ಕಥೆ: ಆಕಾಶ ಯಾಕಿಷ್ಟು ದೂರ?


Team Udayavani, Mar 2, 2017, 11:22 AM IST

444.jpg

ನೂರು, ಲಕ್ಷ, ಕೋಟಿ ವರ್ಷಗಳ ಹಿಂದೆ ಆಕಾಶ, ಭೂಮಿಗೆ ತುಂಬಾ ಸಮೀಪದಲ್ಲಿತ್ತಂತೆ. ಆಗ ಆಕಾಶವನ್ನು ಹಗಲಿನಲ್ಲಿ ಸೂರ್ಯ ಮತ್ತು ರಾತ್ರಿಯ ವೇಳೆ ಚಂದ್ರ ಕಾವಲು ಕಾಯುತ್ತಿದ್ದರು. ಸೂರ್ಯ ಮತ್ತು ಚಂದ್ರನಿಗೆ ಒಬ್ಬರು ಅಜ್ಜಿ ಇದ್ದರು. 

ತುಂಬಾ ತುಂಬಾ ವರ್ಷಗಳ ಹಿಂದೆ ಅಂದರೆ, ನೂರು, ಲಕ್ಷ, ಕೋಟಿ ವರ್ಷಗಳ ಹಿಂದೆ ಆಕಾಶ ನಮಗೆ ಅಂದರೆ ಭೂಮಿಗೆ ತುಂಬಾ ಸಮೀಪದಲ್ಲಿತ್ತಂತೆ. ಆಗ ಆಕಾಶವನ್ನು ಹಗಲಿನಲ್ಲಿ ಸೂರ್ಯ ಮತ್ತು ರಾತ್ರಿಯ ವೇಳೆ ಚಂದ್ರ ಕಾವಲು ಕಾಯುತ್ತಿದ್ದರು. ಸೂರ್ಯ ಮತ್ತು ಚಂದ್ರನಿಗೆ ಒಬ್ಬರು ಅಜ್ಜಿ ಇದ್ದರು. ಅವರು ಸೂರ್ಯ ಮತ್ತು ಚಂದ್ರನಿಗೆ ದಿನವೂ ಅಡುಗೆ ಮಾಡಿ ಬಡಿಸುತ್ತಿದ್ದರು. ಸೂರ್ಯ ಬೆಳ್ಳಂಬೆಳಗ್ಗೆಯೇ ಎದ್ದು ಅಜ್ಜಿ ಮಾಡಿಕೊಟ್ಟ ಬಿಸಿಬಿಸಿ ಊಟ ತಿಂದು, ಆಕಾಶ ಕಾಯಲು ಹೊರಡುತ್ತಿದ್ದ. ಹಗಲೆಲ್ಲಾ ಆಕಾಶವನ್ನು ಕಾದು ಮುಸ್ಸಂಜೆ ಮನೆಗೆ ಬರುತ್ತಿದ್ದ. ಆಗಲೂ ಅಜ್ಜಿ ಮಾಡಿಕೊಡುವ ಬಿಸಿಬಿಸಿ ಊಟ ಮಾಡಿ ಮಲಗುತ್ತಿದ್ದ. ಹಾಗೆಯೇ ಚಂದ್ರನೂ ಹಗಲೆಲ್ಲಾ ಮನೆಯಲ್ಲಿದ್ದು, ಕತ್ತಲಾಗುವ ಮುನ್ನವೇ ಅಜ್ಜಿ ಬೆಳಗ್ಗೆ ಮಾಡಿಟ್ಟ ತಣ್ಣನೆಯ ಊಟ ಮಾಡಿ, ಆಕಾಶ ಕಾಯಲು ಹೋಗುತ್ತಿದ್ದ. ರಾತ್ರಿಯೆಲ್ಲಾ ಆಕಾಶವನ್ನು ಕಾದು ಬೆಳಗಿನ ಜಾವಕ್ಕೆ ಬಂದು ಮತ್ತೆ ರಾತ್ರಿ ಅಜ್ಜಿ ಮಾಡಿಟ್ಟಿದ್ದ ತಣ್ಣನೆಯ ಊಟ ಮಾಡಿ ಮಲಗುತ್ತಿದ್ದ. 

ಒಂದು ದಿನ ಬೆಳಗ್ಗೆ ಸೂರ್ಯ ಎಂದಿಗಿಂತ ಮುನ್ನವೇ ತನ್ನ ಕೆಲಸಕ್ಕೆ ಹೊರಟಿದ್ದ. ಚಂದ್ರ ಭೂಮಿಗೆ ಬರಲು ಇನ್ನೂ ಸ್ವಲ್ಪ ಸಮಯವಿತ್ತು. ಆಗ ಅಜ್ಜಿ ಮನೆಯಲ್ಲಿ ಯಾರೂ ಇಲ್ಲ, ಮನೆಯನ್ನು ಸ್ವತ್ಛ ಮಾಡೋಣವೆಂದುಕೊಂಡರು. ಅಜ್ಜಿ ಬಗ್ಗಿಕೊಂಡು ಬಟ್ಟೆಯಿಂದ ಧೂಳು ಕೊಡವುತ್ತಿದ್ದರು. ಆ ವೇಳೆ ಬೆನ್ನಿನ ಮೇಲೆ ಏನೋ ತಾಗಿದಂತೆ ಭಾಸವಾಯಿತು. ತಲೆ ತಿರುಗಿಸಿ ನೋಡಿದರೆ ಆಕಾಶ ಬೆನ್ನಿಗೆ ತಾಗುತ್ತಿತ್ತು. ಅಜ್ಜಿಗೆ ತುಂಬಾ ಸಿಟ್ಟು ಬಂದಿತು. ಕೆಲಸ ಮಾಡುವಾಗ ಇದೊಂದು ಅಡ್ಡ ಬರಬೇಕೆ ಎಂದು ಕೈಯಲ್ಲಿದ್ದ ಬಟ್ಟೆಯಿಂದ ಒಂದೇಟು ಹಾಕಿದರು. ಅದು ಸ್ವಲ್ಪವಷ್ಟೇ ಮೇಲೆ ಹೋಗಿ ಮತ್ತೆ ಅಜ್ಜಿಯ ಬೆನ್ನಿಗೆ ತಾಗುತ್ತಿತ್ತು. ಅಜ್ಜಿಗೆ ಮತ್ತೆ ಸಿಟ್ಟು ಬಂದಿತು. ಮೂಲೆಯಲ್ಲಿದ್ದ ದೊಣ್ಣೆ ಹಿಡಿದು ಜೋರಾಗಿ ಬೀಸಿದರು.

ಕೂಡಲೇ ಆಕಾಶಕ್ಕೆ ಎಲ್ಲಿಲ್ಲದ ಸಿಟ್ಟು ಬಂದಿತು. ಆಗ ಆಕಾಶ ಅಂದುಕೊಳ್ಳುತ್ತೆ: “ಈ ಭೂಮಿಯ ಸುತ್ತಮುತ್ತ ಇರಲೇಬಾರದು, ಇನ್ನೆಂದೂ ಇತ್ತ ಬರುವುದಿಲ್ಲ’ ಎಂದು ದೂರದೂರಕ್ಕೆ… ದೂರ ದೂರಕ್ಕೆ ಹೋಗಿಬಿಡಬೇಕು ಅಂದುಕೊಂಡು ಎತ್ತರಕ್ಕೆ ಹಾರಿಹೋಯಿತು. ಆಮೇಲೆ ಸೂರ್ಯ ಚಂದ್ರರೂ ತುಂಬಾ ಕೆಳಗಿದ್ದ ಭೂಮಿಗೆ ಬರಲಾಗದೆ ಅಲ್ಲಿಯೇ ಉಳಿದುಬಿಟ್ಟರು. 

ಟಾಪ್ ನ್ಯೂಸ್

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

BJP ನಿರ್ದೇಶಿಸಿದರೆ ಮಂಡ್ಯದಲ್ಲೂ ಪ್ರಚಾರ: ಸುಮಲತಾ ಅಂಬರೀಷ್‌

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Mangaluru ಪೆಟ್ರೋಲ್‌, ಡೀಸೆಲ್‌ ತುಟ್ಟಿ : ಪುಷ್ಪಾ ಅಮರನಾಥ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Congress ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲ ಇಲ್ಲ : ಯಶ್‌ಪಾಲ್‌

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Lok Sabha Election ಫ‌ಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಕುರ್ಚಿ ಅಲುಗಾಡಲಿದೆ: ಡಿ.ವಿ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.