ಇವತ್ತು ಸುಮಲತಾ ಕಣ್ಣಲ್ಲಿ ಯಶ್‌ ಕಣ್ಣೀರು ಕಂಡಿದ್ಯಾಕೆ?


Team Udayavani, Mar 20, 2019, 1:06 PM IST

sum-nomination-20-3.jpg

ಮಂಡ್ಯ: ಸುಮಲತಾ ಅಂಬರೀಷ್‌ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಉಮೇದುವಾರಿಕೆ ಬಯಸಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದರೊಂದಿಗೆ ರಾಜ್ಯದ ‘ಹೈ ವೋಲ್ಟೇಜ್‌’ ಕ್ಷೇತ್ರಗಳಲ್ಲಿ ಒಂದಾದ ಮಂಡ್ಯ ಹಣಾಹಣಿಗೆ ವೇದಿಕೆ ಸಿದ್ಧವಾದಂತಾಗಿದೆ. ಒಂದೆಡೆ ‘ಕೈ-ತೆನೆ’ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಮಂಡ್ಯ ಕ್ಷೇತ್ರದ ಜೆಡಿಎಸ್‌ ಶಾಸಕರ ಬಲವಿದ್ದರೆ, ಸುಮಲತಾ ಅಂಬರೀಷ್‌ ಅವರ ಪರ ದರ್ಶನ್‌, ಯಶ್‌ ಸಹಿತ ಕನ್ನಡ ಚಿತ್ರರಂಗದ ಬೆಂಬಲವಿದೆ ಮಾತ್ರವಲ್ಲದೇ ಮಂಡ್ಯದ ಗಂಡು ಅಂಬರೀಷ್‌ ಅವರ ಪರವಾದ ಅನುಕಂಪದ ಅಲೆಯೂ ಸಾಥ್‌ ನೀಡುವ ನಿರೀಕ್ಷೆಯಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸುಮಲತಾ ಅವರು ಇಂದು ಮಂಡ್ಯ ಜಿಲ್ಲಾಧಿಕಾರಿ ಕಛೇರಿಯಲ್ಲಿ ನಾಮಪತ್ರವನ್ನು ಸಲ್ಲಿಸಿದ ಬಳಿಕ ಸಿಲ್ವರ್‌ ಜ್ಯುಬಿಲಿ ಮೈದಾನದಲ್ಲಿ ನಡೆಸಿದ ಬೃಹತ್‌ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಜನಸಮೂಹವೇ ಸಾಕ್ಷಿಯಾಗಿತ್ತು. ಬೃಹತ್‌ ಜನಸಮೂಹವನ್ನುದ್ದೇಶಿಸಿ ಸುಮಲತಾ ಅಂಬರೀಶ್‌ ಅವರು ಭಾವನಾತ್ಮಕ ಭಾಷಣ ಮಾಡಿದರೆ, ಅಭಿಷೇಕ್‌, ದರ್ಶನ್‌ ಮತ್ತು ಯಶ್‌ ಅವರು ಮಂಡ್ಯ ಜನರ ಸ್ವಾಭಿಮಾನವನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಿದರು.

ತಮಗೆ ಸಿಕ್ಕ ಅವಕಾಶದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಅವರು ಬಹಳ ಸೂಕ್ಷ್ಮವಾಗಿ ಮಾತನಾಡಿದ್ದು ವಿಶೇಷವಾಗಿತ್ತು. ಮುಖ್ಯವಾಗಿ ತಮ್ಮ ಹಾಗೂ ದರ್ಶನ್‌ ವಿರುದ್ಧ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುವ ಅಪಪ್ರಚಾರದ ಬಗ್ಗೆ ರಾಕಿಂಗ್‌ ಸ್ಟಾರ್‌ ಇವತ್ತು ಸೂಕ್ತ ಪ್ರತ್ಯುತ್ತರವನ್ನೇ ನೀಡಿದರು. ತಮ್ಮಿಬ್ಬರ ಕುರಿತಾಗಿ ವಿರೋಧಿ ಪಾಳಯದ ಕೆಲವರು ಕೀಳಾಗಿ ಮಾತನಾಡುತ್ತಿರುವ ಕಾರಣ ಸುಮಲತಾ ಅವರು ತುಂಬಾ ನೊಂದುಕೊಂಡಿದ್ದರೆಂತೆ ಮಾತ್ರವಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಅವರು ಕಣ್ಣೀರು ಸಹ ಹಾಕಿದ್ದರಂತೆ. ಆದರೆ ಇದನ್ನು ಗಮನಿಸಿದ ಯಶ್‌ ಅವರು ಸುಮಲತಾ ಅವರನ್ನು ಸಮಾಧಾನಪಡಿಸಿದ್ದಾರೆ. ‘ನಾವೇನೂ ತಪ್ಪು ಮಾಡುತ್ತಿಲ್ಲ, ಆಧಿಕಾರದ ಆಸೆಗೋ ಅಥವಾ ಬೇರಿನ್ಯಾವುದಕ್ಕೋ ನಾವಿದನ್ನು ಮಾಡ್ತಾ ಇಲ್ಲ. ಅಷ್ಟಾಗಿಯೂ ನಾವು ಮಾಡುತ್ತಿರುವುದು ತಪ್ಪೇ ಎಂದು ಅವರೆಲ್ಲ ಅಂದುಕೊಂಡಿದ್ರೆ ಈ ತಪ್ಪನ್ನು ನಾವು ಸಾವಿರ ಬಾರಿ ಮಾಡುತ್ತೇವೆ’ ಎಂದು ಭರ್ಜರಿ ಚಪ್ಪಾಳೆಯ ನಡುವೆ ಯಶ್‌ ನುಡಿದರು.

‘ಅಂಬರೀಷ್‌ ಅವರು ನಮಗೆ ಅಷ್ಟೆಲ್ಲಾ ಮಾಡಿದ್ದಾರೆ. ಸುಮ್ನೆ ನಾಟಕ, ತೋರಿಕೆಗೆ ನಾವಿಲ್ಲಿ ಬಂದಿಲ್ಲ. ಸಿನೇಮಾದವರೇನು ಅಂಟಾರ್ಟಿಕಾ ಅಥವಾ ಪಾಕಿಸ್ಥಾನದಿಂದ ಬಂದವರಲ್ಲ. ನಾವೂ ಇಲ್ಲಿಯವರೆ, ಇಲ್ಲಿನ ಕಬ್ಬಿನ ಹಾಲು ಕುಡಿದೇ ಬೆಳೆದವರು ಈ ಊರಿನ ಕೆರೆಗಳಲ್ಲಿ ಈಜಾಡಿದವರು. ಇವತ್ತೇನೋ ನಮ್ಮ ನಮ್ಮ ಬದುಕು ಕಟ್ಟಿಕೊಳ್ಳುವುದಕ್ಕೆ ಮಹಾನಗರಕ್ಕೆ ಹೋಗಿದ್ದೇವೆ, ನಾವು ಅನುಕೂಲಕ್ಕೆ ಹಗಲು-ರಾತ್ರಿ ಚೇಂಜ್‌ ಆಗುವವರಲ್ಲ. ಅದೆಲ್ಲಾ ರಾಜಕೀಯದಲ್ಲಿ ಮಾತ್ರ, ಸಿನೇಮಾದಲ್ಲಿ ಅದಿಲ್ಲ. ದಯವಿಟ್ಟು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಇಡೀ ಕರ್ನಾಟಕದ ಋಣ ನಮ್ಮ ಮೇಲಿದೆ, ಅದರಲ್ಲಿ ಮಂಡ್ಯದ ಜನರ ಋಣ ಸ್ವಲ್ಪ ಜಾಸ್ತಿನೇ ಇದೆ’ ಎಂದು ತಮ್ಮ ಮತ್ತು ದರ್ಶನ್‌ ಸಂಬಂಧದ ಕುರಿತಾಗಿ ಯಶ್‌ ಮಾರ್ಮಿಕವಾಗಿ ನುಡಿದರು. ಈ ನಾಡಿನ ಜನತೆ ಸುಮ್‌ ಸುಮ್ನೆ ಯಾರನ್ನೂ ತಲೆ ಮೇಲೆ ಇಟ್ಟುಕೊಂಡು ಮೆರೆಸೋರಲ್ಲ. ಕೋಟಿ ಜನರ ಮಧ್ಯೆ ನಮ್ಮನ್ನು ಇಷ್ಟಪಡ್ತಾರೆ ಅಂದ್ರೆ ನಮ್ಮಲ್ಲೇನೋ ಯೋಗ್ಯತೆಯನ್ನು ಅವರು ಕಂಡಿದ್ದಾರೆ ಎಂದೇ ಅರ್ಥ ಎಂದು ಯಶ್‌ ಇದೇ ಸಂದರ್ಭದಲ್ಲಿ ಹೇಳಿದರು.

‘ನೀವು ಧೈರ್ಯವಾಗಿರಿ, ಇವತ್ತು ಇಲ್ಲಿ ಬಂದಿರೋರು ಯಾರೂ ದುಡ್ಡಿಗೋ ಬಲವಂತಕ್ಕೋ ಅಥವಾ ತೋರಿಕೆಗೋ ಬಂದಿರೋರಲ್ಲ. ಅಥವಾ ನನ್ನನಾಗ್ಲಿ ದರ್ಶನ್‌ ಅವರನ್ನಾಗಲಿ ನೋಡ್ಲಿಕ್ಕೆ ಬಂದಿರೋರೂ ಅಲ್ಲ ಇವರೆಲ್ಲಾ ಬಂದಿರೋದು ಅಂಬರೀಷ್‌ ಮತ್ತು ನಿಮ್ಮ ಮೇಲಿನ ಪ್ರೀತಿಯಿಂದ. ನಮ್ಮ ಕಣ್ಣಿಗೆ ಕಾಣುವಷ್ಟು ದೂರ ನಿಂತಿದ್ದ ಈ ಜನಸಾಗರ ಅಣ್ಣನ ಮೇಲಿನ ಪ್ರೀತಿಯಿಂದ ಬಂದಿರೋದು. ಇದನ್ನು ಎಲ್ರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಮಂಡ್ಯದ ಜನರನ್ನು ಯಾವತ್ತೂ ಯಾರೂ ಹಗುರವಾಗಿ ತಗೋಬೇಡಿ. ಸ್ವಾಭಿಮಾನದ ಪ್ರಶ್ನೆ ಬಂದಾಗ ಮನೆ ಮಠ ಕಳ್ಕೊಂಡ್ರೂ ಸರಿ ಸ್ವಾಭಿಮಾನ ಪಡ್ಕೊಂಡು ನಿಂತ್ಕೊಳ್ಳೋರು ಮಂಡ್ಯದ ಜನ. ಅಂತದ್ರಲ್ಲಿ ಮನೆ ಮಗಳು ಬಂದು ನಿಂತ್ಕೊಂಡಾಗ ಅವರನ್ನ ಸೋಲಿಸೋದು ಉಂಟಾ?’ ಎಂದು ಮಂಡ್ಯದ ಮತದಾರರನ್ನು ಭಾವನಾತ್ಮಕವಾಗಿ ತಟ್ಟುವ ಕೆಲಸವನ್ನು ರಾಕಿಂಗ್‌ ಸ್ಟಾರ್‌ ಮಾಡಿದರು.

ದಯವಿಟ್ಟು ನೀವೆಲ್ರೂ ಒಳ್ಳೇತನಕ್ಕೆ ಬೆಲೆ ಕೊಡಿ. ನಿಮ್ಮ ಮನಸ್ಸಿಗೆ ಏನು ಸರಿ ಅನ್ಸುತ್ತೋ ಅದನ್ನು ಮಾಡಿ. ಜನ ಬದಲಾಗ್ಬಹುದು ಆದ್ರೆ ಭಾವನೆಗಳು ಬದಲಾಗೋದಿಲ್ಲ. ಅಕ್ಕನ ಕಡೆ ಪ್ರೀತಿ ತೋರ್ಸಿ. ಅವರು ಸುಮ್ನೆ ಬಂದು ಹೋಗೋರಲ್ಲ, ಸೋತ್ರೂ ಗೆದ್ರೂ ಅವರು ಮಂಡ್ಯದಲ್ಲೇ ಇರ್ತಾರೆ ಇಲ್ಲೇ ಇದ್ದು ನಿಮ್ಮ ಪ್ರೀತಿನ ಬೆಳೆಸಿಕೊಂಡು ಹೋಗ್ತಾರೆ. ನೀವು ಅವರನ್ನು ಗೆಲ್ಸಿದ್ರೆ ಮಂಡ್ಯ ನೆಲದ ಸೊಗಡನ್ನು ದೂರದ ಡೆಲ್ಲಿವರೆಗೂ ಒಯ್ತಾರೆ ಅಕ್ಕನ ಮೇಲೆ ನಿಮ್ಮ ಮನೆ ಮಗಳ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರ್ಲಿ ಎಂದು ಹೇಳುವ ಮೂಲಕ ಯಶ್‌ ತಮ್ಮ ಮಾತನ್ನು ಮುಗಿಸಿದರು.

ಟಾಪ್ ನ್ಯೂಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

Lok Sabha Elections: 10 ಲಕ್ಷ ಮೀರಿ ವಹಿವಾಟು ಮೇಲೆ ಐಟಿ ಕಣ್ಣು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್‌ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.