ಕಾಮಿಡಿ ರಾಜು, ಕನ್ನಡ ಮೀಡಿಯಂ ಹುಡುಗ ಸಿಟಿಗೆ ಬಂದ


Team Udayavani, Oct 13, 2017, 7:40 AM IST

RAJU.jpg

“ರಾಜು ಕನ್ನಡ ಮೀಡಿಯಂ’ ಎಂಬ ಚಿತ್ರವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಅಕ್ಟೋಬರ್‌ 27 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಆದರೂ ಚಿತ್ರತಂಡ ಮಾಧ್ಯಮ ಮುಂದೆ ಬಂದು ಸಿಡಿ ಕೈಯಲ್ಲಿಟ್ಟು ಫೋಟೋಗೆ ಫೋಸ್‌ ಕೊಡುವ ಮೂಲಕ ಆಡಿಯೋ ಬಿಡುಗಡೆ ಶಾಸ್ತ್ರವನ್ನು ಪೂರೈಸಿತು. 

“ಫ‌ಸ್ಟ್‌ ರ್‍ಯಾಂಕ್‌ ರಾಜು’ ಚಿತ್ರದ ಮೂಲಕ ಗುರುತಿಸಿಕೊಂಡ ಗುರುನಂದನ್‌ “ರಾಜು ಕನ್ನಡ ಮೀಡಿಯಂ’ ಚಿತ್ರದ ನಾಯಕ. “ಫ‌ಸ್ಟ್‌ ರ್‍ಯಾಂಕ್‌ ರಾಜು’ ಚಿತ್ರ ನಿರ್ದೇಶಿಸಿದ ನರೇಶ್‌ ಈ ಚಿತ್ರದ ನಿರ್ದೇಶಕರು. “ರಂಗಿತರಂಗ’ದ ಅವಂತಿಕಾ ಶೆಟ್ಟಿ ನಾಯಕಿ. “ಶಿವಲಿಂಗ’ ಚಿತ್ರದ ನಿರ್ಮಿಸಿದ ಕೆ.ಎ. ಸುರೇಶ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇಲ್ಲಿ ನೀವು ಒಂದಂಶವನ್ನು ಗಮನಿಸಬಹುದು. ಮೂರು ಯಶಸ್ವಿ ಸಿನಿಮಾ ತಂಡಗಳು “ರಾಜು ಕನ್ನಡ ಮೀಡಿಯಂ’ ಮೂಲಕ ಒಟ್ಟಾಗಿವೆ. ಅದೇ ಮಾತನ್ನು ನಿರ್ಮಾಪಕ ಸುರೇಶ್‌ ಕೂಡಾ ಹೇಳುತ್ತಾರೆ. “”ಫ‌ಸ್ಟ್‌ ರ್‍ಯಾಂಕ್‌ ರಾಜು’ ಹಿಟ್‌ ಆದ ನಂತರ ಅದೇ ತಂಡದೊಂದಿಗೆ ಸಿನಿಮಾ ಮಾಡಲು ನಿರ್ಧರಿಸಿದೆ. ಅದರ ಪರಿಣಾಮವಾಗಿ “ರಾಜು ಕನ್ನಡ ಮೀಡಿಯಂ ಮೂಡಿಬಂದಿದೆ. ಕಾಮಿಡಿ ಹಿನ್ನೆಲೆಯಲ್ಲಿ ಹೋಗುವ ಒಂದು ಹೊಸ ಬಗೆಯ ಕಥೆ. ಕನ್ನಡ ಮೀಡಿಯಂನಲ್ಲಿ ಓದಿರುವ ಹುಡುಗನೊಬ್ಬ ಜೀವನಕಥೆ ಇದು. ಇಡೀ ಸಿನಿಮಾ ಫ‌ನ್ನಿಯಾಗಿ ಸಾಗುತ್ತದೆ. ಚಿತ್ರದಲ್ಲಿ ಸುದೀಪ್‌ ಅವರು ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ’ ಎನ್ನುತ್ತಾ ಸುದೀಪ್‌ ಅವರಿಗೊಂದು ಥ್ಯಾಂಕ್ಸ್‌ ಹೇಳಿದರು ಸುರೇಶ್‌. ಇನ್ನು, ಚಿತ್ರಕ್ಕೆ ವಿದೇಶಗಳಿಂದಲೂ ಬೇಡಿಕೆ ಬರುತ್ತಿದ್ದು, ಬೇರೆ ಬೇರೆ ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆಯಂತೆ. 

ನಿರ್ದೇಶಕ ನರೇಶ್‌ಗೆ ಈ ಚಿತ್ರ ಕೂಡಾ ತಮ್ಮ “ಫ‌ಸ್ಟ್‌ ರ್‍ಯಾಂಕ್‌ ರಾಜು’ ಚಿತ್ರದಂತೆ “ರಾಜು ಕನ್ನಡ ಮೀಡಿಯಂ’ ಕೂಡಾ ದೊಡ್ಡ ಹಿಟ್‌ ಆಗುವ ವಿಶ್ವಾಸವಿದೆಯಂತೆ. “ಇದು ಕೂಡಾ ಜನರಿಗೆ ಬೇಗನೇ ಕನೆಕ್ಟ್ ಆಗುವ ಕಥೆ. ಒಬ್ಬ ಕನ್ನಡ ಮೀಡಿಯಂ ಹುಡುಗನ ಜೀವನದ ಕಥೆ. ಚಿತ್ರವನ್ನು ತುಂಬಾ ಸಹಜವಾಗಿ ಸಾಗುವ ಕಥೆ ಇದು. ಹಳ್ಳಿ ಹಿನ್ನೆಲೆಯಿಂದ ಬಂದು ಕನ್ನಡ ಮೀಡಿಯಂನಲ್ಲಿ ಓದಿರುವ ಹುಡುಗ ದೊಡ್ಡ ಬಿಝಿನೆಸ್‌ಮ್ಯಾನ್‌ ಆಗುವ ಅಂಶದೊಂದಿಗೆ ಸಾಗುತ್ತದೆ’ ಎಂದು ಚಿತ್ರದ ವಿವರ ನೀಡಿದರು ನರೇಶ್‌.

ನಾಯಕ ಗುರುನಂದನ್‌ ಇಲ್ಲಿ ಕನ್ನಡ ಮೀಡಿಯಂ ಹುಡುಗ. ಕನ್ನಡ ಮೀಡಿಯಂ ಹುಡುಗ ಸಿಟಿಗೆ ಬಂದು ಕಷ್ಟಪಡುವ ಮತ್ತು ಇಂಗ್ಲೀಷ್‌ನಲ್ಲಿ ಪರದಾಡುವ ಅಂಶದೊಂದಿಗೆ ಅವರ ಪಾತ್ರ ಸಾಗುತ್ತದೆಯಂತೆ. ಗುರುನಂದನ್‌ ಓದಿರುವ ಊರು, ಶಾಲೆಯಲ್ಲಿ ಶೂಟಿಂಗ್‌ ಮಾಡಿದ್ದು ಗುರುನಂದನ್‌ಗೆ ಬಾಲ್ಯದ ನೆನಪುಗಳಲ್ಲೇ ಮರುಕಳಿಸಿತಂತೆ. ಚಿತ್ರದಲ್ಲಿ ಬೇರೆ ಬೇರೆ ಗೆಟಪ್‌ಗ್ಳಲ್ಲಿ ಕಾಣಿಸಿಕೊಂಡಿದ್ದರಿಂದ ಆ ತಯಾರಿಗೆ ಸ್ವಲ್ಪ ಸಮಯ ತೆಗೆದುಕೊಂಡಿತಂತೆ. ಚಿತ್ರದಲ್ಲಿ ಆಶಿಕಾ ಕೂಡಾ ನಾಯಕಿಯರಲ್ಲೊಬ್ಬರು. ನಾಯಕನ ಸ್ಕೂಲ್‌ ಡೇಸ್‌ಲವ್‌ನಲ್ಲಿ ಅವರು ಬಂದು ಹೋಗುತ್ತಾರೆ. ಇಂಗ್ಲೀಷ್‌ ಮೀಡಿಯಂದಲ್ಲಿ ಓದಿದ ಆಶಿಕಾಗೆ ಕನ್ನಡ ಶಾಲೆಯಲ್ಲಿ ಚಿತ್ರೀಕರಿಸುವಾಗ ತುಂಬಾ ಆಸಕ್ತಿ ಇತ್ತಂತೆ. ಏಕೆಂದರೆ ಅಲ್ಲಿನ ಮಕ್ಕಳು, ಪಾಠ ಮಾಡುವ ರೀತಿಯನ್ನು ಕುತೂಹಲದಿಂದ ನೋಡಿದ್ದಾಗಿ ಹೇಳಿಕೊಂಡರು. 

ಚಿತ್ರಕ್ಕೆ ರವೀಂದ್ರನಾಥ್‌ ಸಂಗೀತ ನೀಡಿದ್ದಾರೆ. ಹತ್ತು ವರ್ಷಗಳ ಹಿಂದೆ ಕಂಫೋಸ್‌ ಮಾಡಿಟ್ಟುಕೊಂಡಿದ್ದ ಒಂದು ಟ್ಯೂನ್‌ ಅನ್ನು ಇಲ್ಲಿ ಬಳಸಿಕೊಂಡಿದ್ದಾರಂತೆ. ಸಾಕಷ್ಟು ನಿರ್ದೇಶಕರಿಗೆ ಆ ಟ್ಯೂನ್‌ ಕೇಳಿಸಿದ್ದರಂತೆ. ಆದರೆ, ನರೇಶ್‌ ಮಾತ್ರ ಈ ಟ್ಯೂನ್‌ ಅನ್ನು 
“ನನಗೆ ಎತ್ತಿಡಿ’ ಎಂದು 
ಮೂರು ವರ್ಷಗಳ ಹಿಂದೆಯೇ ಹೇಳಿದ್ದರಂತೆ. ಅದನ್ನು ಈಗ ಬಳಸಿಕೊಂಡಿದ್ದಾಗಿ ಹೇಳಿದರು.  ಚಿತ್ರದ ಚಿತ್ರೀಕರಣ ಮೂಡಿಗೆರೆ, ಚಿಕ್ಕಮಗಳೂರು ಹಾಗೂ ವಿದೇಶದಲ್ಲಿ ನಡೆದಿದೆ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.