strict ಆಫೀಸರ್‌ ಗಣಿ


Team Udayavani, Apr 21, 2017, 1:25 PM IST

21-SUCHI-7.jpg

“ಈಅವತಾರದಲ್ಲಿ ನನ್ನನ್ನು ನಾನೇ ನೋಡಿಲ್ಲ …’ – ಗಣೇಶ್‌ ತುಂಬಾ ಎಕ್ಸೆ„ಟ್‌ ಆಗಿ ಹೀಗೆ ಹೇಳಿಕೊಂಡರು. ಅವರು ಹೀಗೆ ಹೇಳಲು
ಕಾರಣವಾಗಿದ್ದು ಅವರು ಮಾಡಿರುವ ಪಾತ್ರ. ಇಲ್ಲಿವರೆಗೆ ಗಣೇಶ್‌ ಅವರನ್ನು ನೀವು ಲವರ್‌ಬಾಯ್‌ ಆಗಿ ನೋಡಿದ್ದೀರಿ, ನಗಿಸುತ್ತಲೇ ನಿಮ್ಮ ಮನಸ್ಸಿಗೆ ಹತ್ತಿರವಾಗುವ ಫ‌ನ್ನಿ ಹುಡುಗನಾಗಿ ಇಷ್ಟಪಟ್ಟಿದ್ದೀರಿ. ಆದರೆ, ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಅವರನ್ನು 
ಯಾವತ್ತೂ ನೋಡಿಲ್ಲ. ಆದರೆ ಈ ಬಾರಿ ಅವರ ಅಭಿಮಾನಿಗಳಿಗೆ ಆ ಅವಕಾಶವೂ ಸಿಕ್ಕಿದೆ. ಅದು “ಪಟಾಕಿ’ ಮೂಲಕ.
ಗಣೇಶ್‌ “ಪಟಾಕಿ’ ಸಿನಿಮಾ ಮಾಡಿರೋದು ನಿಮಗೆ ಗೊತ್ತೇ ಇದೆ.

“ಪಟಾಕಿ’ ಚಿತ್ರದ ಟ್ರೇಲರ್‌ ಹಿಟ್‌ ಆಗಿದೆ. ಸಿನಿಮಾವನ್ನು ಕೂಡಾ ಜನ ಇಷ್ಟಪಡುತ್ತಾರೆ, ತನ್ನ ಪಾತ್ರವನ್ನು ಎಂಜಾಯ್‌ ಮಾಡುತ್ತಾರೆಂಬ ವಿಶ್ವಾಸ ಗಣೇಶ್‌ಗಿದೆ. “ತುಂಬಾ ಎನರ್ಜಿಟಿಕ್‌ ಆದ ಪಾತ್ರ. ಪಾತ್ರ ಎಷ್ಟು ಪವರ್‌ಫ‌ುಲ್‌ ಆಗಿದೆಯೋ, ಮನರಂಜನೆ ಕೂಡಾ ಅಷ್ಟೇ ಪವರ್‌ಫ‌ುಲ್‌ ಆಗಿದೆ. ಈ ಪಾತ್ರ ನನಗೂ ಹೊಸದು. ನಾನು ಕೂಡಾ ನನ್ನನ್ನು ಈ ಅವತಾರದಲ್ಲಿ ಹಿಂದೆಂದೂ ನೋಡಿಲ್ಲ’ ಎನ್ನುತ್ತಾ ನಗುತ್ತಾರೆ ಗಣೇಶ್‌. ಪೊಲೀಸ್‌ ಪಾತ್ರದಲ್ಲಿ ನಟಿಸಬೇಕು, ಖಾಕಿ ಹಾಕಿ ಘರ್ಜಿಸಬೇಕೆಂಬ ಆಸೆ ಬಹುತೇಕ ನಟರಿಗೆ ಇದ್ದೇ ಇರುತ್ತದೆ. ಈ ಆಸೆಯಿಂದ ಗಣೇಶ್‌ ಕೂಡಾ ಹೊರತಾಗಿರಲಿಲ್ಲ.

“ಆ ತರಹದ್ದೊಂದು ಆಸೆ ಯಾರಿಗೆ ಇರಲ್ಲ ಹೇಳಿ, ಎಲ್ಲರಿಗೂ ಇರುತ್ತದೆ. ನನಗೂ ಪೊಲೀಸ್‌ ಪಾತ್ರ ಮಾಡಬೇಕೆಂಬ ಆಸೆ ಇತ್ತು. ಅದು “ಪಟಾಕಿ’ ಮೂಲಕ ಈಡೇರಿದೆ. ನಾನು ತುಂಬಾ ಇಷ್ಟಪಟ್ಟು ಎಂಜಾಯ್‌ ಮಾಡುತ್ತಾ ಮಾಡಿದ ಪಾತ್ರವಿದು. ಈಗ ಚಿತ್ರದ ಟ್ರೇಲರ್‌ ದೊಡ್ಡ ಹಿಟ್‌ ಆಗಿದೆ. ಅಲ್ಲಿಗೆ ಜನರಿಗೂ ಚಿತ್ರದ ಬಗ್ಗೆ ಕುತೂಹಲವಿದೆ ಎಂಬುದು ಸಾಬೀತಾಗಿದೆ’ ಎನ್ನುವುದು ಗಣೇಶ್‌ ಮಾತು.

ಮೊದಲ ಬಾರಿಗೆ ಗಣೇಶ್‌ ಪೊಲೀಸ್‌ ಪಾತ್ರ ಮಾಡಿದ್ದಾರೆ. ಏನಾದರೂ ಸಿದ್ಧತೆ ಮಾಡಿಕೊಂಡಿದ್ದಾರಾ, ಯಾರನ್ನಾದರೂ ಅನುಕರಣೆ ಮಾಡಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಗೆ ಗಣೇಶ್‌ ಹೌದೆಂದು ಉತ್ತರಿಸುತ್ತಾರೆ. “ನಾನು
ಈ ಪಾತ್ರಕ್ಕೆ ಒಂದಷ್ಟು ತಯಾರಿ ಮಾಡಿಕೊಂಡಿದ್ದೆ. ಮುಖ್ಯವಾಗಿ ಬಾಡಿ ಲಾಂಗ್ವೇಜ್‌ ಬಗ್ಗೆ ಗಮನಹರಿಸಿದ್ದೇನೆ. ಪೊಲೀಸ್‌ ಆಫೀಸರ್ ಹೇಗಿರುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಇನ್ನು, ಅನುಕರಣೆ ಅಂದರೆ ನನಗೊಬ್ಬರು ಪೊಲೀಸ್‌ ಆಫೀಸರ್‌ ಫ್ರೆಂಡ್‌ ಇದ್ದಾರೆ. ಅವರನ್ನು ಸ್ವಲ್ಪ ಫಾಲೋ ಮಾಡಿದ್ದೇನೆ. ಅವರ ಮೈಮೇಲೆ ಖಾಕಿ ಬಿದ್ದ ಕೂಡಲೇ ಅವರ ಬಾಡಿ ಲಾಂಗ್ವೇಜ್‌, ಮ್ಯಾನರೀಸಂ ಎಲ್ಲವೂ ಬದಲಾಗುತ್ತದೆ. ಅವರನ್ನು ನಾನು ತುಂಬಾ ಗಮನಿಸಿದ್ದೇನೆ ಮತ್ತು ಪಾತ್ರದಲ್ಲಿ ಬಳಸಿಕೊಂಡಿದ್ದೇನೆ’ ಎನ್ನುತ್ತಾರೆ.

ಗಣೇಶ್‌ ಈಗ ಈಗ ಬೇರೆ ತರಹದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಬೇರೆ ತರಹದ ಪಾತ್ರ ಮಾಡಲು ಪ್ರಯತ್ನಿಸುತ್ತಿದ್ದೇನೆ. ಹಾಗಂತ ಜನ ನನ್ನಿಂದ ಏನು ಬಯಸುತ್ತಾರೆ, ಆರಂಭದ ದಿನಗಳಲ್ಲಿ ನನ್ನಲ್ಲಿ ಏನು ಇಷ್ಟಪಟ್ಟಿದ್ದಾರೆ ಅದರ ಜೊತೆಗೆ ಹೊಸತನ
ಕೊಡಲು ಪ್ರಯತ್ನಿಸುತ್ತಿದ್ದೇನೆ. ಒಮ್ಮೆಲೇ ನನ್ನದಲ್ಲದ ಪಾತ್ರದಲ್ಲಿ ಕಾಣಿಸಿಕೊಂಡರೂ ಅಭಿಮಾನಿಗಳು ಅದನ್ನುಅರಗಿಸಿಕೊಳ್ಳೋದು
ಕಷ್ಟ. ಹಾಗಂತ ಮಾಡಿದ್ದನ್ನೇ ಮಾಡಿ ದರೂ ಅವರಿಗೆ ಇಷ್ಟ ವಾಗುವುದಿಲ್ಲ. ಹಾಗಾಗಿ ಎರಡನ್ನೂ ಬ್ಯಾಲೆನ್ಸ್‌ ಮಾಡುತ್ತಾ
ಮುಂದುವರಿಯುತ್ತಿದ್ದೇನೆ’ ಎನ್ನುವುದು ಗಣೇಶ್‌ ಮಾತು. 

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.