ಸತಿ-ಪತಿ ಜಗಳ ಬಿಡಿಸಲು ಬಂದವಳನ್ನೇ ಕಟ್ಟಿಕೊಂಡ
Team Udayavani, Jan 25, 2019, 12:58 AM IST
ಬೆಳಗಾವಿ: ತನ್ನ ಹಾಗೂ ಪತ್ನಿಯೊಂದಿಗಿನ ಮನಸ್ತಾಪ ತಣ್ಣಗಾಗಿಸಲು ಮಧ್ಯಸ್ಥಿಕೆ ವಹಿಸಿ ನ್ಯಾಯ ಕೊಡಿಸಲು ಬಂದ ಮಹಿಳೆಯನ್ನೇ ಮದುವೆ ಮಾಡಿಕೊಂಡು ಈಗ ಇಬ್ಬರು ಮಡದಿ ಹಾಗೂ ಓರ್ವ ಪ್ರೇಯಸಿಯನ್ನು ಹೊಂದಿದ ಯೋಧನ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಸದ್ಯ ಗೋಕಾಕ ನಿವಾಸಿ ಆಗಿರುವ ಅಜೀತ್ ಮಾದರ ಈ ಕಥೆಯ ನಾಯಕ. ಈತ ಬಿಹಾರದ ಪಾಟ್ನಾದಲ್ಲಿ ಸಿಆರ್ಪಿಎಫ್ ಯೋಧನಾಗಿ ಕರ್ತವ್ಯದಲ್ಲಿದ್ದಾನೆ. 2011ರಲ್ಲಿ ದಾಕ್ಷಾಯಿಣಿ ಎಂಬುವರ ಜೊತೆಗೆ ಈತನ ವಿವಾಹ ವಾಗಿತ್ತು. ನಂತರ ಎರಡು ವರ್ಷಗಳ ಹಿಂದೆ ಬೆಳಗಾವಿ ಯವಳಾದ ಸೀಮಾ ಚವ್ಹಾಣ ಎಂಬಾಕೆಯನ್ನು ಪ್ರೇಮಿಸಿ ಪಾಟ್ನಾಕ್ಕೆ ಕರೆದೊಯ್ದು ಸಂಸಾರ ಪ್ರಾರಂಭಿಸಿ ದ್ದನು. ಇದರಿಂದ ಬೇಸತ್ತ ಮೊದಲ ಪತ್ನಿ ಪತಿಯ ಮೇಲಧಿಕಾರಿಗೆ ದೂರು ನೀಡುತ್ತಿದ್ದಂತೆ ಗಂಡ-ಹೆಂಡಿರ ಜಗಳ ಬಿಡಿಸಲು ಬಂದ ಮಹಿಳೆಯನ್ನೇ ಮದುವೆ ಆಗಿ ಕಥಾನಾಯಕ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾನೆ.
ಸಂತೋಷ ಚವ್ಹಾಣ ಎಂಬವರೊಂದಿಗೆ ಸೀಮಾ ಮದುವೆಯಾಗಿದ್ದರೂ ಅಜಿತನ ಮೇಲೆ ಪ್ರೇಮಾಂಕುರವಾಗಿ ಆತನೊಂದಿಗೇ ಪಾಟ್ನಾಕ್ಕೆ ತೆರಳಿದ ಆಕೆ ಅಲ್ಲಿಯೇ ವಾಸಿಸುತ್ತಿದ್ದಳು. ಹೀಗಾಗಿ ಸೀಮಾಳ ಪತಿ ಸಂತೋಷ ಪತ್ನಿ ಕಾಣೆಯಾಗಿದ್ದಾಳೆಂದು ಕಾಕತಿ ಠಾಣೆಯಲ್ಲಿ ದೂರು ದಾಖಲಿಸಿದ್ದ. ಈ ವಿಷಯ ಅಜಿತ್ ಮೊದಲ ಪತ್ನಿ ದಾಕ್ಷಾಯಿಣಿಗೆ ಗೊತ್ತಾದಾಗ ಗಂಡನ ವಿರುದ್ಧ ಸಿಆರ್ಪಿಎಫ್ ಕಮಾಂಡರ್ಗೆ ದೂರು ನೀಡಿದ್ದಳು. ಸಾಂಸಾರಿಕ ಸಮಸ್ಯೆ ಬಗೆಹರಿಸಿಕೊಂಡು ಬರುವಂತೆ ಕಮಾಂಡರ್ ಅಜಿತ್ಗೆ 15 ದಿನಗಳ ರಜೆ ನೀಡಿ ಬೆಳಗಾವಿಗೆ ಕಳಿಸಿದ್ದರು. ಬೆಳಗಾವಿಗೆ ಮರಳಿದ ಯೋಧ ತಮ್ಮ ಸಾಂಸಾರಿಕ ಸಮಸ್ಯೆ ಬಗೆಹರಿಸಲು ಪತ್ನಿಯೊಂದಿಗೆ ಸಮಾಜ ಸೇವಕಿ ಜಯಶ್ರೀ ಸೂರ್ಯವಂಶಿ ಬಳಿ ಹೋಗಿದ್ದರು. ಆದರೆ ನ್ಯಾಯ ಕೊಡಿಸಲು ಬಂದಿದ್ದ ಜಯಶ್ರೀಯನ್ನೇ ಯೋಧ ಪ್ರೀತಿಸಿ ಕಳೆದ ಡಿ.31ರಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದಾನೆ. ಈ ಕುರಿತು ಮೊದಲ ಪತ್ನಿ ದಾಕ್ಷಾಯಿಣಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಅಜಿತ್ ವಿರುದ್ಧ ಪತ್ನಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾಳೆ. ಮೊದಲ ಪತ್ನಿಗೆ ವಿಚ್ಛೇದನ ಕೊಡದೇ ಹಾಗೂ ಈತನನ್ನು ನಂಬಿ ಬಂದಿದ್ದ ಸೀಮಾಗೆ ದಾರಿ ತೋರಿಸದೇ ಅಜಿತ್ ಈಗ ಸಮಾಜ ಸೇವಕಿ ಜಯಶ್ರೀ ಜತೆ ಸಂಸಾರ ನಡೆಸುತ್ತಿದ್ದಾನೆಂದು ಪತ್ನಿ ದೂರಿದ್ದಾಳೆ. ದಾಕ್ಷಾಯಿಣಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಸೀಮಾಗೆ ಒಂದು ಹೆಣ್ಣು ಮಗು ಇದೆ. ಯೋಧನ ವಿರುದ್ಧ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ