ಬಿರಿಯಾನಿ + ಚಿತ್ರಾನ್ನ = ಉಮಬಾ, ಮತ್ತೆ ಬಂದವರ ಹಾಡುಗಳು


Team Udayavani, Nov 17, 2017, 6:00 AM IST

BADAVARA-HADU.jpg

ವೇದಿಕೆ ತುಂಬಾ ಜನ. ಹಾಗಾಗಿ ಈ ಸಮಾರಂಭ ಮುಗಿಯುವುದಕ್ಕೆ ಎಷ್ಟು ಹೊತ್ತಾಗಬಹುದೋ? ಯಾರು ಎಷ್ಟೆಲ್ಲಾ ಮಾತಾಡಬಹುದೋ? ಎಂಬ ಭಯ ಎಲ್ಲರನ್ನೂ ಕಾಡುತಿತ್ತು. ಆದರೆ, ಚಿತ್ರದ ಮೇಕಿಂಗ್‌ ವೀಡಿಯೋ ತೋರಿಸಿದಷ್ಟು ಹೊತ್ತು ಕೂಡಾ ಯಾರೂ ಮಾತಾಡಲಿಲ್ಲ. ಸಮಾರಂಭ ಎಷ್ಟು ತಡವಾಗಿ ಪ್ರಾರಂಭವಾಯಿತೋ, ಅಷ್ಟೇ ಬೇಗ ಮುಗಿದೂ ಹೋಗಿತ್ತು. ಅಂದಹಾಗೆ, ಅದು “ಉಪೇಂದ್ರ ಮತ್ತೆ ಬಾ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಹಾಡುಗಳು ಯಾವಾಗಲೋ ಬಿಡುಗಡೆಯಾಗಿವೆ. ಆದರೆ, ಹಾಡುಗಳ ಬಿಡುಗಡೆ ನೆಪದಲ್ಲಿ ಮಾಧ್ಯಮದವರೊಂದಿಗೆ ಒಂದಿಷ್ಟು ಚಿತ್ರದ ಬಗ್ಗೆ ಹೇಳ್ಳೋಣ ಎಂದು ಚಿತ್ರತಂಡದವರು ಬಂದಿದ್ದರು.

ಮೊದಲು ಮಾತನಾಡಿದ್ದು ಹರ್ಷಿಕಾ ಪೂಣಾತ್ಛ. ಅವರು ಕೊಚ್ಚಿಗೆ ಹೊರಡುವ ಆತರದಲ್ಲಿದ್ದರು. ಫ್ಲೈಟು 10ಕ್ಕಿದೆ. ಸಮಯ ಆಗಲೇ ಎಂಟಾಗಿದೆ. ಹಾಗಾಗಿ ಅವರು ಮೊದಲು ಮಾತಾಡಿದರು. ಉಪೇಂದ್ರ ಅವರಿಗೆ ಥ್ಯಾಂಕ್ಸ್‌ ಹೇಳುತ್ತಲೇ ಅವರು ಮಾತು ಶುರು ಮಾಡಿದರು. “ಉಪೇಂದ್ರ ಅವರ ಜೊತೆಗೆ ಅಭಿನಯ ಮಾಡಿದ್ದೇ ಮರೆಯದ ಅನುಭವ. ಇನ್ನು ಪ್ರೇಮ ನಮ್ಮ ಕೊಡಗಿನವರು. ಅವರು ಚಿತ್ರರಂಗದಲ್ಲಿ ಬೆಳೆದಷ್ಟು ಬೆಳೆಯುವಾಸೆ. ಚಿತ್ರದಲ್ಲಿ ಒಳ್ಳೆಯ ಹಾಡುಗಳಿವೆ. ನಾನು ಹಳ್ಳಿ ಹುಡುಗಿಯಾಗಿ ನಟಿಸಿದ್ದೇನೆ. ಚಿತ್ರದಲ್ಲಿ ನನ್ನದು ಉಪೇಂದ್ರ ಅವರ ಅತ್ತೆ ಮಗಳ ಪಾತ್ರ. ಇದು ನನ್ನ ಚಿತ್ರಜೀವನದಲ್ಲೇ ಬೆಸ್ಟ್‌ ಪಾತ್ರ’ ಎಂದು ಓಡಿದರು.

ಪ್ರೇಮ ಅವರು ಇದೇ ಮೂರನೆಯ ಬಾರಿಗೆ ಉಪೇಂದ್ರರ ಜೊತೆಗೆ ಕೆಲಸ ಮಾಡುತ್ತಿದ್ದಾರೆ. “ಬಹಳ ಒಳ್ಳೆಯ ಪಾತ್ರ ಸಿಕ್ಕಿತ್ತು. ಉಪೇಂದ್ರ ಅವರ ಜೊತೆಗೆ ಇದು ನನ್ನ ಮೂರನೆಯ ಚಿತ್ರ. ಚಿತ್ರ ಚೆನ್ನಾಗಿ ಬಂದಿದೆ ಎಂಬ ನಂಬಿಕೆ ಇದೆ. ಪ್ರೇಕ್ಷಕರು ಯಾವ ತೀರ್ಪು ಕೊಡುತ್ತಾರೆ ಎಂಬ ಕುತೂಹಲ ಇದೆ. ಎಲ್ಲರಿಗೂ ಥ್ಯಾಂಕ್ಸ್‌’ ಎಂದು ಮಾತು ಮುಗಿಸಿದರು.
ಇದೊಂದು ಅದ್ಭುತ ಸಿನಿಮಾ ಎಂದು ನೀವೇ ಹೇಳುತ್ತೀರಾ ಅಂತಲೇ ಮಾತು ಪ್ರಾರಂಭಿಸಿದರು ಉಪೇಂದ್ರ. “ಎಲ್ಲಾ ಅಂಶಗಳಿರುವ ಕಮರ್ಷಿಯಲ್‌ ಚಿತ್ರ ಇದು. ಬಿರಿಯಾನಿ ಬಯಸುವವರಿಗೆ ಬಿರಿಯಾನಿಯೂ ಸಿಗುತ್ತದೆ. ಚಿತ್ರಾನ್ನ ಬೇಕು ಎನ್ನುವವರಿಗೆ ಚಿತ್ರಾನ್ನವೂ ಸಿಗುತ್ತದೆ. ಒಟ್ಟಿನಲ್ಲಿ ಇಡೀ ಕುಟುಂಬ ನೋಡಬಹುದಾದಂತಹ ಸಿನಿಮಾ. ನಿರ್ದೇಶಕ ಲೋಕಿ ಮತ್ತು ಪ್ರೇಮ ಒಳ್ಳೆಯ ಸ್ನೇಹಿತರು. ಜಗಳ ಮಾಡಿಕೊಂಡೇ ಜೊತೆಗಿದ್ದರು. ಶ್ರೀಧರ್‌ ಸಂಭ್ರಮ್‌ ಒಳ್ಳೆಯ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಅದರಲ್ಲಿ ಒಂದು ಸೂಪರ್‌ ಹಿಟ್‌ ಆಗಿದೆ. ಈ ಚಿತ್ರದಿಂದ ನಿರ್ಮಾಪಕರಿಗೆ ಒಳ್ಳೆಯದಾಗಲಿ’ ಎಂದರು.

ಇನ್ನು ಉಳಿದವರೆಲ್ಲಾ ಒಂದೊಂದೇ ಮಾತಾಡಿ ಪತ್ರಿಕಾಗೋಷ್ಠ ಮುಗಿಸಿದರು.

ಟಾಪ್ ನ್ಯೂಸ್

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.