ಅಲೆಮಾರಿಗಳ ಊರಲ್ಲಿ…ಪಾಕಿಸ್ತಾನದ ಗಡಿಯಲ್ಲೊಂದು ಕಾಲ್ಪನಿಕ ಪಿರಂಗಿಪುರ
Team Udayavani, May 19, 2017, 11:59 PM IST
ಸಿನಿಮಾ ಅನ್ನೋದೇ ಒಂದು ಕಲ್ಪನೆ. ಅದರಲ್ಲೂ ಕಥೆಯಲ್ಲಿ ಮೂಡಿಬರುವ ಪಾತ್ರಗಳು, ಊರುಗಳು ಎಲ್ಲವೂ ಕಾಲ್ಪನಿಕ. ಅಂಥದ್ಧೇ ಮತ್ತೂಂದು ಪ್ರಯೋಗದ ಚಿತ್ರ ‘ಪಿರಂಗಿಪುರ’. ಮೊದಲೇ ಹೇಳಿದಂತೆ, ಈ ‘ಪಿರಂಗಿಪುರ’ ಅನ್ನುವ ಊರು ಕೂಡ ಕಾಲ್ಪನಿಕವೇ. ಇದು ಸಂಚಾರಿ ವಿಜಯ್ ಅಭಿನಯದ ಸಿನಿಮಾ. ಜನಾರ್ದನ್ ಪಿ.ಜಾನಿ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಮೊದಲ ಪ್ರಯತ್ನವಾದ್ದರಿಂದ, ನಿರ್ದೇಶಕರಿಗೆ ಹೊಸದೇನನ್ನೋ ಕಟ್ಟಿಕೊಡಬೇಕು ಎಂಬ ಆಸೆ ಮತ್ತು ಹಠ. ಅದಕ್ಕಾಗಿಯೇ ಅವರು, ಕಳೆದ ಎರಡು ವರ್ಷಗಳಿಂದಲೂ ಕಥೆ ಕೆತ್ತನೆಯಲ್ಲಿ ತೊಡಗಿ, ಸುಮಾರು ಎರಡು ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿ, ಅವರದೇ ಆದ ಕಲ್ಪನೆಯ ಊರನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ.
ಅಂದಹಾಗೆ, ‘ಪಿರಂಗಿಪುರ’ ಎಂಬ ಇರದೇ ಊರನ್ನು ಸೃಷ್ಟಿಸಿರುವ ನಿರ್ದೇಶಕರು ಈ ಚಿತ್ರದಲ್ಲಿ ಸಂಚಾರಿ ವಿಜಯ್ಗೆ ಗುರುತೇ ಸಿಗದಂತಹ ಗೆಟಪ್ ಹಾಕಿಸಿ, ಒಂದಷ್ಟು ಕುತೂಹಲ ಕೆರಳಿಸಿದ್ದಾರೆ. ಇತ್ತೀಚೆಗೆ, ‘ಪಿರಂಗಿಪುರ’ ಕುರಿತು ವಿವರ ಕೊಡಲೆಂದೇ ಪತ್ರಕರ್ತರನ್ನು ಆಹ್ವಾನಿಸಿದ್ದರು ನಿರ್ದೇಶಕ ಜಾನಿ. ಮಾತುಕತೆಗೂ ಮುನ್ನ, ತೆರೆಯ ಮೇಲೆ ಸಣ್ಣದ್ದೊಂದು ಸಾಲು ಮೂಡಿಬಂತು. ‘ಗುರಿ ತಲುಪುವವರೆಗೂ ಎಲ್ಲರೂ ಅಲೆಮಾರಿಗಳು…’ ಈ ಸಾಲು ಹಾಗೊಮ್ಮೆ ಕಂಡು ಕಣ್ಮರೆಯಾಯಿತು. ಅದಾದ ಬಳಿಕ ‘ಪಿರಂಗಿಪುರ’ ಎಂಬ ಶೀರ್ಷಿಕೆ ಕಾಣಿಸಿಕೊಂಡು, ವಿಭಿನ್ನ ಗೆಟಪ್ನಲ್ಲಿರುವ ಸಂಚಾರಿ ವಿಜಯ್ ಅವರ ಚಿತ್ರಣವೂ ಕಾಣಿಸಿಕೊಂಡಿತು. ಅಲ್ಲಿಗೆ ‘ಪಿರಂಗಿಪುರ’ ಎಂಬ ನಿರ್ದೇಶಕರ ಕಲ್ಪನೆ ಊರಿನಲ್ಲಿ ಏನೆಲ್ಲಾ ಇದೆ ಅನ್ನೋದ್ದನ್ನು ಸ್ವಲ್ಪ ಗೌಪ್ಯವಾಗಿಟ್ಟರು ನಿರ್ದೇಶಕರು.
ಇದು ಕನ್ನಡದ ಜತೆಯಲ್ಲಿ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಸಿನಿಮಾ. ಹಾಗಾಗಿಯೇ ನಿರ್ದೇಶಕರು ಅಂದು ಮಾತಿಗೆ ಕುಳಿತಿದ್ದರು. ‘ಇದು ರಾಜಾರಾಮ್ ಎಂಬ ವ್ಯಕ್ತಿಯ ಬದುಕಿನ ಏರಿಳಿತಗಳನ್ನು ಮನೋಸೈದ್ಧಾಂತಿಕ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಪ್ರಾಚೀನ ಕಾಲದ ಅಪರಾಧ ಚರಿತ್ರೆಯನ್ನು ಬಿಂಬಿಸುವ ಹಚ್ಚೆಗಳನ್ನು ಹೊಂದಿರುವ ಪಿರಂಗಿಗಳು ಎಂಬ ಪಾತ್ರಗಳನ್ನೂ ಸೃಷ್ಟಿಸಲಾಗಿದೆ. ಜೈ ಮತ್ತು ರಾಣಾ ಎಂಬ ಇಬ್ಬರು ಕಲಾವಿದರು ಈ ವಿಶಿಷ್ಟ ಪಾತ್ರಗಳಿಗೆ ತಯಾರಾಗುತ್ತಿದ್ದಾರೆ. ಅದು ಚಿತ್ರದ ಹೈಲೆಟ್ ಆಗಿರುವ ಪಾತ್ರಗಳು ಎಂಬುದು ನಿರ್ದೇಶಕರ ಮಾತು.
ಬೆಂಗಳೂರಿನಿಂದ ರಾಜಸ್ಥಾನದವರೆಗೆ ನಡೆಯುವ ಜರ್ನಿ ಕಥೆ ಇದು. ಸುಮಾರು 70 ದಿನಗಳ ಕಾಲ ತಂಡ ಪ್ರಯಾಣ ಬೆಳೆಸುತ್ತಲೇ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದೆ. ನಾಯಕ ಸಂಚಾರಿ ವಿಜಯ್ ಚಿತ್ರದಲ್ಲಿ ಮೂರು ವಿಭಿನ್ನ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ನಕ್ಷತ್ರ ಮತ್ತು ರಾಕಿ ಎಂಬ ಇನ್ನೆರಡು ವಿಶಿಷ್ಟ ಪಾತ್ರಗಳ ಕಥೆಯೂ ವಿಜಯ್ ಪಾತ್ರಗಳ ಜತೆ ಸಾಗಲಿವೆ ಎಂದು ವಿವರ ಕೊಡುತ್ತಾರೆ ಜನಾರ್ಧನ್.
ಅಂದಹಾಗೆ, ಈ ಚಿತ್ರದ ಚಿತ್ರೀಕರಣಕ್ಕೆ ರಾಜಸ್ಥಾನದಲ್ಲಿ ಒಂದು ಗ್ರಾಮವವನ್ನೇ ಮರು ಸೃಷ್ಟಿಸುವ ಯೋಚನೆ ಚಿತ್ರತಂಡಕ್ಕಿದೆ. ತಮಿಳಿನ ಖ್ಯಾತ ಕಲಾ ನಿರ್ದೇಶ ಬಾಲಚಂದರ್ ಅವರಿಗೆ ಆ ಜವಾಬ್ದಾರಿ ವಹಿಸಲಾಗಿದೆಯಂತೆ. ಅಂದಹಾಗೆ, ‘ಪಿರಂಗಿಪುರ’ ಎಂಬ ಕಾಲ್ಪನಿಕ ಊರನ್ನು ಪಾಕಿಸ್ತಾನದ ಗಡಿಯಿಂದ 40 ಕಿ.ಮೀ. ದೂರದಲ್ಲಿರುವ ಜಾಗದಲ್ಲಿ ಸೃಷ್ಟಿಸಲಾಗಲಿದೆಯಂತೆ. ಇನ್ನು, ಅಂದು ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲು ಆಗಮಿಸಿದ್ದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಹೊಸಬರ ಪ್ರಯತ್ನಕ್ಕೆ ಜಯ ಸಿಗಲಿ ಎಂದು ಶುಭಹಾರೈಸಿದದ ಅವರು, ‘ಈ ಕಥೆ ಕೇಳಿದ್ದೇನೆ. 160 ವರ್ಷಗಳ ಹಿಂದಿನ ಕಾಲಕ್ಕೆ ಜಗ್ಗುವ ಹಾಗೆಯೇ ಇಂದಿನ ವರ್ತಮಾನಕ್ಕೆ ಒಗ್ಗುವ ವಿಶಿಷ್ಟ ಕಥೆ ಮಾಡಿಕೊಂಡಿದ್ದಾರೆ. ಬಹುತೇಕ ರಂಗಭೂಮಿ ಹುಡುಗರು ಇಲ್ಲಿರುವುದರಿಂದ ಚಿತ್ರದ ಮೇಲೆ ವಿಶ್ವಾಸವಿದೆ’ ಎಂದರು ಅವರು. ಸಂಚಾರಿ ವಿಜಯ್ಗೆ ಚಿತ್ರತಂಡ ಶ್ರಮಿಸುತ್ತಿರುವುದನ್ನು ನೋಡಿ, ಅವರಿಗೆ ಪಾತ್ರವನ್ನು ಇನ್ನೂ ಚೆನ್ನಾಗಿ ಕಟ್ಟಿಕೊಡಬೇಕು ಎಂಬ ಛಲ ಹುಟ್ಟಿದೆಯಂತೆ. ಇನ್ನು, ‘ಚಿತ್ರದ ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ಬರುವ ಚೇಸಿಂಗ್ ವಿಶೇಷವಾಗಿರಲಿದೆ. ಉಳಿದದ್ದು ತೆರೆಯ ಮೇಲೆ ನೋಡಿ’ ಎಂದಷ್ಟೇ ಹೇಳಿ ಸುಮ್ಮನಾದರು ವಿಜಯ್. ಶ್ಯಾಮ್ ಎಲ್. ರಾಜ್ ಸಂಗೀತ ನೀಡಿದರೆ, ಅದ್ವೆ„ತ ಗುರುಮೂರ್ತಿ ಛಾಯಾಗ್ರಹಣವಿದೆ. ದಿನೇಶ್ ಸುಬ್ಬರಾಯನ್ ಸಾಹಸ ಚಿತ್ರಕ್ಕಿದೆ. ಇಷ್ಟರಲ್ಲೇ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ