ಕಿಡ್ನಿ ಕೊಟ್ಟು ಮೊಮ್ಮಗನಿಗೆ ಬಾಳು ಕೊಟ್ಟ ಅಜ್ಜ
Team Udayavani, Feb 23, 2019, 12:39 AM IST
ಹುಬ್ಬಳ್ಳಿ: ಎಂಟು ವರ್ಷದ ಬಾಲಕನಿಗೆ 52 ವಯಸ್ಸಿನ ವ್ಯಕ್ತಿಯ ಮೂತ್ರಪಿಂಡ (ಕಿಡ್ನಿ) ಜೋಡಿಸುವ ಶಸ್ತ್ರ ಚಿಕಿತ್ಸೆಯನ್ನು ಇಲ್ಲಿನ ತತ್ವದರ್ಶ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿ ಪೂರೈಸಿದೆ.
ಸುದ್ದಿಗೋಷ್ಠಿಯಲ್ಲಿ ಮೂತ್ರಪಿಂಡ ತಜ್ಞ ಡಾ.ವೆಂಕಟೇಶ ಮೊಗೇರ ಮಾತನಾಡಿ, ಎಂಟು ವರ್ಷದ ಮಲ್ಲು ಕೋಟಿಕಲ್ಲ ಎಂಬ ಬಾಲಕನಿಗೆ ಆತನ ಅಜ್ಜನ ಮೂತ್ರಪಿಂಡ ದಾನ ಪಡೆದು ಜೋಡಿಸಲಾಗಿದೆ. ಇಂತಹ ಶಸ್ತ್ರಚಿಕಿತ್ಸೆ ಉತ್ತರ ಕರ್ನಾಟಕದಲ್ಲಿ ಮೊದಲು. ಕಳೆದ ಐದು ವರ್ಷಗಳಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಬಾಲಕ ನಮ್ಮ ಆಸ್ಪತ್ರೆಗೆ ಬಂದಾಗ ಮೂತ್ರಪಿಂಡ ಜೋಡಣೆ ಅನಿರ್ವಾಯವಾಗಿತ್ತು. ಬಾಲಕನ ಅಜ್ಜನ ಕಿಡ್ನಿ ಪಡೆದು ಬಾಲಕನಿಗೆ ಜೋಡಿಸಲಾಗಿದೆ ಎಂದರು.
ಬಾಲಕನ ತಾಯಿ ಚಿನ್ನಮ್ಮ ಕೋಟಿಕಲ್ಲ ಮಾತನಾಡಿ, ಮಗನಿಗೆ ಕಿಡ್ನಿ ನೀಡಲು ನಾನು ಮತ್ತು ನನ್ನ ಪತಿ ಸಿದ್ಧ ರಿದ್ದೆವು. ಆದರೆ ನಮ್ಮ ಕಿಡ್ನಿ ಅವನಿಗೆ ಹೊಂದಾಣಿಕೆ ಆಗಲಿಲ್ಲ. ನಮ್ಮ ತಂದೆಯವರ ಕಿಡ್ನಿ ಹೋಲಿಕೆಯಾಗಿದ್ದು, ಮೊಮ್ಮಗನಿಗೆ ಕಿಡ್ನಿ ದಾನ ಮಾಡಿ ನನ್ನ ಮಗನ ಪ್ರಾಣ ಉಳಿಸಿದ್ದಾರೆ. ಸೈನಿಕನ ಮಗ ಎನ್ನುವ ಕಾರಣಕ್ಕೆ ಆಸ್ಪತ್ರೆಯಿಂದ ಶೇ.50ರಿಯಾಯಿತಿ ನೀಡಿರುವುದು ಒಂದಿಷ್ಟು ಆರ್ಥಿಕ ತೊಂದರೆ ತಪ್ಪಿದಂತಾಗಿದೆ ಎಂದು
ತಿಳಿಸಿದರು.
ಮಗುವಿನ ತಂದೆ ಸೋಮಪ್ಪ ಕೋಟಿಕಲ್ಲ, ಕಿಡ್ನಿ ದಾನ ಮಾಡಿದ ಹುಚ್ಚಪ್ಪ ನರಿ, ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ ವೈದ್ಯರಾದ ಡಾ.ದಿಲೀಪ ಜವಳಿ, ಡಾ.ಮಂಜು ಪ್ರಸಾದ, ಡಾ.ಭರತ ಕ್ಷತ್ರಿ, ಡಾ.ಸಂಜೀವ ಕುಲಗೋಡ, ಡಾ.ಶ್ರೀನಿವಾಸ ಹರಪನಹಳ್ಳಿ, ಡಾ.ಬಸವರಾಜ ಕಲ್ಲಾಪುರ, ಡಾ.ವಿನೋದ ರಟ್ಟಿಗೇರಿ, ಡಾ.ಸುಧೀಂದ್ರ ಪತೇಪೂರ, ಡಾ.ಶೀತಲ ಕುಲಗೋಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
Politics: ಸುಮಲತಾ – ನಾವು ಶಾಶ್ವತ ಶತ್ರುಗಳಲ್ಲ: ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್