ರಶ್ನಾಕ್ರಮ ರಚಿಸಲಾಗಿದೆ. 2 ಅಂಕಗಳ 9 ಪ್ರಶ್ನೆಗಳು, 4 ಅಂಕಗಳ 7 ಪ್ರಶ್ನೆಗಳು, 6 ಅಂಕಗಳ 4 ಪ್ರಶ್ನೆಗಳು ಮತ್ತು 5 ಅಂಕಗಳ 2 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಾಗುತ್ತದೆ. ಈ ಬಹುಆಯ್ಕೆ ಮತ್ತು ಹೊಂದಿಸಿ ಬರೆಯುವಿಕೆಯಲ್ಲಿ ಉತ್ತರಗಳು ಪ್ರಶ್ನೆಪತ್ರಿಕೆಯಲ್ಲಿಯೇ ಇರುವುದರಿಂದ ವಿದ್ಯಾರ್ಥಿಗಳಿಗೆ ಪೂರಕವಾಗಿದೆ.
ಅವುಗಳನ್ನು ಸರಿಯಾಗಿ ಗುರುತಿಸಿದರೆ, ಉತ್ತಮ ಅಂಕಗಳನ್ನು ಗಳಿಸಬಹುದು ಎಂದು ವಿದ್ಯಾರ್ಥಿಗಳು ತಿಳಿಸುತ್ತಾರೆ. ಈ ವರ್ಷದಿಂದ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ ವಿಷಯಗಳಿಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿ (ಎನ್ಸಿಇಆರ್ಟಿ) ಪಠ್ಯಕ್ರಮ ಅಳವಡಿಸಿಕೊಳ್ಳಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ