ದಾರಿ ತಪ್ಪಿದ ಮಕ್ಕಳು: ಜಂಗಲ್‌ ಬುಕ್‌ ಅಲ್ಲ; ಇದು ಪುಟಾಣಿ ಸಫಾರಿ


Team Udayavani, Apr 21, 2017, 12:18 PM IST

21-SUCHI-1.jpg

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಮಕ್ಕಳ ಚಿತ್ರಗಳು ತಯಾರಾಗಿ ಬಿಡುಗಡೆಯಾಗಿವೆ. ಆ ಸಾಲಿಗೆ “ಪುಟಾಣಿ ಸಫಾರಿ’ ಹೊಸ ಸೇರ್ಪಡೆ. ಹೊಸತಂಡ ಸೇರಿಕೊಂಡು ಹೀಗೊಂದು ಅಡ್ವೆಂಚರ್‌ ಕುರಿತು ಸಿನಿಮಾ ಮಾಡಿದೆ. ಆ ಬಗ್ಗೆ ಹೇಳಲೆಂದೇ ನಿರ್ದೇಶಕ ರವೀಂದ್ರ ವಂಶಿ ತಮ್ಮ ತಂಡದೊಂದಿಗೆ ಪತ್ರಕರ್ತರ ಮುಂದೆ ಹಾಜರಾಗಿದ್ದರು. ನಿರ್ದೇಶಕ ರವೀಂದ್ರ ವಂಶಿ ಅವರಿಗೆ “ಜಂಗಲ್‌ ಬುಕ್‌’ ಚಿತ್ರ ನೋಡಿದಾಗ, ನಾವೇಕೆ ಅಂಥದ್ದೊಂದು ಮಕ್ಕಳ ಸಿನಿಮಾವನ್ನು ಕನ್ನಡದಲ್ಲಿ ಮಾಡಬಾರದು ಅಂತ ಯೋಚನೆ ಬಂತಂತೆ. ಹಾಗೆ ಹುಟ್ಟಿಕೊಂಡ ಯೋಚನೆಯೇ “ಪುಟಾಣಿ ಸಫಾರಿ’. ಇದೊಂದು ಅಡ್ವೆಂಚರ್‌ ಕುರಿತಾದ ಸಿನಿಮಾ ಎಂದು ಮಾತಿಗಿಳಿದ ಅವರು, ಬರೀ ಓದಿನ ಕಡೆ ಗಮನಹರಿಸುವ ಮಕ್ಕಳು, ಒಮ್ಮೆ ಕಾಡಿಗೆ ಹೋಗಿ, ಅಲ್ಲಿ ದಾರಿ ತಪ್ಪಿ, ಕಾಡು ಪ್ರಾಣಿಗಳ ನಡುವೆ ಸಿಲುಕಿ ಅನುಭವಿಸುವ ಸಮಸ್ಯೆಗಳು ಹಾಗೂ ಅವರು ಹೇಗೆ ಅಲ್ಲಿಂದ ಆಚೆ ಬರುತ್ತಾರೆ ಎಂಬುದು ಚಿತ್ರದ ಒನ್‌ಲೈನ್‌. ಇಲ್ಲಿ ಸಫಾರಿ ಅಂದಮೇಲೆ ಪ್ರಾಣಿಗಳು ಇರಲೇಬೇಕು. ಗ್ರಾಫಿಕ್ಸ್‌ ಹೆಚ್ಚಾಗಿ ಬಳಸಲಾಗಿದೆ. ಗ್ರೀನ್‌ಮ್ಯಾಟ್‌ನಲ್ಲೇ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಶಿರಸಿ, ಸಿದ್ಧಾಪುರ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮಾಡಿದ್ದು, ಇಷ್ಟರಲ್ಲೇ ಸಿನಿಮಾ ತೋರಿಸುವುದಾಗಿ ಹೇಳಿಕೊಂಡರು ನಿರ್ದೇಶಕರು.

ನಿರ್ಮಾಪಕ ಚಂದ್ರಶೇಖರ್‌ ಅವರಿಗೆ ಇದು ಮೊದಲ ಸಿನಿಮಾ. “ಶಾಸಕ ಮುನಿರತ್ನ ಅವರ ಸಹಕಾರ, ಸಲಹೆಯಿಂದ ಈ ಚಿತ್ರ ಮಾಡಿದ್ದೇನೆ. ಇಲ್ಲಿ ಮಕ್ಕಳಿಗೆ ಇಷ್ಟವಾಗುವಂತಹ ಅಂಶಗಳಿವೆ. ಪೋಷಕರೂ ತಿಳಿದುಕೊಳ್ಳುವ ವಿಷಯಗಳಿವೆ. ಇದೊಂದು ಮನರಂಜನೆಯ ಜತೆಗೆ ಸಣ್ಣದ್ದೊಂದು ಸಂದೇಶ ಸಾರುವ ಚಿತ್ರ’ ಎಂದು ವಿವರ ಕೊಟ್ಟರು ಅವರು.

ಅಂದು ಚಿತ್ರದ ಹಾಡು ಮತ್ತು ಟೀಸರ್‌ ರಿಲೀಸ್‌ ಮಾಡಿದ ಶಾಸಕ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, “ಚಂದ್ರಶೇಖರ್‌ ನಮ್ಮ ಕ್ಷೇತ್ರದವರು. ಮೊದಲ ಸಿನಿಮಾ ಆಗಿದ್ದರಿಂದ ಭಯ ಇದ್ದೇ ಇರುತ್ತೆ. ಮಕ್ಕಳ ಸಿನಿಮಾಗೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನೂ ಕಾನೂನು ರೀತಿಯಲ್ಲಿ ಸಿಗಲು ಸಹಾಯ ಮಾಡುತ್ತೇನೆ. ಕನ್ನಡ ಚಿತ್ರರಂಗ ಸಣ್ಣ ಮಾರುಕಟ್ಟೆ ಹೊಂದಿದೆ. ಹಾಗಾಗಿ ಇಲ್ಲಿ ಯಾರೇ ಬಂದರೂ, ಇತಿಮಿತಿಯಲ್ಲಿ ಸಿನಿಮಾ ಮಾಡಬೇಕು’ ಎಂದು ಕಿವಿ ಮಾತು ಹೇಳಿದರು ಮುನಿರತ್ನ.

ಚಿತ್ರಕ್ಕೆ ಯೋಗರಾಜ್‌ ಭಟ್‌ ಗೀತೆ ಬರೆದರೆ, ವೀರ್‌ ಸಮರ್ಥ್ ಸಂಗೀತ ನೀಡಿದ್ದಾರೆ. ಜೀವನ್‌ ಛಾಯಾಗ್ರಹಣವಿದೆ. ಸಿ.ರವಿಚಂದ್ರನ್‌ ಅವರು ಕತ್ತರಿ ಪ್ರಯೋಗಿಸಿದ್ದಾರೆ. ಚಿತ್ರದಲ್ಲಿ ರಾಕಿನ್‌, ರಾಜೀವ್‌, ವಿಜಯ್‌, ಸಹನಾ, ಬೇಬಿ ಮಾನಸ ಇತರರು ನಟಿಸಿದ್ದಾರೆ. ಮನೀಶ್‌, ರೇಣುಕಾ ಪ್ರಸಾದ್‌, ರವಿಗೌಡ್ರು, ಮೋಹನ್‌ಕುಮಾರ್‌ ಇತರರು “ಪುಟಾಣಿ ಸಫಾರಿ’ ತಂಡಕ್ಕೆ ಶುಭಹಾರೈಸುವ ಹೊತ್ತಿಗೆ ಪತ್ರಿಕಾಗೋಷ್ಠಿಗೆ ತೆರೆಬಿತ್ತು.

ಟಾಪ್ ನ್ಯೂಸ್

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.