ಚಂದಾದಾರರು ಫ್ರೀಯಾಗಿ ಮಾತಾಡಿದರು!


Team Udayavani, Nov 17, 2017, 6:00 AM IST

chandadararu.jpg

ಅದ್ಯಾರೋ ತಾರಾ ತರಹ ಕಾಣುತ್ತಾರಲ್ಲ ಎಂದು ಎಲ್ಲರೂ ದೂರದಲ್ಲಿ ಬರುತ್ತಿದ್ದವರನ್ನೇ ನೋಡುತ್ತಿದ್ದರು. ಹತ್ತಿರ ಬರುತ್ತಿದ್ದಂತೆಯೇ, ಅವರು ತಾರಾ ತರಹ ಕಾಣೋದಷ್ಟೇ ಅಲ್ಲ, ಅದು ತಾರಾನೇ ಎಂದು ಎಲ್ಲರಿಗೂ ಸ್ಪಷ್ಟವಾಯಿತು. ಹಾಗೆ ಹತ್ತಿರ ಬಂದ ತಾರಾ, ವಿಶ್‌ ಮಾಡಿ, ಮೊದಲ ಶಾಟ್‌ ಮುಗಿಸಿ ಬರುತ್ತೀನಿ ಎಂದರು ಹೋದರು. ಮತ್ತೆ 10 ನಿಮಿಷ ಮೌನ. ಅಷ್ಟರಲ್ಲಿ ಶ್ರುತಿ ಬಂದರು. ಇನ್ನೊಂದು ಕಡೆಯಿಂದ ದೇವರಾಜ್‌ ಬಂದರು. 10 ನಿಮಿಷ ಅವರ ಜೊತೆಗೆ ಮಾತಾಗುತ್ತಿದ್ದಂತೆಯೇ, ತಾರಾ, ನಿರ್ದೇಶಕ ಸ್ಯಾಮ್ಯುಯಲ್‌ ಎಲ್ಲರೂ ಬಂದು ಸೇರಿಕೊಂಡರು.

“ನೀವು ಕರೆ ಮಾಡಿದ ಚಂದಾದಾರರು ಬ್ಯುಸಿಯಾಗಿದ್ದಾರೆ’ ಎಂಬ ಚಿತ್ರದ ಮುಹೂರ್ತ ಸಮಾರಂಭ ಅದು. ಕಂಠೀರವ ಸ್ಟುಡಿಯೋದಲ್ಲಿ ಸರಳವಾಗಿ ಚಿತ್ರ ಶುರುವಾಯಿತು. ಈ ಚಿತ್ರದಲ್ಲಿ ದೇವರಾಜ್‌, ತಾರಾ, ಶ್ರುತಿ, ಭವ್ಯ, “ತಿಥಿ’ ಪೂಜಾ, ನಿರಂಜನ್‌ ದೇಶಪಾಂಡೆ ಮುಂತಾದವರು ನಟಿಸುತ್ತಿದ್ದು, “ದೂಧ್‌ ಸಾಗರ್‌’ ನಿರ್ದೇಶಿಸಿದ್ದ ಸ್ಯಾಮ್ಯುಯಲ್‌ ಟೋನಿ ನಿರ್ದೇಶಿಸುತ್ತಿದ್ದಾರೆ. ಮಧುಸೂಧನ್‌ ಎನ್ನುವವರು ಈ ಚಿತ್ರದ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.

ಇದೊಂದು ಭಾವನಾತ್ಮಕ ಚಿತ್ರ ಎಂದೇ ತಮ್ಮ ಮಾತು ಶುರು ಮಾಡಿದರು ಸ್ಯಾಮ್ಯುಯಲ್‌. “ಸಾಮಾನ್ಯವಾಗಿ ಫೋನ್‌ ಮಾಡುವ ಸಂದರ್ಭದಲ್ಲಿ, “ನೀವು ಕರೆ ಮಾಡಿದ ಚಂದಾದಾರರು’ ಎಂಬ ಮಾತು ಕೇಳಿರುತ್ತೀರಿ. ಅದೇ ವಿಷಯವನ್ನಿಟ್ಟುಕೊಂಡು ಆಳವಾಗಿ ಹೋದಾಗ, ಒಂದೊಳ್ಳೆಯ ಕಥೆ ಸಿಕ್ಕಿತು. ಮನುಷ್ಯ ಬಿಝಿಯಾಗೋದು ತಪ್ಪಲ್ಲ. ಆದರೆ, ಏನಾಗುತ್ತಿದ್ದೀವಿ ಎಂದು ಹೇಳುವುದಕ್ಕೆ ಹೊರಟಿದ್ದೀವಿ. ಈ ಚಿತ್ರದಲ್ಲಿ ದೇವರಾಜ್‌, ತಾರಾ, ಶ್ರುತಿ ಮೂವರಿಗೂ ಬೇರೆ ತರಹದ ಗೆಟಪ್‌ಗ್ಳಿರುತ್ತವೆ. ದೇವರಾಜ್‌ ಅವರ ಹೇರ್‌ಸ್ಟೈಲ್‌ ಮತ್ತು ದಾಡಿಗೆಂದೇ ಮುಂಬೈನಿಂದ ಹೇರ್‌ಸ್ಟೈಲಿಸ್ಟ್‌ಗಳನ್ನು ಕರೆಸುತ್ತಿದ್ದೇವೆ. ಇನ್ನು ಶ್ರುತಿ ಅವರ ಚಿತ್ರಗಳನ್ನು ಸ್ಟಡಿ ಮಾಡಿ, ಒಂದೊಳ್ಳೆಯ ಪಾತ್ರ ಸೃಷ್ಟಿಸಿದ್ದೇವೆ. ಅವರ ಪಾತ್ರ ನೋಡುಗರೆಲ್ಲರನ್ನೂ ಕಾಡುತ್ತೆ’ ಎಂದರು ಸ್ಯಾಮ್ಯುಯಲ್‌.

ಈ ಚಿತ್ರಕ್ಕೆ ತಾವು ಹೀರೋ ಅಲ್ಲ, ಎಲ್ಲಾ ಪಾತ್ರಗಳು ಸಹ ಮುಖ್ಯ ಎಂದರು ದೇವರಾಜ್‌. “ಇಲ್ಲಿ ಹೊಸತನ ಇದೆ. ನಿರ್ದೇಶಕರು ನನ್ನ ಪಾತ್ರಕ್ಕೆ ಬೇರೆ ರೂಪ ಕೊಡುತ್ತಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದರೂ, ಡ್ಯುಯೆಟ್‌ ಇಲ್ಲ. ಅದರ ಬದಲು ಒಳ್ಳೆಯ ಸನ್ನಿವೇಶಗಳಿವೆ. ವಯಸ್ಸಿಗೆ ತಕ್ಕ ಪಾತ್ರ ಮಾಡುತ್ತಿದ್ದೇನೆ. ಈ ವಯಸ್ಸಿನಲ್ಲಿ ಒಂಟಿತನ ಕಾಡಿ, ಸ್ನೇಹವನ್ನು ಹುಡುಕಿ ಹೋದಾಗ ಏನೆಲ್ಲಾ ಆಗುತ್ತದೆ ಎನ್ನುವುದೇ ಚಿತ್ರದ ಕಥೆ. ಬಹಳ ಒಳ್ಳೆಯ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಒಳ್ಳೇ ತಂಡ ಸಹ ಇದೆ. ಒಟ್ಟಾರೆ. ಇದೊಂದು ಹೊಸ ಪೀಳಿಗೆಯ ಚಿತ್ರವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು ದೇವರಾಜ್‌.

ಶ್ರುತಿ ಅವರಿಗೆ ನಿರ್ದೇಶಕರು ಕಥೆ ಹೇಳಿದಾಗ, ಅದರಲ್ಲಿ ಒಂದು ಪಾತ್ರ ತಾನು ಮಾಡಿದರೆ ಚೆಂದ ಎಂದನಿಸಿತಂತೆ ಶ್ರುತಿ ಅವರಿಗೆ. ನಿರ್ದೇಶಕರು ಸಹ ಅದೇ ಪಾತ್ರ ಕೊಟ್ಟಾಗ ಇನ್ನಷ್ಟು ಖುಷಿಯಾಯಿತಂತೆ. “ಚಿಕ್ಕ ಪಾತ್ರವಾದರೂ, ಪ್ರಮುಖವಾದ ಪಾತ್ರ. ಇದೊಂದು ಪ್ರಯೋಗಾತ್ಮಕ ಚಿತ್ರವಾಗಲಿದೆ. ದೇವರಾಜ್‌ ಅವರ ಜೊತೆಗೆ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲೂ ತುಂಬಾ ಕಲೀತೀನಿ ಎಂಬ ನಂಬಿಕೆ ಇದೆ’ ಎಂದರು ಶ್ರುತಿ. ತಾರಾ ಅವರಿಗೆ ಈ ಚಿತ್ರದ ಬಗ್ಗೆ ಗೊತ್ತಾಗಿದ್ದು, ದೇವರಾಜ್‌ ಜೊತೆಗೆ “ಹೆಬ್ಬೆಟ್ಟ್ ರಾಮಕ್ಕ’ ಎಂಬ ಚಿತ್ರದಲ್ಲಿ ನಟಿಸುವಾಗಲಂತೆ. ಆ ನಂತರ ತಾರಾ ಅವರಿಗೂ ನಿರ್ದೇಶಕರು ಒಂದು ಪಾತ್ರ ಕೊಟ್ಟಿದ್ದಾರೆ. ಇಂಥದ್ದೊಂದು ಚಿತ್ರವನ್ನು ಮಿಸ್‌ ಮಾಡಬಾರದು ಎಂಬ ಕಾರಣಕ್ಕೆ ತಾರಾ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರಂತೆ.

ನಂತರ ಪೂಜಾ, ನಿರಂಜನ್‌, ಸಂಗೀತ ನಿರ್ದೇಶಕ ಮನು ಜಾರ್ಜ್‌ ಮುಂತಾದವರು ಎರಡೆರೆಡು ಮಾತುಗಳನ್ನಾಡಿದರು.

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.