ಮಂಡ್ಯ:ಭೀಕರ ಅಪಘಾತಕ್ಕೆ ಐವರು ದಾರುಣ ಸಾವು
Team Udayavani, Mar 22, 2019, 3:03 PM IST
ನಾಗಮಂಗಲ: ಇಲ್ಲಿನ ಸಂಕನಹಳ್ಳಿ ಬಳಿ ಟಿಪ್ಪರೊಂದು ಢಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ಐವರು ದಾರುಣವಾಗಿ ಸಾವನ್ನಪ್ಪಿರುವ ಭೀಕರ ಅವಘಡ ಶುಕ್ರವಾರ ಸಂಜೆ ನಡೆದಿದೆ.
ಅಪಘಾತದ ತೀವ್ರತೆಗೆ ಆಟೋ ಚಾಲಕ ಸತೀಶ್ ಸೇರಿ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪ್ಪರ್ ಢಿಕ್ಕಿ ಯಾದ ತೀವ್ರತೆಗೆ ಆಟೋವನ್ನು ಸುಮಾರು 500 ಮೀಟರ್ಗಳಷ್ಟು ದೂರ ಎಳೆದೊಯ್ಯಲಾಗಿದ್ದು ಮೃತ ದೇಹಗಳು ಛಿದ್ರವಾಗಿವೆ ಎಂದು ವರದಿಯಾಗಿದೆ. ನಾಗಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರದಲ್ಲಿ ಶುಕ್ರವಾರ ಬೆಳಗ್ಗೆ ಕ್ಯಾಂಟರ್,ಕ್ರೂಸರ್ ಢಿಕ್ಕಿಯಾಗಿ ಸಂಭವಿಸಿದ ಅವಘಡದಲ್ಲಿ 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು.