ಚಮಕ್‌ ಕೊಡೋಕೆ ಬಂದವರ ಕಥೆ!


Team Udayavani, Dec 8, 2017, 6:40 AM IST

chamak.jpg

ಅಲ್ಲಿಗೆ ಸುಮಾರು ಒಂದುವರೆ ತಾಸಿನ ಪಯಣ. ಅಷ್ಟು ದೂರದ ಸ್ಥಳಕ್ಕೆ ಹೋಗುವ ಹೊತ್ತಿಗೆ, ಅರ್ಧ ಕಾರ್ಯಕ್ರಮವೇ ಮುಗಿದಿತ್ತು. ಜೈಕಾರ, ಕೂಗಾಟ, ಚೀರಾಟದ ನಡುವೆ ಕಾರ್ಯಕ್ರಮ ಮುಂದುವರೆದಿತ್ತು. ವೇದಿಕೆ ಮೇಲೆ ಬಂದವರು ಹೇಳಿದ್ದು ಮೂರ್‍ನಾಲ್ಕು ಮಾತು. ಅಷ್ಟಕ್ಕಾಗಿಯೇ ಅಷ್ಟು ದೂರ ಬರಬೇಕಿತ್ತಾ? ಎಂಬ ಬೇಸರದಲ್ಲೇ ಪತ್ರಕರ್ತರು ವೇದಿಕೆ ಮುಂದೆ ಕುಳಿತುಕೊಳ್ಳಬೇಕಾಯ್ತು. ರಶ್ಮಿಕಾ ಮಂದಣ್ಣ ವೇದಿಕೆಗೆ ಬಂದಾಗ ಮತ್ತದೇ ಕೇಕೆ, ಚಪ್ಪಾಳೆಗಳ ಸದ್ದು. ಕೈಗೆ ಮೈಕ್‌ ಹಿಡಿದ ಕನ್ನಡದ ನಟಿಯ ಬಾಯಲ್ಲಿ ಕನ್ನಡ ಬದಲು ಇಂಗ್ಲೀಷ್‌ ಮಾತುಗಳೇ ಹರಿದಾಡಿದವು. ನಿರೂಪಕ ಕನ್ನಡದಲ್ಲಿ ಪ್ರಶ್ನೆ ಕೇಳುತ್ತಾ ಹೋದಂತೆ, ಅವರು ಇಂಗ್ಲೀಷ್‌ನಲ್ಲೇ ಉತ್ತರಿಸುತ್ತಾ ಹೋದರು. ಪಾತ್ರದ ಬಗ್ಗೆ ಹೆಚ್ಚೇನೂ ಹೇಳದ ರಶ್ಮಿಕಾ ಮಂದಣ್ಣ, ಒಳ್ಳೆಯ ಮನರಂಜನೆ ಚಿತ್ರವಿದು, ನಾನು ಯಾರಿಗೂ ಇದುವರೆಗೆ “ಚಮಕ್‌’ ಕೊಟ್ಟಿಲ್ಲ’ ಎಂದಷ್ಟೇ ಹೇಳಿ ವೇದಿಕೆಯಿಂದ ಕೆಳಗಿಳಿದರು.

“ಜೂಮ್‌’ ಹಾಡಿಗೆ ಹೆಜ್ಜೆ ಹಾಕುತ್ತಲೇ ವೇದಿಕೆಗೆ ಬಂದ ಗಣೇಶ್‌, “ಸುನಿ ಒಂದು ಟೀಸರ್‌ ಬಿಟ್ಟರು. ನನ್‌ ಫ್ರೆಂಡ್ಸ್‌ ರೇಗ್ಸೋಕೆ ಶುರು ಮಾಡಿದರು. ಗಣಿ, ಯಾವಾಗ ಲೈಟ್‌ ಆಫ್ ಮಾಡ್ತೀಯೋ ಅಂತಿದ್ದಾರೆ. ಅದೇನೆ ಇರ್ಲಿ, ಇದೊಂದು ಮಜವಾದ ಚಿತ್ರ. ಎಲ್ಲರಿಗೂ ಹಂಡ್ರೆಡ್‌ ಪರ್ಸೆಂಟ್‌ ಮನರಂಜನೆ ಕೊಡುತ್ತೆ. “ಚಮಕ್‌’ ಹೆಸರಲ್ಲಿ ನಾನು ಕಿರುತೆರೆಯಲ್ಲಿ ನೂರಾರು ಎಪಿಸೋಡ್‌ ಕಾರ್ಯಕ್ರಮ ನಡೆಸಿದ್ದೇನೆ. ಈಗ ಅದೇ ಹೆಸರಿನಲ್ಲಿ ಚಿತ್ರವಾಗಿದೆ. ಇಲ್ಲಿ ಎಲ್ಲವೂ ಚೆನ್ನಾಗಿದೆ. ನನಗೆ ಜ್ಯೂಡ ಸ್ಯಾಂಡಿ ಸಂಗೀತ ಇಷ್ಟ. ಅದರಲ್ಲೂ “ಅರೇ ಅರೇ’ ಹಾಡು ನನ್ನ ಫೇವರೇಟ್‌’ ಅಂತ ಹೇಳಿ ಸುಮ್ಮನಾದರು.

ನಿರ್ದೇಶಕ ಸುನಿ ಅಂದು ಗೊಂದಲದಲ್ಲಿದ್ದರು. ಎಲ್ಲಾ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡಿದ್ದರಿಂದ ಅತ್ತಿಂದಿತ್ತ ಓಡಾಡಿಕೊಂಡಿದ್ದರು. ವೇದಿಕೆ ಮೇಲೇರಿದ ಸುನಿ, “ನಾನೂ “ಚಮಕ್‌’ ಕೊಟ್ಟಿದ್ದೇನೆ. ಅಮ್ಮನಿಗೆ ಆಫೀಸ್‌ನಲ್ಲಿದ್ದೀನಿ ಅಂತ ಹೇಳಿ ಗರ್ಲ್ಫ್ರೆಂಡ್‌ ಜತೆಗಿರುತ್ತಿದ್ದೆ. ಗರ್ಲ್ಫ್ರೆಂಡ್‌ಗೆ ಆಫೀಸ್‌ನಲ್ಲಿದ್ದೀನಿ ಅಂತ ಹೇಳಿ ಅಮ್ಮನ ಜೊತೆ ಇರುತ್ತಿದ್ದೆ. ಇನ್ನು, ಈ ಶೀರ್ಷಿಕೆ ಕೊಟ್ಟಿದ್ದು ಗಣೇಶ್‌ ಸರ್‌. ಮೊದಲ ಚಿತ್ರಕ್ಕೆ “ಖುಷ್‌ ಖುಷಿ’ ಅಂತ ನಾಮಕರಣ ಮಾಡಿದ್ದೆ. ರಕ್ಷಿತ್‌, “ಸಿಂಪಲ್ಲಾಗೊಂದ್‌ ಲವ್‌ಸ್ಟೋರಿ’ ಇಡೋಣ ಅಂದರು. ಆಮೇಲೆ “ಖುಷ್‌ ಖುಷೀಲಿ’ ಅಂತ ಹೆಸರಿಟ್ಟು ಸಿನಿಮಾ ಮಾಡೋಕೆ ಹೊರಟೆ. ನಿರ್ಮಾಪಕ ಅಶು ಬೆದ್ರ ಅವರು, “ಸಿಂಪಲ್ಲಾಗ್‌ ಇನ್ನೊಂದ್‌ ಲವ್‌ಸ್ಟೋರಿ’ ಅಂತ ಇಡೋಣವೆಂದರು. “ಚಮಕ್‌’ ಚಿತ್ರಕ್ಕೂ “ಖುಷ್‌ ಖುಷೀಲಿ’ ಇಟ್ಟಿದ್ದೆ. ಗಣೇಶ್‌ ಸರ್‌, ಚಿತ್ರದ ನಾಯಕ ಇಲ್ಲಿ ಎಲ್ಲರಿಗೂ ಚಮಕ್‌ ಕೊಡ್ತಾನೆ. “ಚಮಕ್‌’ ಅಂತ ಇಡೋಣ ಅಂದರು. ಅದೇ ಫಿಕ್ಸ್‌ ಆಯ್ತು’ ಅಂತ ವಿವರಿಸಿದರು. 

ಗಣೇಶ್‌ ಅವರಿಲ್ಲಿ ತುಂಬಾ ಸ್ಟೈಲಿಷ್‌ ಆಗಿ ಕಾಣಾ¤ರೆ. ಚಿತ್ರ ಕೂಡ ತುಂಬಾನೇ ವಿಭಿನ್ನವಾಗಿದೆ. ಈಗಿನ ಯೂತ್ಸ್ಗೆ ಪಕ್ಕಾ ಸಿನಿಮಾ ಇದು. ವಿಶೇಷವೆಂದರೆ, ಐದು ಹಾಡುಗಳನ್ನೂ ಹೊಸಬರೇ ಬರೆದಿದ್ದಾರೆ ಅಂತ ಹೇಳುವ ಹೊತ್ತಿಗೆ ಸಮಯ ಮೀರಿತ್ತು. ಅದರ ನಡುವೆ ಸಂಗೀತ ನಿರ್ದೇಶಕ ಜ್ಯೂಡ ಸ್ಯಾಂಡಿ ತಮ್ಮ ಗಾಯಕರ ಜತೆ ಹಾಡಿ, ರಂಜಿಸಿದರು. ಇದೇ ವೇಳೆ “ಅರ್ಜುನ್‌ ರೆಡ್ಡಿ’ ಚಿತ್ರದ ನಾಯಕ ವಿಜಯ್‌ ದೇವರಕೊಂಡ ವೇದಿಕೆಗೆ ಬಂದರು. ಎಲ್ಲರ ಜೊತೆಗೂಡಿ ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು. ನಿರ್ಮಾಪಕ ಚಂದ್ರಶೇಖರ್‌ ಮತ್ತು ಚಿತ್ರತಂಡ ಸುಕ್ರಿ ಬೊಮ್ಮೇಗೌಡ ಅವರನ್ನು ಸನ್ಮಾನಿಸಿತು.

– ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.