ಮೋದಿಗೆ ಮಾತ್ರ ಪ್ರಧಾನಿ ಆಗುವ ಅರ್ಹತೆ ಇದೆಯಾ?
Team Udayavani, Feb 18, 2019, 12:30 AM IST
ರಾಯಚೂರು: ಪ್ರಧಾನಿಯಾಗುವ ಅರ್ಹತೆ ಇರುವ ನೂರಾರು ಜನರಿದ್ದಾರೆ. ಯಾಕೆ, ನರೇಂದ್ರ ಮೋದಿಗೆ ಮಾತ್ರ ಆ ಅರ್ಹತೆ ಇದೆಯಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ದೇವದುರ್ಗ ತಾಲೂಕಿನ ವೀರಘೋಟದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಪ್ರತಿಪಕ್ಷದ ನೂರಾರು ನಾಯಕರು ಕೂಡ ಪ್ರಧಾನಿ ಸ್ಥಾನಕ್ಕೆ ಅರ್ಹರೇ. ರಾಹುಲ್ ಗಾಂಧಿ , ದೇವೇಗೌಡ, ಮಾಯಾವತಿ ಸೇರಿ ಮಹಾ ಘಟಬಂಧನ್ ಜತೆ ಗುರುತಿಸಿಕೊಂಡ ನಾಯಕರಿಗೆಲ್ಲ ಆ ಯೋಗ್ಯತೆ ಇದೆ ಎಂದರು.
ಮೋದಿ ನೇರವಾಗಿ ಸಿಎಂ ಆಗಿದ್ದಾರೆ. ಅವರೇನು ಮೊದಲು ಮಂತ್ರಿಯಾಗಿದ್ರಾ, ಸಿಎಂ ನಂತರ ನೇರವಾಗಿ ಪ್ರಧಾನಿಯಾಗಿಲ್ಲವೇ ಎಂದು ಪ್ರಶ್ನಿಸಿದರು. ಇದು ಸಮ್ಮಿಶ್ರ ಸರ್ಕಾರಗಳ ಕಾಲ. ಹೀಗಾಗಿ, ಸಮಾನ ಮನಸ್ಕ ಪಕ್ಷಗಳೆಲ್ಲ ಒಂದಾಗಿ ಸರ್ಕಾರ ರಚಿಸುತ್ತಿವೆ.
ಕೇಂದ್ರದಲ್ಲಿರುವುದು ಎನ್ಡಿಎ ಸರ್ಕಾರವೇ ಹೊರತು ಬಿಜೆಪಿ ಸರ್ಕಾರವಲ್ಲ. ಈಗ ನಮ್ಮ ಮೈತ್ರಿಕೂಟ ರಚನೆಯಾಗಿದ್ದರೂ ಈಗಲೇ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲು ಬರುವುದಿಲ್ಲ ಎಂದರು.
ಸದನಕ್ಕೆ ಗೈರಾದ ಶಾಸಕರಿಗೆ ನೋಟಿಸ್ ನೀಡಲಾಗಿತ್ತು. ಅವರು ನಾವು ಕಾಂಗ್ರೆಸ್ನಲ್ಲಿದ್ದೇವೆ ಎಂದು ಉತ್ತರ ಕೊಟ್ಟಿದ್ದಾರೆ. ರಮೇಶ ಜಾರಕಿಹೊಳಿ ಜತೆ ಮಾತುಕತೆ ನಡೆಸಲಾಗಿದೆ. ಅವರು ಕೆಲವು ಸಮಸ್ಯೆ ಹೇಳಿಕೊಂಡಿದ್ದಾರೆ. ಅದನ್ನು ಶೀಘ್ರವೇ ಪರಿಹರಿಸಲಾಗುವುದು. ಕಾಂಗ್ರೆಸ್ನಲ್ಲಿ ಈಗ ಯಾರೂ ಅತೃಪ್ತರಿಲ್ಲ.
– ಸಿದ್ದರಾಮಯ್ಯ, ಮಾಜಿ ಸಿಎಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ