ಬ್ರೈಸ್ ಕಣಿವೆಯ ಬಣ್ಣದ ಶಿಲ್ಪಗಳು


Team Udayavani, Sep 14, 2017, 6:45 AM IST

vismaya.jpg

ಈ ರೋಮಾಂಚಕ ಕಣಿವೆ ಪ್ರದೇಶದ ಅಸ್ತಿತ್ವ ಹೊರಜಗತ್ತಿಗೆ ತಿಳಿದೇ ಇರಲಿಲ್ಲ. ಅದು ಅಜ್ಞಾತವಾಗಿಯೇ ಇತ್ತು. 1850ರಲ್ಲಿ ಎಬೆನೇಜರ್‌ ಬ್ರೈಸ್ ಎಂಬಾತ ತನ್ನ ಹೆಂಡತಿ ಮಕ್ಕಳೊಂದಿಗೆ ಈ ಪ್ರದೇಶದಲ್ಲಿ ಮೊದಲ ಬಾರಿಗೆ ಗುಡಿಸಲು ಕಟ್ಟಿ ನೆಲೆಸಿ ನಿರ್ಮಾನುಷವಾದ ಈ ಸ್ಥಳದಲ್ಲಿ ನಿಸರ್ಗ ಕಡೆದ ಕೆತ್ತನೆಗಳ ವಿಷಯವನ್ನು ಬೆಳಕಿಗೆ ತಂದ. 

ಅಮೆರಿಕದ ಯುಟಾಹ್‌ದಿಂದ 50 ಮೈಲು ದೂರವಿದೆವ ಬ್ರೈಸ್ ಕಣಿವೆ ರಾಷ್ಟ್ರೀಯ ಉದ್ಯಾನವನ. ಅಲ್ಲಿರುವ ರಚನೆಗಳು ಯಾವುದೇ ರಾಜವಂಶದವರ ಪರಿಶ್ರಮದ ಫ‌ಲವಲ್ಲ. ಇಲ್ಲಿನ ಕೋಟೆಗಳು, ಶಿಲ್ಪಗಳೆಲ್ಲವನ್ನೂ ಕೆತ್ತಿರುವುದು ನಿಸರ್ಗವೇ. ಹಿಮಪಾತ ಮತ್ತು ನದಿಯ ರಭಸದ ಪ್ರವಾಹದ ಕೊರೆತ ಇದು ಎರಡರಿಂದಲೇ ಪರ್ವತಗಳ ಮಣ್ಣು ಕೊರೆದುಹೋಗಿ ಶಿಲೆಗಳಲ್ಲಿ ಸೃಷ್ಟಿಯಾದ ಬಿರುಕುಗಳೇ ಒಂದೊಂದು ಬಗೆಯ ಕಲಾರಚನೆಯನ್ನು ಮಾಡಿಬಿಟ್ಟಿವೆ.

35,835 ಎಕರೆ ಪ್ರದೇಶದಲ್ಲಿ ಈ ಉದ್ಯಾನ ಹರಡಿಕೊಂಡಿದೆ. ಅಲ್ಲೊಂದು ಅದ್ಭುತ ರಮ್ಯಲೋಕವೇ ಇದೆ. ಅಲ್ಲಿ ಬಣ್ಣ ಬಣ್ಣದ ಏಕಶಿಲೆಯ ಎತ್ತರೆತ್ತರದ ವೈವಿಧ್ಯಮಯ ಶಿಲ್ಪಗಳಿವೆ, ಹಳ್ಳಗಳಿಗೆ ದೃಢವಾದ ಪುರಾತನ ಸೇತುವೆಗಳಿವೆ. ಕೋಟೆ ಕೊತ್ತಲಗಳಿವೆ, ಕಲಾತ್ಮಕವಾದ ಬುರುಜುಗಳಿವೆ, ಕುಸಿದು ಹೋದ ಪ್ರಾಚೀನ ವಾಸ್ತುಶಿಲ್ಪದ ಮಾದರಿಯ ಕಟ್ಟಡಗಳ ಅವಶೇಷಗಳಿವೆ, ಕಿಟಕಿಗಳಿವೆ, ಹೆಬ್ಟಾಗಿಲುಗಳಿವೆ, ಕೋಟೆಯ ಕಮಾನುಗಳಿವೆ. ಸ್ತಬ್ಧವಾದ ಯಾವುದೋ ಐತಿಹಾಸಿಕ ರಾಜವಂಶದವರು ಒಂದಾನೊಂದು ಕಾಲದಲ್ಲಿ ಇಲ್ಲಿ ರಾಜಾÂಡಳಿತ ಮಾಡಿ ಅನಂತರ ಇಲ್ಲಿಂದ ಬಿಟ್ಟು ಹೋಗಿರಬಹುದೇ ಎಂಬ ಭ್ರಮೆಯನ್ನು ಸೃಷ್ಟಿಸುವ ಇನ್ನೂ ಹಲವು ವಿಶೇಷಗಳಿವೆ.

ಈ ರೋಮಾಂಚಕ ಕಣಿವೆ ಪ್ರದೇಶದ ಅಸ್ತಿತ್ವ ಹೊರಜಗತ್ತಿಗೆ ತಿಳಿದೇ ಇರಲಿಲ್ಲ. ಅದು ಅಜಾnತವಾಗಿಯೇ ಇತ್ತು. 1850ರಲ್ಲಿ ಎಬೆನೇಜರ್‌ ಬ್ರೈಸ್ ಎಂಬಾತ ತನ್ನ ಹೆಂಡತಿ ಮಕ್ಕಳೊಂದಿಗೆ ಈ ಪ್ರದೇಶದಲ್ಲಿ ಮೊದಲ ಬಾರಿಗೆ ಗುಡಿಸಲು ಕಟ್ಟಿ ನೆಲೆಸಿ ನಿರ್ಮಾನುಷವಾದ ಈ ಸ್ಥಳದಲ್ಲಿ ನಿಸರ್ಗ ಕಡೆದ ಕೆತ್ತನೆಗಳ ವಿಷಯವನ್ನು ಬೆಳಕಿಗೆ ತಂದ. ಅನಂತರ ಇಲ್ಲಿ ಸಾಕಷ್ಟು ವೈಜಾnನಿಕ ಅಧ್ಯಯನಗಳು ನಡೆದವು. ಅಮೆರಿಕದ ಸೇನಾಪಡೆಯ ಮೇಜರ್‌ ಜಾನ್‌ ವೆಸ್ಲೆ ಪೋಪೆಲ್‌ 1872ರಲ್ಲಿ ಭೂ ವಿಜಾnನಿಗಳ ತಂಡದೊಂದಿಗೆ ಬಂದು ಸಮೀಕ್ಷೆ ನಡೆಸಿದ್ದ. ಬಳಿಕ ಇಲ್ಲಿ ಜಾನುವಾರುಗಳ ಮೇವಿಗೆ ಇರುವ ಅನುಕೂಲಗಳನ್ನು ಅರಿತು ದನಗಾಹಿಗಳೂ ಬಂದು ಬೀಡುಬಿಟ್ಟರು. 

ಹವಾಮಾನದ ವೈಪರೀತ್ಯದಿಂದಾಗಿ ಇಲ್ಲಿ ನಿಶ್ಚಿಂತವಾದ ಜೀವನ ಸಾಧ್ಯವಿರಲಿಲ್ಲ. 1923ರಲ್ಲಿ ಅಮೆರಿಕದ ಸರಕಾರವು ಇದೊಂದು ರಾಷ್ಟ್ರೀಯ ಉದ್ಯಾನವೆಂದು ಘೋಷಿಸಿತು. ಉದ್ಯಾನವನ್ನು ಹೊರ ಜಗತ್ತಿಗೆ ಪರಿಚಯಿಸಿದ ಬ್ರೈಸ್ನ ಹೆಸರನ್ನೇ ಇಲ್ಲಿಗೆ ಇರಿಸಲಾಯಿತು. 1928ರಲ್ಲಿ ಅದನ್ನು ಅಂದವಾಗಿ ವಿನ್ಯಾಸಗೊಳಿಸಿ ಪ್ರವಾಸಿಗಳ ಆಕರ್ಷಣೆಯ ತಾಣವಾಗಿ ಪರಿವರ್ತಿಸುವ ಕಾರ್ಯಗಳು ಆರಂಭವಾದವು. 1942ರಲ್ಲಿ ಅದಕ್ಕೆ ಹೆಚ್ಚುವರಿಯಾಗಿ 635 ಎಕರೆ ಪ್ರದೇಶವನ್ನು ಸೇರಿಸಲಾಯಿತು.

ವೈಜಾnನಿಕ ಸಮೀಕ್ಷೆಗಳ ನಂಬಿಕೆ ಪ್ರಕಾರ ಬ್ರೆ„ಸ್‌ ಕಣಿವೆಯಲ್ಲಿ 10 ಸಾವಿರ ವರ್ಷಗಳ ಹಿಂದೆ ಜನ ವಸತಿಗಳು ಇದ್ದವು ಎಂಬುದಕ್ಕೆ ಪಾರ್ಕ್‌ನ ದಕ್ಷಿಣ ಭಾಗದಲ್ಲಿರುವ ಕೆಲವು ಶಿಲ್ಪಕಲಾ ರಚನೆಗಳಿಂದ ತಿಳಿದು ಬರುವುದಂತೆ. ಇಲ್ಲಿನ ಮೃದುವಾದ ಬಂಡೆಗಳನ್ನು ನಿಸರ್ಗ ಬೇಕಾಬಿಟ್ಟಿ ಕೊರೆದಿಲ್ಲ. ಹಳ್ಳಗಳ ಮೇಲ್ಭಾಗದಲ್ಲಿ ಅವು ಪುರಾತನ ಸೇತುವೆಯ ಆಕಾರ ತಳೆದಿವೆ. ಬಿದ್ದಿರುವ ರಾಜಮಹಲುಗಳು, ಕಲಾತ್ಮಕವಾದ ಕಿಟಕಿಗಳು, ಪಾವಟಿಕೆಗಳು, ಪ್ರವೇಶದ್ವಾರಗಳು ಇವೆಲ್ಲವೂ ಪುರಾತನ ಅರಸೊತ್ತಿಗೆಯ ಕಾಲದ್ದೆಂಬ ಭ್ರಮೆಯನ್ನೇ ಅದು ಸೃಷ್ಟಿಸಿದೆ. ವೃತ್ತಾಕಾರದ ಒಂದು ಕ್ರೀಡಾಂಗಣ 12 ಮೈಲುದ್ದ, ಮೂರು ಮೈಲು ಅಗಲ, 800 ಅಡಿ ಆಳವಾಗಿದೆ. ಒಂದು ಗೋಡೆ 20 ಮೈಲು ಉದ್ದವಾಗಿ ಹರಡಿದೆ. 200 ಅಡಿಗಿಂತ ಎತ್ತರವಿರುವ ಬುರುಜುಗಳೂ ಇವೆ. ಪಾರ್ಕ್‌ 8ರಿಂದ 9 ಸಾವಿರ ಅಡಿ ಎತ್ತರವಾಗಿದ್ದು ಕೆಲವು ಏಕಶಿಲಾ ರಚನೆಗಳು ಒಂದು ಸಾವಿರ ಅಡಿ ಎತ್ತರ ಇವೆ.

– ರಾಮಕೃಷ್ಣ ಶಾಸ್ತ್ರೀ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.