“ಅಪ್ಪ ಮುಸಲ್ಮಾನ, ಅಮ್ಮ ಕ್ರಿಶ್ಚಿಯನ್, ಮಗ ಹಿಂದೂ ಅಂತೆ”
Team Udayavani, Jan 31, 2019, 12:30 AM IST
ಶಿರಸಿ: ಅಪ್ಪ ಮುಸಲ್ಮಾನ, ಅಮ್ಮ ಕ್ರಿಶ್ಚಿಯನ್, ಮಗ ಹಿಂದೂ ಅಂತೆ! ಜಗತ್ತಿನಲ್ಲಿ ಇಂತಹ ಹೈಬ್ರಿàಡ್ ತಳಿ ಬೇರೆಲ್ಲೂ ಸಿಗಲ್ಲ. ಈ ಹೈಬ್ರಿàಡ್ ಕಾಂಗ್ರೆಸ್ ಲ್ಯಾಬೋರೆಟರಿಯಲ್ಲಿ ಮಾತ್ರ ಸಿಗುತ್ತದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದ್ದಾರೆ.
ಶಿರಸಿ ಸಮೀಪದ ದನಗನಹಳ್ಳಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಹುಲ್ ಯದ್ವಾ ತದ್ವಾ ಮಾತನಾಡುತ್ತಾರೆ. ಜನ ನಂಬುವಂತೆ ಹೇಳಬೇಕು. ಹಸಿ ಸುಳ್ಳು ಹೇಳಿದರೆ ಹೇಗೆ? ಅವರಿಗೆ ರಫೇಲ್ ಅಂದರೆ ಗೊತ್ತಿಲ್ಲ. ಅದು ಮೂರು ಗಾಲಿ ಸೈಕಲ್ ಅಲ್ಲ. ಅವರಿಗೆ ದೇಶ, ಧರ್ಮ ಪ್ರಜ್ಞೆಯೂ ಇಲ್ಲ ಎಂದರು.
ಮೇ ತಿಂಗಳಿನಲ್ಲಿ ಕಾಂಗ್ರೆಸ್ ಸಾಮೂಹಿಕವಾಗಿ ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲಿದೆ. 2019ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಜೆಡಿಎಸ್, ಕಾಂಗ್ರೆಸ್ನಿಂದ ದೊಡ್ಡ ದೊಡ್ಡ ಹುರಿಯಾಳುಗಳೇ ಬರಲಿದ್ದಾರೆ. ಚುನಾವಣೆ ಬಳಿಕ ರಾಹುಲ್ ಕೊಲಂಬಿಯಾಕ್ಕೆ ಹೋಗುತ್ತಾರೆ. ಈಗಾಗಲೇ ಗೋಬ್ಯಾಕ್ ಇಟಲಿ ಶುರುವಾಗಿದೆ. ಕಾಂಗ್ರೆಸ್ನ ಆಸ್ಥಾನವಾಗಿದ್ದ ಅಮೇಥಿಯಲ್ಲಿ ಒಂದು ಸಿನೆಮಾ ಟಾಕೀಸ್ ಕೂಡ ಇಲ್ಲ. ಒಂದೊಳ್ಳೆ ಆಸ್ಪತ್ರೆ ಕೂಡ ಇಲ್ಲ. ದೇಶ ಹಿಂದುಳಿದರೆ, ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ ಅದು ಕಾಂಗ್ರೆಸ್ನ ಪಾಪದ ಫಲ ಎಂದರು.
ಅರಣ್ಯ ಇಲಾಖೆಯವರು ಕಾಡಿನಲ್ಲಿ ಗಿಡ ನೆಟ್ಟರೂ ಸಚಿವ ದೇಶಪಾಂಡೆಗೆ ಪರ್ಸಂಟೇಜ್ ಹೋಗುತ್ತದೆ. ಬಾವಿ ತೆಗೆದರೆ, ಬೋರ್ವೆಲ್ ಹೊಡೆಸಿದರೆ ಯಾವುದಿದ್ದರೂ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಗೆ ಪರ್ಸಂಟೇಜ್ ತಲುಪುತ್ತದೆ. ಹೀಗಾಗಿ, ಅವರನ್ನು “ಪರ್ಸಂಟೇಜ್ ಪಾಂಡೆ’ ಎಂದೂ ಕರೆಯುತ್ತಾರೆ.
– ಅನಂತಕುಮಾರ ಹೆಗಡೆ, ಕೇಂದ್ರ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ