ಪುರಾಣ ಕತೆ: ಮುಚುಕುಂದ 


Team Udayavani, May 4, 2017, 3:45 AM IST

03-CHINNARY-1.jpg

ಕೃಷ್ಣನು ಮಥುರೆಗೆ ಹಿಂದಿರುಗಿದ. ಬಲರಾಮನನ್ನು ನಗರದ ರಕ್ಷಣೆಗೆ ಬಿಟ್ಟು ತಾನು ಊರ ಹೆಬ್ಟಾಗಿಲಿಗೆ ಬಂದ. ಆ ಹೊತ್ತಿಗೆ ಕಾಲಯವನನು ಅಲ್ಲಿ ಬೀಡುಬಿಟ್ಟಿದ್ದ. ಅವನು ಕೃಷ್ಣನನ್ನು ನೋಡಿರಲಿಲ್ಲವಾದರೂ ಅವನ ರೂಪದಿಂದ ಗುರುತು ಹಿಡಿದ. ಅವನನ್ನು ಕಂಡು ಕೃಷ್ಣನು ಹೆದರಿಕೊಂಡವನಂತೆ ಓಡಲಾರಂಭಿಸಿದ. ಕಾಲಯವನನು ಅಟ್ಟಿಸಿಕೊಂಡು ಬಂದ. ಕೃಷ್ಣನು ಬೆಟ್ಟಗಳಲ್ಲಿ ಒಂದು ಗುಹೆಯನ್ನು ಹೊಕ್ಕ. ಕಾಲಯವನನೂ ಗುಹೆಗೆ ನುಗ್ಗಿದ. ಗುಹೆಯಲ್ಲಿ ಕಗ್ಗತ್ತಲು. ಕಾಲಯವನನಿಗೆ ಯಾರೋ ಮಲಗಿರುವುದು ಅಸ್ಪಷ್ಟವಾಗಿ ಕಂಡಿತು. ಕೃಷ್ಣನೇ ಇರಬೇಕೆಂದು ಮಲಗಿದ್ದವನನ್ನು ಒದ್ದ. 

ಮಲಗಿದ್ದವನು ಎದ್ದು ಕೋಪದಿಂದ ಅವನನ್ನು ನೋಡಿದ. ಕಾಲಯವನನು ಸುಟ್ಟು ಬೂದಿಯಾದ. ಆಗ ಕೃಷ್ಣನು ಅವನಿಗೆ ಕಾಣಿಸಿಕೊಂಡ. ಕೃಷ್ಣನ ದಿವ್ಯಮಂಗಲ ರೂಪವನ್ನು ಕಂಡು, ಮಲಗಿ ಎದ್ದಾತನಲ್ಲಿ ಭಕ್ತಿ ಉಕ್ಕಿತು. ತಾನು ಯಾರೆಂದು ಹೇಳಿಕೊಂಡ. ಅವನು “ಮುಚುಕುಂದ’ ಎಂಬ ರಾಜ. ದೇವತೆಗಳಿಗೆ ರಾಕ್ಷಸರಿಂದ ಕಾಟ ಹೆಚ್ಚಾದಾಗ ಅವರ ನೆರವಿಗೆ ಹೋದ. ಬಹಳ ಕಾಲ ನಿದ್ರೆ ಇರಲಿಲ್ಲ. ಅಲ್ಲಿಂದ ಬಂದವನು ನಿರಾತಂಕವಾಗಿ ನಿದ್ರೆ ಮಾಡುತ್ತಿದ್ದ. ತನ್ನ ಮುಂದೆ ಇರುವುದು ಕೃಷ್ಣ ಎಂದು ತಿಳಿಯುತ್ತಲೇ ಅವನು ನಮಸ್ಕರಿಸಿ ತನಗೆ ಮೋಕ್ಷವನ್ನು ಅನುಗ್ರಹಿಸಬೇಕೆಂದು ಬೇಡಿದ. ಕೃಷ್ಣನು ಅವನು ಮುಂದಿನ ಜನ್ಮದಲ್ಲಿ ಬ್ರಹ್ಮಜ್ಞಾನಿಯಾಗಿ ಮೋಕ್ಷವನ್ನು ಪಡೆಯುವನೆಂದು ಭರವಸೆಯನ್ನು ಕೊಟ್ಟ.

ಕಾಲಯವನು ಸತ್ತ ಮೇಲೆ ಮಥುರೆಯ ಹೊರಗೆ ಬೀಡುಬಿಟ್ಟಿದ್ದ ಅವನ ಸೈನ್ಯವನ್ನು ಸೋಲಿಸುವುದು ಕೃಷ್ಣನಿಗೆ ಕಷ್ಟವಾಗಲಿಲ್ಲ. ಆ ಸೈನ್ಯವನ್ನು ಸೋಲಿಸಿದಾಗ ಅವನಿಗೆ ಬೇಕಾದಷ್ಟು ಧನವು ಸಿಕ್ಕಿತು. ಅದನ್ನು ಮಥುರೆಗೆ ಸಾಗಿಸುತ್ತಿದ್ದಾಗ ಜರಾಸಂಧನು ತನ್ನ ಇಪ್ಪತ್ತಮೂರು ಅಕ್ಷೋಹಿಣಿ ಸೈನ್ಯದೊಂದಿಗೆ ಮಥುರೆಯನ್ನು ಮುತ್ತಿದ. ಈ ಬಾರಿ ಬಲರಾಮ ಕೃಷ್ಣರು ಅವನೊಡನೆ ಯುದ್ಧಮಾಡಲಿಲ್ಲ. ಸಾಗಿಸುತ್ತಿದ್ದ ಧನವನ್ನು ಬಿಟ್ಟು ಓಡಿಹೋದರು. ಜರಾಸಂಧ ಅಟ್ಟಿಸಿಕೊಂಡು ಬಂದ. ರಾಮ, ಕೃಷ್ಣರು ಒಂದು ಬೆಟ್ಟವನ್ನು ಹತ್ತಿದರು. ಜರಾಸಂಧನು ಬೆಟ್ಟದ ಸುತ್ತ ಸೌದೆಯನ್ನು ಒಟ್ಟಿಸಿ ಬೆಂಕಿಹಾಕಿಸಿದ. ರಾಮ, ಕೃಷ್ಣರು ತಪ್ಪಿಸಿಕೊಂಡು ದ್ವಾರಕೆಗೆ ಹೋದರು. ಜರಾಸಂಧನು ಅವರಿಬ್ಬರೂ ಬೆಂಕಿಯಲ್ಲಿ ಹತರಾಗಿರಬೇಕೆಂದು ಯೋಚಿಸಿ, ಮಗಧ ದೇಶಕ್ಕೆ ಹಿಂದಿರುಗಿದ.

ಎಲ್‌. ಎಸ್‌ ಶೇಷಗಿರಿ ರಾವ್‌
(“ಕಿರಿಯರ ಭಾಗವತ’ ಪುಸ್ತಕದಿಂದ)

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.