ಮೃತರ ಸಂಖ್ಯೆ ಆರಕ್ಕೇರಿಕೆ:ಧಾರವಾಡ ಕಟ್ಟಡ ದುರಂತದಲ್ಲಿ 55 ಜನರ ರಕ್ಷಣೆ


Team Udayavani, Mar 22, 2019, 12:30 AM IST

11.jpg

ಧಾರವಾಡ: ನಿರ್ಮಾಣ ಹಂತದ ಯಮ ಸ್ವರೂಪಿ ಕಟ್ಟಡ ಕುಸಿತ ದುರ್ಘ‌ಟನೆಯಲ್ಲಿ ಬುಧವಾರ ಮತ್ತೆ ಮೂರು ಮೃತದೇಹ ಹೊರ ತೆಗೆಯಲಾಗಿದ್ದು, ಮೃತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಇನ್ನೂ ಇಪ್ಪತ್ತಕ್ಕೂ ಹೆಚ್ಚು ಮಂದಿ ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಗಳಿವೆ. ಇದುವರೆಗೆ 55 ಜನರನ್ನು ರಕ್ಷಣೆ ಮಾಡಲಾಗಿದ್ದು, ಗುರುವಾರ ಮಧ್ಯಾಹ್ನದವರೆಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿಯಲಿದೆ.

ಹುಬ್ಬಳ್ಳಿ ಆನಂದನಗರದ ನಿವಾಸಿ ಸಲೀಂ ಮಕಾಂದಾರ (35), ಮರಾಠಾ ಕಾಲೊನಿ ನಿವಾಸಿ ಆಶೀತ್‌ ಹಿರೇಮಠ(32), ಹುಬ್ಬಳ್ಳಿ ಆನಂದನಗರದ ಇನೋ°ರ್ವ ನಿವಾಸಿ ಮೆಹಬೂಬ್‌ ದೇಸಾಯಿ (55) ಹಾಗೂ ಹುಬ್ಬಳ್ಳಿಯ ಶಿವಶಕ್ತಿನಗರದ ಮಾಬೂಸಾಬ್‌ ರಾಯಚೂರ (48), ಕುಮಾರೇಶ್ವರ ನಗರ ನಿವಾಸಿ, ಅಸ್ಲಂ ಮುಲ್ಲಾ (43) ಹಾಗೂ ಧಾರವಾಡ ತಪೋವನ ನಿವಾಸಿ ಮಹೇಶ್ವರ ಹಿರೇಮಠ (65) ಮೃತರು. ಅವಶೇಷಗಳಡಿ ಮತ್ತಷ್ಟು ಮಂದಿ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ ತಂಡ ಕಟ್ಟಡದ ಮೇಲಿನ ಕೆಲವು ಅವಶೇಷಗಳನ್ನು ಕೊರೆದು ಬದುಕಿರುವವರ ಚಲನವಲನ ವೀಕ್ಷಿಸಿತು.

ಬುಧವಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದ ನೆಲಮಹಡಿಯಲ್ಲಿ ಸಿಲುಕಿರುವವರಿಗೆ ಅನುಕೂಲವಾಗಲೆಂದು ಆಮ್ಲಜನಕ ಮತ್ತು ಗ್ಲುಕೋಸ್‌ ಪ್ಯಾಕೆಟ್‌ ಗಳನ್ನು ತಳ್ಳಲಾಯಿತು. ಮಧ್ಯಾಹ್ನದವರೆಗೂ ಒಳಗಡೆ ಸಿಲುಕಿದ್ದವರ ಚೀರಾಟದ ಧ್ವನಿ ಕೇಳುತ್ತಿತ್ತು. ಅಲ್ಲಿ ಕಿಂಡಿ ಕೊರೆದು ಕೆಳಗಿಳಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಲು ಹರಸಾಹಸ ಪಟ್ಟರಾದರೂ ಪ್ರಯೋಜವಾಗಲಿಲ್ಲ. 

ಅಲ್ಲಿ ದೈತ್ಯ ಪಿಲ್ಲರ್‌ಗಳು ಅಡ್ಡಬಂದಿದ್ದರಿಂದ ಬುಡದಲ್ಲಿ ಸಿಲುಕಿದವರನ್ನು ರಕ್ಷಿಸಲಾಗದೇ ಹೊರಬಂದರು. ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗಿನವರೆಗೂ ಕಾರ್ಯಾಚರಣೆ ಅವಿರತವಾಗಿ ಸಾಗಿತ್ತು, ಬೆಳಗ್ಗೆ 7:45ರ ಸುಮಾರಿಗೆ ಇಬ್ಬರ ಶವಗಳನ್ನು ಹೊರ ತೆಗೆಯಲಾಯಿತು. ರೈತ ಹೋರಾಟಗಾರ ಸಲೀಂ ಸಂಗನಮುಲ್ಲಾ ಎನ್ನುವವರು ಕಟ್ಟಡದ ನೀಲನಕ್ಷೆ ತಂದು ಕೊಟ್ಟಿದ್ದರಿಂದ ಎನ್‌ಡಿಆರ್‌ ಎಫ್‌ ಸಿಬ್ಬಂದಿ ಕಟ್ಟಡದ ಭಾಗಗಳನ್ನು ಗುರುತಿಸಿ ಕಾರ್ಯಾಚರಣೆ ಚುರುಕುಗೊಳಿಸಿದರು.

ಬುಧವಾರ ಸಂಜೆವರೆಗೂ ನಡೆದ ಕಾರ್ಯಾಚರಣೆಯಲ್ಲಿ ನಾಗರಾಜ ಬನ್ಸೋಡೆ (35) ಮಾತ್ರ ತೀವ್ರ ಗಾಯಗೊಂಡು ಪವಾಡ ಸದೃಶ್ಯ ರೀತಿಯಲ್ಲಿ ಬದುಕಿ ಬಂದಿದ್ದು, ಇನ್ನುಳಿದಂತೆ ಒಟ್ಟು ನಾಲ್ವರ ಶವಗಳನ್ನು ಹೊರ ತೆಗೆಯಲಾಯಿತು. ಗುರುವಾರ ಮಧ್ಯಾಹ್ನದನಂತರ ಅಂದರೆ ಕಟ್ಟಡ ದುರಂತವಾದ 48 ಗಂಟೆಗಳ ನಂತರ ನೇರವಾಗಿ ಯಂತ್ರಗಳನ್ನು ಬಳಸಿ ಅವಶೇಷಗಳನ್ನು ಕೊರೆದು ಮತ್ತುಜೆಸಿಬಿಗಳನ್ನು ಬಳಸಿ ತೆಗೆದುಹಾಕಲು ಎನ್‌ಡಿಆರ್‌ಎಫ್‌ ಚಿಂತನೆ ನಡೆಸಿದೆ. 

ನಾಯಿ-ಕ್ಯಾಮರಾ ಬಳಕೆ:ಎನ್‌ಡಿಆರ್‌ಎಫ್‌ ತಂಡದ ಶ್ವಾನ ದಳವು ಬೆಳಗ್ಗೆ 5 ಗಂಟೆಯಿಂದಲೇ ಕಾರ್ಯಾಚರಣೆಗೆ ಇಳಿಯಿತು. ನಾಲ್ಕು ನುರಿತ ಶ್ವಾನಗಳು ಅವಶೇಷಗಳಡಿ ಸಿಲುಕಿದ ವ್ಯಕ್ತಿಗಳ ಪತ್ತೆಗೆ ನೆರವಾದವು. ಇದರ ಆಧಾರದ ಮೇಲೆಯೇ “ವಿಕ್ಟಿಮ್‌ ಲೋಕೇಶನ್‌ ಕ್ಯಾಮರಾ’ಗಳನ್ನು ಬಳಸಿಕೊಂಡು ಕೆಳಗಡೆ ಸಿಲುಕಿದವರ ರಕ್ಷಣೆಗೆ ವ್ಯೂಹ ರಚಿಸಲಾಯಿತು. ಈ ಕ್ಯಾಮರಾದಲ್ಲಿ ಬರೀ ಉಸಿರಾಟವಿದ್ದರೂ ವ್ಯಕ್ತಿ ಇದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಿರುವುದರಿಂದ ನೆಲಮಹಡಿಯಲ್ಲಿ ಸಿಲುಕಿದವರ ಚಲನ-ವಲನ ಗುರುತಿಸಲು ಇದನ್ನು ಬಳಕೆ ಮಾಡಿಕೊಳ್ಳಲಾಯಿತು. ಈ ನಡುವೆ ನೆಲಮಹಡಿಯಲ್ಲಿದ್ದವರ ರಕ್ಷಣೆಗೆ ಬುಧವಾರ ಮಧ್ಯಾಹ್ನ 12:30ರ ಸುಮಾರಿಗೆ ಕಟ್ಟಡದ ಮುಂಭಾಗದಲ್ಲಿ ಅಂದರೆ ಪಶ್ಚಿಮ ದಿಕ್ಕಿನಿಂದ ಜೆಸಿಬಿ ಬಳಸಿಕೊಂಡು ದೈತ್ಯ ಸುರಂಗ ಮಾರ್ಗವನ್ನು ಕೊರೆಯಲಾಯಿತು. ಅ ಮೂಲಕ ಬಣ್ಣದ ಅಂಗಡಿ ಮತ್ತು ಪೀಠೊಪಕರಣದ ಅಂಗಡಿಗಳಲ್ಲಿ ಇದ್ದವರ ರಕ್ಷಣೆಗೆ ಯತ್ನಿಸಲಾಯಿತಾದರೂ, ಅಲ್ಲಿಂದ ಇಬ್ಬರ ಶವಗಳನ್ನು ಹೊರತರಲಾಯಿತು. ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆಯ ಕಲಂ 304 ಅಡಿ ಕಟ್ಟಡದ ನಾಲ್ವರು ಮಾಲೀಕರು ಹಾಗೂ ಎಂಜಿನಿಯರ್‌ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಕುಸಿದ ಕಟ್ಟಡಕ್ಕೆ ಪರವಾನಗಿ ನೀಡುವ ಹಂತ, ತಾಂತ್ರಿಕ ದೋಷ ಅಥವಾ ಯಾವುದೇ ಲೋಪಗಳಿದ್ದರೂ
ಕೂಡಾ ತಜ್ಞರನ್ನೊಳಗೊಂಡ ಸಮಿತಿಯಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ನಿರ್ದಾಕ್ಷಿಣ್ಯವಾಗಿ ತಪ್ಪಿತಸ್ಥರ
ವಿರುದಟಛಿ ಕ್ರಮ ಜರುಗಿಸಲಾಗುವುದು.

● ಆರ್‌.ವಿ.ದೇಶಪಾಂಡೆ, ಸಚಿವ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.