ಬ್ಯೂಟಿಫುಲ್ ಮನಸುಗಳಿಗೆ ಯಶಸ್ಸಿನ ಸಂಭ್ರಮ
Team Udayavani, Feb 17, 2017, 3:45 AM IST
“ಬ್ಯೂಟಿಫುಲ್ ಮನಸುಗಳು’ ಚಿತ್ರದ ಬಿಡುಗಡೆಗೂ ಮುನ್ನ ಸತೀಶ್ ನೀನಾಸಂ ಇದ್ದ ಧಾವಂತ ನೋಡಬೇಕು. ಚಿತ್ರಕ್ಕೆ ಚಿತ್ರಮಂದಿರಗಳ ಅಭಾವ ಎದುರಾಗಿ, ಸತೀಶ್ ಈ ವಿಷಯವಾಗಿ ನೋವನ್ನು ಹೊರಹಾಕಿದ್ದರು. ಕಟ್ ಮಾಡಿದರೆ, ಸತೀಶ್ ಈಗ ಫುಲ್ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ, ಚಿತ್ರ 25 ದಿನಗಳನ್ನು ಮುಗಿಸಿದೆ. ಅಷ್ಟೇ ಅಲ್ಲ, ಸದ್ಯದಲ್ಲೇ ಅಮೇರಿಕಾದಲ್ಲೂ ಬಿಡುಗಡೆಯಾಗುತ್ತಿದೆ. ಈ ಡಬ್ಬಲ್ ಸಂತೋಷವನ್ನು ಹಂಚಿಕೊಳ್ಳುವುದಕ್ಕೆ ಚಿತ್ರತಂಡದವರು ಒಂದೇ ವೇದಿಕೆಯಲ್ಲಿ ಸೇರಿದ್ದರು.
ಈ ಚಿತ್ರವನ್ನು ಅಮೇರಿಕಾದಲ್ಲಿ ಬಿಡುಗಡೆ ಮಾಡುತ್ತಿರುವವರು ವಿಜಯೇಂದ್ರ ಎನ್ನುವವರು. ಇದೇ ಮೊದಲ ಬಾರಿಗೆ ಚಿತ್ರದ ವಿತರಣೆಯನ್ನು ಪಡೆದಿರುವ ಅವರು, 22 ಲಕ್ಷ ಖರ್ಚು ಮಾಡಿ, ಚಿತ್ರವನ್ನು ಇದೇ ತಿಂಗಳ 23ರಂದು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡರು. ಅಷ್ಟೇ ಅಲ್ಲ, ವಿದೇಶದಲ್ಲಿ ಚಿತ್ರ ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಧ್ಯವರ್ತಿಗಳಿಂದ ಸಾಕಷ್ಟು ನುಕ್ಸಾನು ಆಗುತ್ತಿದ್ದು, ತಮ್ಮ ಸಂಸ್ಥೆಯಡಿ, ಆ ತರಹದ ಸಮಸ್ಯೆಗಳು ಆಗುವುದಿಲ್ಲ ಎಂದರು.
ನಿರ್ಮಾಪಕ ಪ್ರಸನ್ನಗೆ ಚಿತ್ರವನ್ನು ಹೊರದೇಶಗಳಲ್ಲಿ ಬಿಡುಗಡೆ ಮಾಡುವ ವಿಷಯವಾಗಿ ಹೆಚ್ಚು ಆಸಕ್ತಿ ಇರಲಿಲ್ಲವಂತೆ. ಕಾರಣ, “ನೀರ್ದೋಸೆ’ ಚಿತ್ರದ ಹೊರದೇಶಗಳ ಬಿಡುಗಡೆ ಸಂದರ್ಭದಲ್ಲಾದ ಕೆಲವು ಘಟನೆಗಳು. ಆದರೆ, ವಿಜಯೇಂದ್ರ ಅವರು ಪಾರದರ್ಶಕವಾಗಿ ಬಿಡುಗಡೆ ಮಾಡುತ್ತಾರೆ ಎಂಬ ಕಾರಣಕ್ಕೆ ಚಿತ್ರವನ್ನು ಕೊಡುತ್ತಿರುವುದಾಗಿ ಹೇಳಿದರು. ಇನ್ನು ನಿರ್ದೇಶಕ ಜಯತೀರ್ಥ ಹೆಚ್ಚು ಮಾತನಾಡಲಿಲ್ಲ. ಥ್ಯಾಂಕ್ಯೂ ಎಂದು ಧನ್ಯವಾದ ಸ್ಲಿ$Éಸುವುದರ ಜೊತೆಗೆ, ವಿಜಯೇಂದ್ರ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಕನ್ನಡ ಚಿತ್ರಗಳನ್ನು ಹೊರದೇಶಗಳಲ್ಲಿ ಬಿಡುಗಡೆ ಮಾಡುವ ಪ್ರಯತ್ನ ಮಾಡಬೇಕು ಮತ್ತು ಈ ಮೂಲಕ ಹೊರದೇಶಗಳಲ್ಲಿ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಚಿತ್ರಕ್ಕೆ ಆರಂಭದಲ್ಲಿ ಉಂಟಾದ ಸಮಸ್ಯೆಗಳನ್ನು ನೋಡಿದಾಗ, ಚಿತ್ರ ಇಷ್ಟು ದೂರ ಸಾಗಬಹುದು ಎಂಬ ಯಾವ ನಂಬಿಕೆಯೂ ಇರಲಿಲ್ಲವಂತೆ ಸತೀಶ್ಗೆ. “ನಿಜಕ್ಕೂ ಭಯವಿತ್ತು. ಕ್ರಮೇಣ ಪ್ರೇಕ್ಷಕರು ತೋರಿಸಿದ ಪ್ರೀತಿ ನೋಡಿ ಖುಷಿಯಾಯಿತು’ ಎಂದು ಖುಷಿಪಡುವುದರ ಜೊತೆಗೆ ಧನ್ಯವಾದ ಸಮರ್ಪಿಸಿದರು. ಇನ್ನು ಸತೀಶ್ ಮಾಡಿರುವ ಪಚ್ಚಿ ಪಾತ್ರ, ಇನ್ನಾéರಿಗೂ ಹೊಂದುತ್ತಿರಲಿಲ್ಲ ಎಂದು ಶ್ರುತಿ ಹೇಳಿದರು. ತಮ್ಮ ಪಾತ್ರದ ಬಗ್ಗೆ ಸಿಗುತ್ತಿರುವ ಪ್ರತಿಕ್ರಿಯೆ ಚೆನ್ನಾಗಿದೆ ಎಂದು ಖುಷಿಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್
Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್ ನಿರ್ದೇಶನದ ಸಿನಿಮಾ
Ritanya Vijay; ದುನಿಯಾ ವಿಜಯ್ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ
DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್ನಲ್ಲಿ ಡೆವಿಲ್ ಬರೋದು ಪಕ್ಕಾ: ದರ್ಶನ್
Kannada Cinema; ರಿಲೀಸ್ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್ಗೆ ಯಶ ನಾಯಕಿ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ