ಮೂಕ ಹಕ್ಕಿ ಹಾಡುತಿದೆ…


Team Udayavani, Nov 17, 2017, 6:00 AM IST

Mooka-Hakki_(125).jpg

“ನಾವು ಬಿರುಗಾಳಿಗೆ ಎದುರಾಗಿ ನಿಂತ ಬುಡ್ಡಿ ದೀಪವಿದ್ದಂತೆ …’
– ಹೀಗೆ ಹೇಳಿ ಕ್ಷಣಕಾಲ ಸುಮ್ಮನಾದರು ಕಥೆಗಾರ ಮತ್ತು ಸಾಹಿತಿ ಕೋಟಗಾನಹಳ್ಳಿ ರಾಮಯ್ಯ. ಅವರು ಹೇಳಿದ್ದು, “ಮೂಕಹಕ್ಕಿ’ ಚಿತ್ರ ಕುರಿತು. ಹಾಗೆ ಹೇಳ್ಳೋಕೆ ಕಾರಣ, “ಮೂಕ ಜನಾಂಗದ ಕಥೆಯೊಂದು ಚಿತ್ರವಾಗಿ, ಆ ಜನಾಂಗಗಳ ಬದುಕನ್ನು ಅನಾವರಣಗೊಳಿಸುತ್ತಿರುವ “ಮೂಕಹಕ್ಕಿ’ ಎದುರು ಕಮರ್ಷಿಯಲ್‌ ಹೆಸರಿನ ಚಿತ್ರಗಳು ನುಗ್ಗುತ್ತಿವೆ. ಅವೊಂಥರಾ ಬಿರುಗಾಳಿ ಇದ್ದಂತೆ. ನಮ್ಮ “ಮೂಕಹಕ್ಕಿ’ ಬಿರುಗಾಳಿಗೆ ಎದುರಾಗಿ ನಿಂತ ಬುಡ್ಡಿ ದೀಪ ಇದ್ದಂತೆ’ ಎನ್ನುತ್ತಲೇ ಸಿನಿಮಾ ಕುರಿತು ಹೇಳುತ್ತಾ ಹೋದರು ರಾಮಯ್ಯ.

“ಈಗಂತೂ ನಿಜ ಬದುಕು ಮುಖ್ಯವಾಹಿನಿಗೆ ಬರುತ್ತಿಲ್ಲ. ಅದರಲ್ಲೂ ದೃಶ್ಯಮಾಧ್ಯಮದಿಂದ ಬಲು ದೂರವೇ ಉಳಿದಿದೆ. ಲಾಂಗು, ಮಚ್ಚು ಆರ್ಭಟ ಚಿತ್ರಗಳಲ್ಲಿ ನಗರೀಕರಣದ ಬದುಕೇ ಪ್ರತಿನಿಧಿಸುತ್ತಿದೆ. ಕಾರ್ಪೋರೇಟ್‌ ಲೈಫ್ಶೈಲಿಗೆ ಗ್ರಾಮೀಣ ಬದುಕು ಬರಡಾಗಿದೆ. “ಸಂಸ್ಕಾರ’, “ಕಾಡು’ ಮೂಲಕ ಆರಂಭವಾದ ಚಳವಳಿ ಈಗ ಬಲಿಯಾಗಿದೆ. ಅಂತಹ ಸಂವೇದನೆಯನ್ನು ಈಗ ತೆರೆಮೇಲೆ ತರೋದು ಕಷ್ಟವಾಗುತ್ತಿದೆ. ಆದರೂ, ಈಗ ನಿರ್ಮಾಪಕರು ಧೈರ್ಯ ಮಾಡಿ, ಕಾಣದ ಬದುಕಿನ ವೇದನೆಯನ್ನು ತೆರೆಗೆ ತರುತ್ತಿದ್ದಾರೆ. ಇದನ್ನು ಕಲಾತ್ಮಕ ಎಂಬ ವರ್ಗೀಕರಣಕ್ಕೆ ಸೇರಿಸುವಂತಿಲ್ಲ. ನನ್ನ ಪ್ರಕಾರ ಸಿನಿಮಾ, ಸಿನಿಮಾ ಅಷ್ಟೇ. ಇಲ್ಲಿ ಕಥೆ ಕೊಟ್ಟಿದ್ದೇನೆ. ಹಾಡು ಕಟ್ಟಿಕೊಟ್ಟಿದ್ದೇನೆ. ಜನಪದನೀಯ ಚಿತ್ರವಿದು. ಸಹಜ ನಟರೇ ತುಂಬಿದ್ದಾರೆ. ಒಂದು ಜನಾಂಗದ ನೋವನ್ನು ತೆರೆ ಮೇಲೆ ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಈ ಬುಡ್ಡಿದೀಪವನ್ನು ಆರದಂತೆ ನೋಡಿಕೊಳ್ಳೋದು ಜನರ ಜವಾಬ್ದಾರಿ’ ಅಂದರು ರಾಮಯ್ಯ.

ಇಲ್ಲಿ “ತಿಥಿ’ ಖ್ಯಾತಿಯ ಪೂಜಾ ನಾಯಕಿ. ಅವರೇ ಹೇಳುವಂತೆ, “ನಾನು ನಾಯಕಿ ಅಲ್ಲ, ನಟಿಯಷ್ಟೇ. ನನ್ನ ವೃತ್ತಿ ಬದುಕಿನ ಅತಿ ಮುಖ್ಯವಾದ ಚಿತ್ರವಿದು. ನಾನಿಲ್ಲಿ ಗೌರಿ ಪಾತ್ರ ನಿರ್ವಹಿಸಿದ್ದೇನೆ. ಇಲ್ಲಿ ಮತ್ತೂಂದು ಹೊಸ ಇಮೇಜ್‌ ಸಿಗುವ ನಿರೀಕ್ಷೆ ನನ್ನದು. ಇಲ್ಲಿ ಎಲ್ಲರೂ ಹೊಸದೇನನ್ನೋ ಪ್ರಯೋಗ ಮಾಡಿದ್ದಾರೆ. ಅದನ್ನು ಜನ ಸ್ವೀಕರಿಸುತ್ತಾರೆಂಬ ವಿಶ್ವಾಸ ನನ್ನದು’ ಅಂದರು ಪೂಜಾ. ರಂಗಭೂಮಿ ಕಲಾವಿದ ಸಂಪತ್‌ಗೆ ಇಲ್ಲೊಂದು ವಿಶೇಷ ಪಾತ್ರವಿದೆಯಂತೆ.

“ಒಂದು ಜನಾಂಗದ ಪರಂಪರೆ ಬಿಂಬಿಸುವ ಚಿತ್ರ ಇದಾಗಿರುವುದರಿಂದ, ಇಲ್ಲಿ ಅಲೆಮಾರಿ ಜನಾಂಗವನ್ನು ಪ್ರತಿನಿಧಿಸುವ ಪಾತ್ರ ಮಾಡಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿಯೂ ನಡೆದಿದೆ. ರಾಮಯ್ಯ ಅವರು ಕಥೆ ಬರೆಯುತ್ತಾರೆ ಅಂದಾಗ ಖುಷಿಯಾಯ್ತು. ಅವರು ಅದ್ಯಾವುದೋ ಬೆಟ್ಟದಲ್ಲಿದ್ದರು. ಅವರನ್ನು ಹುಡುಕಿ ಹೋಗಿ ಕಥೆ, ಚಿತ್ರಕಥೆ ಬಗ್ಗೆ ಚರ್ಚಿಸಿದ್ದೇವೆ. ಕೋಲೆ ಬಸವ, ಹಾವಾಡಿಗರು ಇತ್ಯಾದಿ ಜನಪದ ವ್ಯಕ್ತಿಗಳು ಸುಗ್ಗಿ ಕಾಲದಲ್ಲಿ ಹಳ್ಳಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈಗ ಆ ಜನಾಂಗ ಮರೆಯಾಗುತ್ತಿದೆ. ಅಂಥದ್ದೊಂದು ಕಥೆ ಇಲ್ಲಿದೆ’ ಎಂದರು ಸಂಪತ್‌.

ಸಂಗೀತ ನಿರ್ದೇಶಕ ಮಣಿಕಾಂತ್‌ ಕದ್ರಿ, ಛಾಯಾಗ್ರಹಕ ಚಿದಾನಂದ್‌, ನಿರ್ಮಾಪಕಿ ಚಂದ್ರಕಲಾ, ನಿರ್ದೇಶಕ ನೀನಾಸಂ ಮಂಜು ಮುಂತಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಟಾಪ್ ನ್ಯೂಸ್

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ

Madikeri; ಅಯ್ಯಂಗೇರಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

PM ಮೋದಿಯಿಂದ ಚುನಾವಣ ಗಿಮಿಕ್‌: ವಿನಯ ಕುಮಾರ್‌ ಸೊರಕೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

ಇಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕಾಸರಗೋಡಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.