ಅನ್ನದ ಮಹತ್ವ ಸಾರಿದ ಮಠದ ವಿದ್ಯಾರ್ಥಿ
Team Udayavani, Jan 24, 2019, 1:05 AM IST
ತುಮಕೂರು: ಅನ್ನದ ಮಹತ್ವವನ್ನು ಅರಿತಿದ್ದ ಶಿವಕುಮಾರ ಶ್ರೀಗಳು ಹಸಿದಿದ್ದವರಿಗೆ ಅನ್ನ ನೀಡುವ ಮೂಲಕ ಜಗತ್ತಿಗೆ ತ್ರಿವಿಧ ದಾಸೋಹ ಮೂರ್ತಿ ಎಂದೇ ಹೆಸರುವಾಸಿಯಾಗಿದ್ದರು. ಮಠಕ್ಕೆ ಯಾರು ಬಂದರೂ ಪ್ರಸಾದ ಸೇವಿಸಿ ಹೋಗಿ ಎಂದೇ ಹೇಳುತ್ತಿದ್ದರು. ಇಂತಹ ಮಹಾನ್ ಕಾಯಕ ಯೋಗಿಯ ಶಿಷ್ಯನಾಗಿ ರುವ ಮಠದ ವಿದ್ಯಾರ್ಥಿ ಶಿವು ಎಂಬಾತ, ಮಠದಲ್ಲಿ ಮಂಗಳವಾರ ನಡೆದ ದಾಸೋಹ ದಲ್ಲಿ ಅರ್ಧಂಬರ್ಧ ಊಟ ಮಾಡಿ ಅನ್ನವನ್ನು ಚೆಲ್ಲುತ್ತಿದ್ದ ವ್ಯಕ್ತಿಗೆ ಅನ್ನದ ಮಹತ್ವ ತಿಳಿಸಿಕೊಟ್ಟಿದ್ದಾನೆ.
ಮಂಗಳವಾರ ಶ್ರೀಗಳ ಕ್ರಿಯಾ ಸಮಾಧಿಗಾಗಿ ಹರಿದು ಬಂದಿದ್ದ ಲಕ್ಷಾಂತರ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಅರ್ಧಂ ಬರ್ಧ ಊಟ ಮಾಡಿ ಅನ್ನ ಚೆಲ್ಲುತ್ತಿದ್ದ ವ್ಯಕ್ತಿ ಯನ್ನು ಶಿವು ಗಮನಿಸಿದ. ತಕ್ಷಣ ಆ ವ್ಯಕ್ತಿಯ ಕೈ ಹಿಡಿದು, ಏಕೆ ಅನ್ನ ಚೆಲ್ಲುತ್ತಿದ್ದೀರಾ, ಒಂದು ಅಗಳನ್ನೂ ಬಿಸಾಡಬಾರದು. ಇದು ನಮ್ಮ ಬುದ್ಧಿಯವರ ಇಚ್ಛೆ. ನೀವು ಬಿಸಾಡದೆ ಊಟ ಮಾಡಲೇಬೇಕು ಎಂದು ಚೆಲ್ಲುತ್ತಿದ್ದ ಅನ್ನವನ್ನು ಊಟ ಮಾಡಿಸುವ ಮೂಲಕ ಶ್ರೀಗಳಿಗೆ ತಕ್ಕ ಶಿಷ್ಯ ಎಂಬುದನ್ನು ಸಾಬೀತುಪಡಿಸಿದ.
ಈ ಸಂಬಂಧ ವಿದ್ಯಾರ್ಥಿ ಶಿವು ಮಾತನಾಡಿ, ‘ದಾಸೋಹದಲ್ಲಿ ಊಟ ಮಾಡಿದವರು ಅನ್ನವನ್ನು ಚೆಲ್ಲಿ ಹೋಗುತ್ತಿದ್ದರು. ಇದನ್ನು ನಾನು ಗಮನಿಸಿ ಅನ್ನ ಚೆಲ್ಲುತ್ತಿದ್ದವರನ್ನು ಕರೆದು ಪ್ರಶ್ನಿಸಿದೆ, ಆಗ ಅವರು ಊಟ ಸೇರಲಿಲ್ಲ, ಸಾಂಬಾರು ಇರಲಿಲ್ಲ, ಕುಡಿಯುವ ನೀರು ಬೇಕಾಗಿತ್ತು ಎಂಬ ಕಾರಣ ಹೇಳಿ ಅನ್ನ ಚೆಲ್ಲುತ್ತಿದ್ದರು. ನಮಗೆ ಬುದ್ಧಿಯವರು ಅನ್ನದ ಮಹತ್ವ ತಿಳಿಸಿಕೊಟ್ಟಿದ್ದಾರೆ. ಹಾಗಾಗಿ, ಅವರನ್ನು ಕರೆದು ಮತ್ತೆ ಆ ಅನ್ನ ತಿನ್ನಿಸಿದೆ’ ಎಂದು ತಿಳಿಸಿದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ