ನಾನು ಯಾರು ಎಂಬ ಪ್ರಶ್ನೆಗೆ ಮಂಡ್ಯದ ಜನರು ಉತ್ತರಿಸಬೇಕು: ಸುಮಲತಾ
Team Udayavani, Mar 20, 2019, 10:27 AM IST
ಮಂಡ್ಯ: ನಾನು ಈ ಮಂಡ್ಯದ ಸೊಸೆ, ಅಂಬರೀಶ್ ಅವರ ಧರ್ಮಪತ್ನಿಯಾಗಿದ್ದೇನೆ. ನನ್ನ ಮುಂದಿರುವ ಸವಾಲಿನ ಪ್ರಕಾರ, ನಿಮ್ಮ ಆಹ್ವಾನದ ಮೇಲೆ ಸ್ಪರ್ಧಿಸುತ್ತಿದ್ದೇನೆ. ಹೀಗಾಗಿ ನಾನು ಯಾರು ಎಂದು ಪ್ರಶ್ನಿಸುವವರಿಗೆ ನೀವು ಉತ್ತರಿಸಬೇಕು. ಈ ಅವಮಾನಗಳಿಗೆ ಮಂಡ್ಯದ ಜನರೇ ಉತ್ತರ ನೀಡಬೇಕು ಎಂದು ಸುಮಲತಾ ಅಂಬರೀಶ್ ಹೇಳಿದರು.
ಬುಧವಾರ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸಿಲ್ವರ್ ಜುಬಿಲಿ ಪಾರ್ಕ್ ನಲ್ಲಿ ನಡೆದ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ಟೀಕೆ, ಅವಮಾನದ ಮಾತುಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಪರವಾಗಿ ಮಕ್ಕಳು ಬಂದು ಪ್ರಚಾರ ಮಾಡುವುದು ತಪ್ಪಾ? ದರ್ಶನ್ ಮತ್ತು ಯಶ್ ನನ್ನ ಮನೆ ಮಕ್ಕಳು. ಅವರು ಅಂಬಿಯ ಅಭಿಮಾನ ಉಳಿಸಿಕೊಂಡಿರುವ ನಟರಾಗಿದ್ದಾರೆ. ನಿಮ್ಮ ಮಾತು ಅಭಿಮಾನಿಗಳಿಗೆ ನೋವು ತಂದಿದೆ ಎಂದು ಈ ಸಂದರ್ಭದಲ್ಲಿ ಟೀಕಾಕಾರರಿಗೆ ತಿರುಗೇಟು ನೀಡಿದರು.
ನಿಮ್ಮ ಧ್ವನಿಯಾಗಿ ನಾನು ಪ್ರತಿನಿಧಿಸ್ತೇನೆ. ನನ್ನ ಜೊತೆ ನೀವು ಕೈಜೋಡಿಸುತ್ತೀರಿ ಎಂದು ಮಾತು ಕೊಡಿ ಎಂದು ಹೇಳಿದ ಸುಮಲತಾ ಭಾವುಕರಾದರು. ನಿಮ್ಮನ್ನು ಬಿಟ್ಟು ನಾನು ಎಲ್ಲಿಯೂ ಹೋಗಲ್ಲ. 27 ವರ್ಷಗಳಿಂದ ಮಂಡ್ಯದ ಸೊಸೆಯಾಗಿ, ಅಂಬರೀಶ್ ಅವರ ಧರ್ಮಪತ್ನಿಯಾಗಿ, 40 ವರ್ಷಗಳ ಕಾಲ ಚಿತ್ರರಂಗದಲ್ಲಿ ದುಡಿದಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್